ದೇಶದಲ್ಲಿ ರಾಕ್ಷಸರ ಹಾವಳಿ ಇನ್ನೂ ನಿಂತಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಿಕ್ಷೆಯಾಗದ ಹೊರತು ನೆಮ್ಮದಿ ಇಲ್ಲ ( Nupur sharma)
ಮುಂಬೈ : ನೂಪುರ್ ಶರ್ಮಾ (Nupur sharma) ಪರ ದನಿ ಎತ್ತಿದವರ ಮೇಲೆ ಹಲ್ಲೆ ನಡೆಸುವ ಕಾರ್ಯ ಮತ್ತೆ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಉಮೇಶ್ ಕೋಲ್ಹೆ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಮುಂಬೈನಲ್ಲಿ ಮತ್ತೊಂದು ದಾಳಿಯಾಗಿದೆ.
ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಕರ್ಜತ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಗುರುವಾರ 10 ರಿಂದ 15 ಮಂದಿಯ ಗುಂಪು ಪ್ರತೀಕ್ ಆಲಿಯಾಸ್ ಪವಾರ್ (Prateek Pawar) ಅನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಘಟನೆಯಲ್ಲಿ ಪವಾರ್ ಗಂಭೀರವಾಗಿ ಗಾಯಗೊಂಡಿದ್ದು 35 ಹೊಲಿಗೆ ಹಾಕಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.
ಕಳೆದ ಗುರುವಾರ ಮೆಡಿಕಲ್ ಶಾಪ್ ಮುಂದೆ ನಿಂತಿದ್ದ ಪವಾರ್ ನನ್ನು ಬೆನ್ನತ್ತಿದ್ದ 10 ರಿಂದ 15 ಯುವಕರ ತಂಡ ಇವನೇ ನೂಪುರ್ ಶರ್ಮಾ ಬೆಂಬಲಿಸಿ ಡಿಪಿ ಹಾಕಿದ್ದು, ನಿನಗೂ ಉಮೇಶ್ ಪರಿಸ್ಥಿತಿಯೇ ಬರಲಿದೆ ಎಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ
ಅಗ್ನಿಪಥ ವಿರೋಧಿಸಿ ಬೀದಿಗೆ ಬಂದವರಿಗೆ ನಾವ್ಯಾಕೆ ಹೋರಾಟಕ್ಕೆ ಇಳಿದಿದ್ದೇವೆ ಅನ್ನುವುದೇ ಗೊತ್ತಿರಲಿಲ್ಲ.. ಇದೀಗ ಸತ್ಯ ಬಯಲಾಗಿದೆ (Agneepath naxal)
ಬಿಹಾರ : ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದ ವೇಳೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿತ್ತು. ಕೇಂದ್ರ ಸರ್ಕಾರ ಕೂಡಾ ಹೋರಾಟ ಈ ಮಟ್ಟಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಹೋರಾಟ ಪ್ರಾರಂಭವಾದ ಹೊತ್ತಿಗೆ ದೇಶ ವಿರೋಧಿ ಶಕ್ತಿಗಳು (Agneepath naxal) ಹೋರಾಟದಲ್ಲಿ ಕೈ ಜೋಡಿಸಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿತ್ತು.
ಇದನ್ನೂ ಓದಿ : Kolar rss SP Devaraj : ಕೋಲಾರದಲ್ಲಿ RSS ಕಾರ್ಯಕರ್ತನಿಗೆ ಇರಿತ : ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಎಸ್ಪಿ ದೇವರಾಜ್ ದರ್ಪ
ಇದೀಗ ಅದು ಸತ್ಯವಾಗಿದೆ. ಅಗ್ನಿಪಥ್ ವಿರೋಧಿಸಿ ಬಿಹಾರದಲ್ಲಿ ನಡೆದ ಹಿಂಸಾಚಾರದಲ್ಲಿ ಕೆಂಪು ಉಗ್ರರ (Agneepath naxal )ಕೈವಾಡವಿರುವುದು ಗೊತ್ತಾಗಿದೆ. ತೆಲಂಗಾಣ ಪೊಲೀಸರ ಮಾಹಿತಿ ಆಧಾರದಲ್ಲಿ ಬಿಹಾರ ಪೊಲೀಸರು ಶುಕ್ರವಾರ ಮನ ಶ್ಯಾಮ್ ದಾಸ್ ಅನ್ನುವ ನಕ್ಸಲ್ ನಾಯಕನನ್ನು ಬಂಧಿಸಿದ್ದರು.
ಇದನ್ನೂ ಓದಿ : Karnataka Rain : ಚಿಕ್ಕಮಗಳೂರಿನಲ್ಲಿ 60 ಅಡಿ ಕುಸಿದ ಭತ್ತದ ಗದ್ದೆ : ರೈತರಲ್ಲಿ ಆತಂಕ
ಆತನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಪ್ರತಿಭಟನೆ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವು ಕಾನೂನು ವಿರೋಧಿ ಕೃತ್ಯಗಳನ್ನು ನಡೆಸಿರುವುದಾಗಿ ರಾಯ್ ಒಪ್ಪಿಕೊಂಡಿದ್ದಾನೆ. ಜೊತೆಗೆ ಹಲವು ಯುವಕರಿಗೆ ಹಿಂಸಾಚಾರ ನಡೆಸಲು ತರಬೇತಿ ಕೊಟ್ಟಿರುವುದನ್ನು ಈ ನಕ್ಸಲ್ ನಾಯಕ ಬಹಿರಂಗ ಪಡಿಸಿದ್ದಾನೆ.
ಇದನ್ನೂ ಓದಿ : Corona alert : ಕರ್ನಾಟಕಕ್ಕೆ ಕೇಂದ್ರದ ಕೊರೋನಾ ಎಚ್ಚರಿಕೆ
ಈ ಶ್ಯಾಮ್ ದಾಸ್ ರಾಯ್, ಬಿಹಾರದಲ್ಲಿ ವಾಸವಿದ್ದು, ಜಾರ್ಖಂಡ್, ಪಶ್ಚಿಮ ಬಂಗಾಳ, ತೆಲಂಗಾಣದ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುತ್ತಿದ್ದ. ತೆಲಂಗಾಣ ಪೊಲೀಸರು ಇತ್ತೀಚೆಗೆ ನಕ್ಸಲ್ ಹೋರಾಟಗಾರನೊಬ್ಬನನ್ನು ವಶಕ್ಕೆ ಪಡೆದ ವೇಳೆ ಶ್ಯಾಮ್ ದಾಸ್ ರಾಯ್ ಕೃತ್ಯ ಬೆಳಕಿಗೆ ಬಂದಿತ್ತು.
Discussion about this post