ಬೆಂಗಳೂರು : ಮಧ್ಯರಾತ್ರಿ ಸರಿ ಸುಮಾರು 1.30ರ ಹೊತ್ತಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟ ದಾರುಣ ಘಟನೆ ಕೋರಮಂಗಲ ಸಮೀಪದ ಮಂಗಳ ಕಲ್ಯಾಣ ಮಂಟಪ ಬಳಿ ನಡೆದಿದೆ. ಮೃತರೆಲ್ಲರೂ 20 ರಿಂದ 30 ವಯಸ್ಸಿನ ವಯೋಮಾನದವರಾಗಿದ್ದು, ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದೇ ಭೀಕರ ಅಪಘಾತಕ್ಕೆ ಕಾರಣ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರದಿಂದ ಹೊಸೂರು ಕಡೆ ಅತೀ ವೇಗದಲ್ಲಿ ಬಂದ ಆಡಿ ಕಾರು ಮೊದಲು ಫುಟ್ ಪಾತ್ ಗೆ ಡಿಕ್ಕಿ ಹೊಡಿದಿದೆ. ಇದಾದ ಬಳಿಕ ಅಲ್ಲೆ ಇದ್ದ ಬ್ಯಾಂಕ್ ಒಂದರ ತಡೆಗೋಡೆಗೆ ಬಡಿದಿದೆ. ಅಪಘಾತದಿಂದ ತೀವ್ರ ಎಷ್ಟಿತ್ತು ಅಂದ್ರೆ ಎಡ ಭಾಗದ ಎರಡು ಟಯರ್ ಗಳು ಕಿತ್ತುಕೊಂಡು ಬಂದಿದೆ. ಜೊತೆಗೆ ಬಾನೆಟ್ ತನಕ ಕಾರಿನ ಪಾರ್ಟ್ ಪುಡಿ ಪುಡಿಯಾಗಿದ್ದು, ಸ್ಟೇರಿಂಗ್ ಕೂಡಾ ತುಂಡಾಗಿದೆ.
ಇನ್ನು ಮೃತರನ್ನು ಬಿಂದು (28) ಇಶಿತಾತ (21), ಡಾ. ಧನುಷಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮತ್ತು ಕರುಣಾಸಾಗರ್ ಎಂದು ಗುರುತಿಸಲಾಗಿದೆ. ಈ ಪೈಕಿ ಬಿಂದು ಮತ್ತು ಕರುಣಾಸಾಗರ್ ದಂಪತಿ ಎಂದು ಗೊತ್ತಾಗಿದೆ.
ದುರ್ಘಟನೆ ಸಂಭವಿಸಿದ ವೇಳೆ ಆಡಿ ಕಾರಿನ ಮುಂಭಾಗದಲ್ಲಿ ಮೂವರು ಮತ್ತು ಹಿಂಭಾಗದಲ್ಲಿ 4 ಜನ ಕೂತಿದ್ದರು ಎಂದು ಗೊತ್ತಾಗಿದೆ. ಸೀಟ್ ಬೆಲ್ಟ್ ಧರಿಸದೇ ಇರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು, ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ಕೂಡಾ ಒಪನ್ ಆಗಿಲ್ಲ.
Bengaluru audi Car Accident BR Ravikanthe Gowda IPS reaction
Discussion about this post