ಬೆಂಗಳೂರು : ಇತ್ತೀಚೆಗೆ ಕೋರಮಂಗಲದ ಬ್ಯಾಂಕ್ ನಲ್ಲಿ ನಡೆದ ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಹತ್ಯೆ ಪ್ರಕರಣದ ಕುರಿತಂತೆ ನಗರ ಪೊಲೀಸ್ ಆಯುಕ್ತ ಕಮ್ ಪಂತ್ ಇಬ್ಬರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಒಂದು ವೇಳೆ ಎರಡು ಠಾಣೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ ಎನ್ನಲಾಗಿದೆ.
ಬಬ್ಲಿ ಕೊಲೆಗೂ ಮುನ್ನ, ಕೊಲೆ ಯತ್ನ ಪ್ರಕರಣವೊಂದರಲ್ಲಿ ಬಬ್ಲಿ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಆತನನ್ನು ಬಂಧಿಸದ ಇನ್ಸ್ ಪೆಕ್ಟರ್ ಭರತ್ ನಿರ್ಲಕ್ಷ್ಯ ವಹಿಸಿದ್ದರು. ಅನ್ನುವ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಬಬ್ಲಿ ಗ್ಯಾಂಗ್ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಅಪ್ಪು ಎಂಬವನನ್ನು ಬಬ್ಲಿ ಗ್ಯಾಂಗ್ ಕೊಲೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಬಬ್ಲಿಯನ್ನು ಅಪ್ಪು ಸ್ನೇಹಿತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಗರಂ ಆಗಿರುವ ಪೊಲೀಸ್ ಆಯುಕ್ತರು ಅಶೋಕ ನಗರ ಠಾಣೆ ಇನ್ಸ್ ಪೆಕ್ಟರ್ ಭರತ್ ಮತ್ತು ಕೋರಮಂಗಲ ಠಾಣಾ ಇನ್ಸ್ ಪೆಕ್ಟರ್ ರವಿ ಅವರಿಂದ ವಿವರಣೆ ಕೇಳಿದ್ದಾರೆ.
ಈ ನಡುವೆ ಬಬ್ಲಿ ಹತ್ಯೆಯ ಬಳಿಕ ಆರೋಪಿಗಳು ವಿಜಯೋತ್ಸವ ಆಚರಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ಗಾಳಿಯಲ್ಲಿ ಲಾಂಗ್ ಬೀಸಿಕೊಂಡು, ಬೈಕ್ ಕೇಕೆ ಹಾಕುತ್ತಾ ವಿಜಯೋತ್ಸವ ಆಚರಿಸಿದ್ದರು. ಸಮಾಜದಲ್ಲಿ ಭೀತಿ ಹುಟ್ಟಿಸುವ ಈ ಪಾಪಿಗಳಿಗೆ ಕಾನೂನುಸ ಪೊಲೀಸರ ಭಯವಿಲ್ಲ ಅನ್ನುವುದು ದುರಂತವೇ ಸರಿ.
Discussion about this post