ಹಣ ಮಾಡಲು ಕ್ರಿಮಿನಲ್ ಗಳು ಅದ್ಯಾವ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಅನ್ನುವುದೇ ಅರ್ಥವಾಗುತ್ತಿಲ್ಲ. ಹಾಳಾಗಿರುವ ರಾಜಕೀಯ ವ್ಯವಸ್ಥೆಯೇ ಇದಕ್ಕೆ ಕಾರಣ ( Bengaluru crime)
ಬೆಂಗಳೂರು : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರ ಪುತ್ರನಿಂದ 25 ಲಕ್ಷ ರೂಪಾಯಿ ವಸೂಲಿ ಮಾಡಿದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಮಹಿಳೆಯೂ ಸೇರಿದ್ದಾಳೆ.( Bengaluru crime)
ಉದ್ಯಮಿ ರವಿ ಅನ್ನುವವರ ಪುತ್ರ ಸೂರಜ್ ಅವರನ್ನು ಸಂಪರ್ಕಿಸಿದ್ದ ಪುಷ್ಫಾ ಎಂಬಾಕೆ ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದಳು. ಇದಾದ ಬಳಿಕ ಪುಷ್ಪಾ ಸಂತೋಷ್ ಅನ್ನುವವನನ್ನು ಭೇಟಿ ಮಾಡಿಸಿ ಐಎಎಸ್ ಅಧಿಕಾರಿಯ ಪಿಎ ಈತ ಎಂದು ನಂಬಿಸಿದ್ದಾಳೆ.
ಇದನ್ನು ಓದಿ : NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ
ಹಾಗೇ ವ್ಯವಹಾರ ಮಾತನಾಡಿಸುತ್ತಿದ್ದ ಸಂದರ್ಭದಲ್ಲಿ ಇನ್ನಿಬ್ಬರು ನುಗ್ಗಿದ್ದು 4 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮನೆ ಮಾರಿದರೂ ಅಷ್ಟು ದುಡ್ಡು ಬರೋದಿಲ್ಲ ಎಂದು ಸೂರಜ್ ಹೇಳಿದಾಗ 25 ಲಕ್ಷಕ್ಕೆ ವ್ಯವಹಾರ ಕುದುರಿದೆ. ಈ ವೇಳೆ ಗುರುರಾಜ್ ಅನ್ನುವವರಿಗೆ ಕರೆ ಮಾಡಿದ ಸೂರಜ್ 25 ಲಕ್ಷ ರೂಪಾಯಿ ವ್ಯವಸ್ಥೆ ಮಾಡಿದ್ದ.
ಅಬ್ದುಲ್ ಕಲಾಂ ಚಾರಿಟೇಬರ್ ಟ್ರಸ್ಟ್ ಬಳಿ ಗುರುಮೂರ್ತಿ ಹಣ ತಂದಾಗ, ಸೂರಜ್ ಇರಲಿಲ್ಲ, ಹೀಗಾಗಿ ಅವರು ಪುಷ್ಪಾ ಕಡೆಯವರಿಗೆ ಹಣ ನೀಡದೆ ಹಿಂತಿರುಗಿದ್ದರು.
ಇದಾದ ಬಳಿಕ ಸೂರಜ್ ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಪುಷ್ಪಾ ಹಣ ಕೊಡಬೇಕು, ತಪ್ಪಿದ್ರೆ ರೇಪ್ ಕೇಸ್ ಹಾಕಿಸ್ತೀನಿ ಅಂತಾ ಬೆದರಿಸಿದ್ದಾಳೆ. ಮತ್ತೆ ಗುರುಮೂರ್ತಿಯನ್ನು ಕರೆಸಿಕೊಂಜ ಸೂರಜ್ 25 ಲಕ್ಷ ಹಣವನ್ನು ಪುಷ್ಪಳಿಗೆ ನೀಡಿದ್ದ. ಇದಾದ ಬಳಿಕ ವಿಷಯ ತಿಳಿದ ಉದ್ಯಮಿ ರವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪುಷ್ಪಾಸ ಅಯ್ಯಪ್ಪ, ರಾಕೇಶ್ ಮತ್ತು ಸಂತೋಷ್ ಅನ್ನುವವರನ್ನು ಬಂಧಿಸಲಾಗಿದೆ.
Discussion about this post