Rowdy Parade ನಡೆಸುವ ಸಂದರ್ಭದಲ್ಲಿ Koppal SP Arunangshu giri ಕೇಳಿದ ಪ್ರಶ್ನೆ ಆ ಮಹಿಳೆಯ ಮನಸ್ಸಿಗೆ ತಟ್ಟಿಲ್ಲ ಅಂದ್ರೆ ಆಕೆ ಪಾಪಿಯೇ ಸರಿ
ಕೊಪ್ಪಳ : ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇದೀಗ ಎಲ್ಲಾ ಜಿಲ್ಲೆಗಳಲ್ಲಿ Rowdy Parade ಪರೇಡ್ ನಡೆಸಲಾಗುತ್ತಿದೆ. ಪ್ರತೀ ಠಾಣೆಯಲ್ಲಿ ಪ್ರತೀ ತಿಂಗಳು ಇಂತಹ ಪರೇಡ್ ನಡೆದರೆ ರೌಡಿಗಳು ಬಾಲ ಮುದುಡಿಕೊಂಡಿರುತ್ತಾರೆ. ಆದರೆ ಅಂತಹ ಜನ ಸ್ನೇಹಿ ಠಾಣೆಗಳು ಕರ್ನಾಟಕದಲ್ಲಿ ಎಲ್ಲಿದೆ. ಇತ್ತೀಚಿನ ಪೊಲೀಸ್ ಪರೀಕ್ಷಾ ಹಗರಣ ಇಲಾಖೆಯ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸಿದೆ. ಈ ನಡುವೆ Koppal SP Arunangshu giri Rowdy Parade ನಡೆಸಿದ್ದಾರೆ.
ಈ ವೇಳೆ ಕೊಪ್ಪಳ ಜಿಲ್ಲೆಯ ರೌಡಿಗಳ ಬೆವರಿಳಿಸಿದ ಎಸ್ಪಿ ಅರುಣಾಂಗ್ಶುಗಿರಿ, ಕಾನೂನಿಗೆ ಗೌರವ ಕೊಟ್ರೆ ಸರಿ, ತಪ್ಪಿದ್ರೆ ಸೆಕ್ಷನ್ ಹಾಕೋ ಪ್ರಶ್ನೆ ಇಲ್ಲ, ಓನ್ಲಿ ಗಡಿಪಾರು ಅಂದಿದ್ದಾರೆ. ಇದೇ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಸಿ ಪದೇ ಪದೇ ಸಿಕ್ಕಿ ಬೀಳುತ್ತಿರುವ ಮಹಿಳೆಯನ್ನು ಕಂಡು ಸಿಡಿಮಿಡಿಗೊಂಡ ಪೊಲೀಸ್ ವರಿಷ್ಠಾಧಿಕಾರಿ ಊರು ಬಿಟ್ಟು ಹೋಗುವಂತೆ ಗದರಿದ್ದಾರೆ
ಇದನ್ನೂ ಓದಿ : ಒಂದು ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ರಿಷಬ್ ಶೆಟ್ಟಿ
ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀಯಾ, ನಿನಗೆ ಹೆಣ್ಣು ಮಕ್ಕಳಿಲ್ವ, ನಿನ್ನ ಮಗಳಿಗೂ ಇದೇ ದಾರಿ ಮಾಡಿಕೊಡುತ್ತೀಯಾ, 50 ವಯಸ್ಸಾಗಿದ್ದರೂ ಇಂಥ ಚಟುವಟಿಕೆ ನಡೆಸುತ್ತೀಯಾ, ಬ್ಯಾಗ್ ಪ್ಯಾಕ್ ಮಾಡಿ ರೆಡಿ ಇರಿ. ಊರು ಬಿಟ್ಟು ಹೋಗಲು ರೆಡಿ ಇರು. ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದು ಸಾಕು ಅಂದಿದ್ದಾರೆ.
ಇದನ್ನೂ ಓದಿ : ಹೋಟೆಲ್ ನ ಒಂದೇ ಕೊಠಡಿಯಲ್ಲಿ ಸಿಕ್ಕಿ ಬಿದ್ದ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್
liquor theft : ಪೊಲೀಸ್ ಗೋದಾಮಿಗೆ ಕನ್ನ ಹಾಕಿದ ಪೋರ : ಒಂದು ವರ್ಷದಿಂದ ಕದ್ದ ಮದ್ಯವೆಷ್ಟು ಗೊತ್ತಾ,,,
ಹಲವು ಕಡೆ ದಾಳಿ ನಡೆದ ವೇಳೆ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಪೊಲೀಸರು ಗೋದಾಮಿನಲ್ಲಿ ತುಂಬಿಸಿಟ್ಟಿದ್ದರು. ಆದರೆ ಗೋದಾಮಿನಿಂದ ಎಣ್ಣೆ ಬಾಟಲಿ ( liquor theft ) ನಾಪತ್ತೆಯಾಗುತ್ತಿರುವುದು ತಲೆನೋವಿಗೆ ಕಾರಣವಾಗಿತ್ತು.
ಗುಜರಾತ್ : ರಾಜ್ಯದ ಜಾಮ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದ ಹೊಸ ತಲೆನೋವು ಶುರುವಾಗಿತ್ತು. ಗೋದಾಮಿನಲ್ಲಿ ಸಂಗ್ರಹಿಸಿಟ್ಟುರವ ಮದ್ಯದ ಬಾಟಲಿಗಳು ( liquor theft ) ನಾಪತ್ತೆಯಾಗುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸಿತ್ತು. ಇಲಿ, ಹೆಗ್ಗಣಗಳು ಬಾಟಲಿ ಕದಿಯುತ್ತಿದೆಯೇ ಅನ್ನುವ ಅನುಮಾನವೂ ಕಾಡಿತ್ತು.
ಇದನ್ನೂ ಓದಿ : ಪವಿತ್ರಾ ಲೋಕೇಶ್ ಮುಂದೆಯೇ ಪತ್ನಿ ಕೈಯ ಚಪ್ಪಲಿ ಸೇವೆ ತಪ್ಪಿಸಿಕೊಂಡ ನರೇಶ್
ಆದರೆ ಕೆಲ ದಿನಗಳ ಹಿಂದೆ ಮದ್ಯ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಚರಿ ಅಂದ್ರೆ ಕಳ್ಳ ಬರೀ 13 ವರ್ಷದ ಹುಡುಗ. ವಿಚಾರಣೆ ನಡೆಸಿದರೆ ಹುಬ್ಬೇರಿಸುವ ಸರದಿ ಅಧಿಕಾರಿಗಳದ್ದು, ಕಳೆದ ಒಂದು ವರ್ಷದಿಂದ ಗೋದಾಮಿಗೆ ಕನ್ನ ಹಾಕುತ್ತಿದ್ದ ಪೋರ ಸದ್ದಿಲ್ಲದೆ ಎಣ್ಣೆ ಬಾಟಲಿಗಳನ್ನು ಎಸ್ಕೇಪ್ ಮಾಡುತ್ತಿದ್ದನಂತೆ.
ಶನಿವಾರ ಬೆಳಗ್ಗೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಾಗ ಎರಡು ಬಿಯರ್ ಬಾಟಲಿಗಳು ಹುಡುಗನ ಕೈಯಲ್ಲಿತ್ತು. ಇದಾದ ಬಳಿಕ ಹುಡುಗ ವಾಸಿಸುತ್ತಿದ್ದ ಪೊಲೀಸ್ ಕ್ವಾರ್ಟರ್ಸ್ ಗೆ ಹೋಗಿ ನೋಡಿದರೆ 29 ಬಾಟಲಿ ಪ್ರೀಮಿಯಂ ವಿಸ್ಕಿ, 317 ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್, 7 ಟಿನ್ ಪ್ರೀಮಿಯಂ ಬಿಯರ್ ಗಳು ಸಿಕ್ಕಿತ್ತು. ಇವುಗಳ ಮೌಲ್ಯ 1.7 ಲಕ್ಷ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಮೋದಿ ಫೋನ್ ಕರೆಗೆ ಮಣಿದು ಡಿಸಿಎಂ ಹುದ್ದೆಗೇರಿದ ಫಡ್ನವೀಸ್
ಇದೀಗ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳ್ಳತನದ ಉದ್ದೇಶ ಅರಿಯಲು ಮುಂದಾಗಿದ್ದಾರೆ.
Discussion about this post