ಇದೇ ಪ್ರತಿಭೆಯನ್ನು ಒಳ್ಳೆಯ ಕೆಲಸವೊಂದಕ್ಕೆ ಬಳಸುತ್ತಿದ್ರೆ ಸಮಾಜ ಗುರುತಿಸುತ್ತಿತ್ತು. ಆದರೆ ಈಗ ಮತ್ತೊಂದು ಕಾರಣಕ್ಕೆ ಸಮಾಜ ಗುರುತಿಸುವಂತಾಗಿದೆ
ಬೆಂಗಳೂರು : ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಹೀಗಾಗಿ ಮನೆಗಳ್ಳತನಕ್ಕೆ ಸಹಾಯಕನೊಬ್ಬನನ್ನು ಇಟ್ಟುಕೊಂಡಿದ್ದ ಖದೀಮನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೋಲಾರ ಜಿಲ್ಲೆ KGF ತಾಲೂಕಿನ ಜ್ಞಾನಪ್ರಕಾಶ್ ಎಂದು ಗುರುತಿಸಲಾಗಿದೆ. ಜೊತೆಗೆ ಈತನ ಸಹಾಯಕ ಅರವಿಂದ ಎಂಬಾತನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 80 ಗ್ರಾಮ್ ಚಿನ್ನಾಭರಣ, 1.15 ಕೆಜಿ ಬೆಳ್ಳಿ, ಮತ್ತು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲ ವಾರಗಳ ಹಿಂದೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ಬಡಾವಣೆಯ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ತಾಂತ್ರಿಕ ಮಾಹಿತಿ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು. ಆಗ ಇವರ ಸುಳಿವು ಸುಕ್ಕಿತ್ತು.
ಜ್ಞಾನಪ್ರಕಾಶ್ ವೃತಿಪರ ಕಳ್ಳನಾಗಿದ್ದು, ಪ್ರಸ್ತುತ 43 ವರ್ಷದ ಈತ 30 ವರ್ಷಗಳಿಂದ ಮನೆಗಳ್ಳತನ ಕೃತ್ಯದಲ್ಲಿ ಸಕ್ರಿಯವಾಗಿದ್ದಾನೆ. ಇತ್ತೀಚೆಗೆ ಈತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಹಣದಾಸೆ ತೋರಿಸಿ ತನ್ನೂರಿನ ಅರವಿಂದ ಎಂಬಾತನನ್ನು ಸಹಾಯಕ್ಕೆ ಇರಿಸಿಕೊಂಡಿದ್ದ.
Discussion about this post