ಮಹಾರಾಷ್ಟ್ರ : ಕರ್ನಾಟಕದಲ್ಲಿ ನಡೆದ ಪೊಲೀಸ್ ನೇಮಕಾತಿ ಹಗರಣದಿಂದಾಗಿ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ. ಮಾತ್ರವಲ್ಲದೆ ಈಗಾಗಲೇ ಸೇವೆಯಲ್ಲಿರುವ ಪೊಲೀಸರ ಬಗ್ಗೆಯೂ ಈ ಅಕ್ರಮ ಅನುಮಾನ ದೃಷ್ಟಿ ಬೀರುವಂತೆ ಮಾಡಿದೆ.
ಈ ನಡುವೆ ಮಹಾರಾಷ್ಟ್ರದಲ್ಲಿ ಪೊಲೀಸರೇ ದರೋಡೆಗಿಳಿದ ಘಟನೆ ನಡೆದಿದೆ. ಆಟಿಕೆ ವ್ಯಾಪಾರಿಯೊಬ್ಬನ ಮನೆಗೆ ಇನ್ಸ್ ಪೆಕ್ಟರ್ ಸಹಿತ ನುಗ್ಗಿದ 10 ಜನ ಪೊಲೀಸರು 30 ಕೋಟಿ ದೋಚಿದ್ದಾರೆ. ಬಳಿಕ 6 ಕೋಟಿ ಇಟ್ಟುಕೊಂಡು 24 ಕೋಟಿ ಹಿಂತಿರುಗಿಸಿದ್ದಾರೆ. ಇದೀಗ ಪ್ರಕರಣ ಹಿರಿಯ ಅಧಿಕಾರಿಗಳಿಗೆ ಗೊತ್ತಾಗಿದ್ದು, 10 ಜನ ಪೊಲೀಸರನ್ನು ಮನೆಗೆ ಕಳುಹಿಸಿದೆ.
Discussion about this post