ವಿಜಯಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ ಆರೋಪದಡಿಯಲ್ಲಿ ಮೂರು ಮಕ್ಕಳ ತಂದೆಯಾಗಿರುವ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗೋನಾಳ್ ನ ದ್ಯಾಮಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದೆ. ನೆಟ್ಟಗೆ ಸಂಸಾರ ಮಾಡಿಕೊಂಡಿರುವ ಬದಲು ಹೈಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ ಈತ ಆಕೆಯ ಹಿಂದೆ ಬಿದ್ದಿದ್ದ, ಪ್ರೀತಿಸುವಂತೆ ಪೀಡಿಸುತ್ತಿದ್ದ.
ಪ್ರೀತಿ ಹೆಸರಿನಲ್ಲಿ ಹೈಸ್ಕೂಲ್ ಹುಡುಗಿಯನ್ನು ಅಪಹರಿಸಿದ ಕಿರಾತಕ
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಅಂಕಲ್ ಪ್ರೇಮ ನೀವೇದನೆಯನ್ನು ಹುಡುಗಿ ತಿರಸ್ಕರಿಸಿದಾಗ, ಪ್ರೀತಿ ಮಾಡದಿದ್ರೆ ತಂದೆ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಹೀಗಾಗಿ ಭಯ ಪಟ್ಟ ಹುಡುಗಿ ದ್ಯಾಮಣ್ಣನ ಪ್ರೀತಿಗೆ ಒಪ್ಪಿದ್ದಾಳೆ. ಒಂದು ವೇಳೆ ಮನೆಯಲ್ಲಿ ಹೇಳಿದ್ರೆ ಎಲ್ಲಿ ಶಾಲೆ ಬಿಡಿಸುತ್ತಾರೋ ಅನ್ನುವ ಭಯ ಆಕೆಗಿತ್ತು.ಈ ಕಾರಣದಿಂದ ಕಳದ ಎರಡು ವರ್ಷದಿಂದ ಪ್ರೀತಿಯ ಕಣ್ಣಾ ಮುಚ್ಚಾಲೆ ನಡೆಯುತಿತ್ತು. ಈ ನಡುವೆ 12 ದಿನಗಳ ಹಿಂದೆ ಶೌಚಾಲಯಕ್ಕೆಂದು ಬಾಲಕಿ ಹೊರಗಡೆ ಹೋಗಿದ್ದ ವೇಳೆ ಬಾಲಕಿಯನ್ನೇ ತನ್ನ ಕಾರಿನಲ್ಲೇ ದ್ಯಾಮಣ್ಣ ಅಪಹರಿಸಿದ್ದಾನೆ. ಇದಾದ ಬಳಿಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ತಾಳಿಕೋಟೆ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಇದೀಗ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಹೀಗಾಗಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Discussion about this post