ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ಸಪ್ಟಂಬರ್ 27 ರಂದು ಕರೆ ನೀಡಿದ್ದ ಭಾರತ ಬಂದ್ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ವಾಕಿಟಾಕಿ ಕಳ್ಳತನವಾದ ಘಟನೆ ನಡೆದಿದೆ. ಈ ಸಂಬಂಧ ಎಸ್ ಜೆ ಪಾರ್ಕ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿಯೇ ಪ್ರಕರಣ ದಾಖಲಿಸಿದ್ದಾರೆ.
ಭಾರತ ಬಂದ್ ದಿನ ಅನೇಕ ರೈತ ಸಂಘಟನೆಗಳು ಟೌನ್ ಹಾಲ್ ಬಳಿ ಜಾಥಾ ನಡೆಸಿ, ರಸ್ತೆ ತಡೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಶಿವಕುಮಾರ್ ಪ್ರತಿಭಟನಕಾರರನ್ನು ಚದುರಿಸಲು ಮುಂದಾಗಿದ್ದಾರೆ. ಇದೇ ವೇಳೆ ವಾಕಿಟಾಕಿ ಮಿಸ್ ಆಗಿದೆ.
ಪ್ರತಿಭಟನೆ ಕುರಿತಂತೆ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಲು ವಾಕಿಟಾಕಿ ಸಲುವಾಗಿ ಬೆಲ್ಟ್ ಗೆ ಕೈ ಹಾಕಿದ್ರೆ ವಾಕಿಟಾಕಿ ನಾಪತ್ತೆಯಾಗಿತ್ತು. ಈ ವೇಳೆ ಪೊಲೀಸರು ಇನ್ಸ್ ಪೆಕ್ಟರ್ ಅವರ ವಾಕಿಟಾಕಿ ಹುಡುಕಾಡಿದ್ದಾರೆ. ಆದರೆ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ವಾಕಿಟಾಕಿ ಕಳೆದುಕೊಂಡಿರುವ ಇನ್ಸ್ ಪೆಕ್ಟರ್ ವಾಕಿಟಾಕಿ ಕಳ್ಳತನವಾಗಿರುವ ಕುರಿತಂತೆ ದೂರು ಸಲ್ಲಿಸಿದ್ದಾರೆ.
Discussion about this post