ಹೈದರಬಾದ್ : ಮದುವೆಯಾಗಲು ಸೂಕ್ತ ಹುಡುಗಿ ಸಿಗುತ್ತಿಲ್ಲ ಎಂದು ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ಫಲಕ್ನುಮಾದ ಸಂಜಯ್ ಗಾಂಧಿ ನಗರದಲ್ಲಿ ನಡೆದಿದೆ. ಮೃತನನ್ನು ಸೈಯದ್ ಅಹ್ಮದ್ ಎಂದು ಗುರುತಿಸಲಾಗಿದೆ.
ಟೈಲರ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸೈಯದ್ ಕಳೆದ ಕೆಲ ವರ್ಷಗಳಿಂದ ಮದುವೆಯಾಗಲು ಹುಡುಗಿಯ ಶೋಧದಲ್ಲಿದ್ದ. ಆದರೆ ಯಾವ ಹುಡುಗಿಯೂ ಇವನಿಗೆ ಇಷ್ಟವಾಗುತ್ತಿರಲಿಲ್ಲ. ಇವನಿಗೆ ಇಷ್ಟವಾದ ಹುಡುಗಿಯರು ಸೈಯದ್ ನನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಜೊತೆಗೆ ಕೊರೋನಾ ಕಾರಣದಿಂದ ವಿವಾಹ ಮತ್ತಷ್ಟು ವಿಳಂಭವಾಗಿದೆ. ಹೀಗಾಗಿ ಮದುವೆ ವಿಚಾರದಲ್ಲಿ ಸೈಯದ್ ಸಿಕ್ಕಾಪಟ್ಟೆ ನೊಂದುಕೊಂಡಿದ್ದ.
ಈ ನಡುವೆ ಮದುವೆ ವಿಳಂಭವಾದ ಕಾರಣ ಆತನ ಸಮಾಜದಿಂದಲೂ ಚುಚ್ಚು ಮಾತುಗಳನ್ನು ಕೇಳಬೇಕಾಗಿ ಬಂದಿತ್ತು. ಇದರಿಂದ ಸೈಯದ್ ಮತ್ತಷ್ಟು ಕುಗ್ಗಿ ಹೋಗಿದ್ದ. ಹೀಗಾಗಿ ಮದುವೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದ ಸೈಯದ್ ಈ ವರ್ಷ ಮದುವೆಯಾಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದನಂತೆ.
ಆದರೆ ಮದುವೆಯಾಗಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನಲೆಯಲ್ಲಿ ಸೈಯದ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
Depressed about not getting married, a 30-year-old man committed suicide here at Sanjay Gandhi Nagar in Falaknuma late on Thursday night.
Discussion about this post