ಮಂಗಳಮುಖಿಯರ ಬಗ್ಗೆ ಸಮಾಜದಲ್ಲಿ ಅನುಕಂಪ ಹಾಗೂ ಗೌರವವಿತ್ತು. ಆದರೆ ಇತ್ತೀಚೆಗೆ ಶುಭ ಕಾರ್ಯಕ್ರಮಗಳಿಗೆ ನುಗ್ಗಿ ಅವರು ಮಾಡುತ್ತಿರುವ ಕೃತ್ಯದಿಂದ ಅನುಕಂಪ ಹಾಗೂ ಗೌರವ ಕಡಿಮೆಯಾಗುತ್ತಿದೆ. ಇದಕ್ಕೊಂದು ಸಾಕ್ಷಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆ ಮಾಡಿದ ಈ ಘಟನೆ.
ಬೆಂಗಳೂರು : ಸಂಚಾರಿ ವಿಜಯ್ ನಟನೆಯ ಅವನಲ್ಲ ಅವಳು ಸಿನಿಮಾ ನೋಡಿದ ಮೇಲೆ ತೃತೀಯ ಲಿಂಗಿಗಳ ಬಗ್ಗೆ ಸಮಾಜದ ದೃಷ್ಟಿಕೋನವೇ ಬದಲಾಗಿತ್ತು. ಈ ಸಿನಿಮಾ ಸಂದರ್ಭದಲ್ಲೂ ಅನೇಕರು ಕೊಂಕು ಮಾತನಾಡಿದ್ದರು. ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದರು. ಅನೇಕರು ತಮ್ಮ ಮದುವೆ ಸಮಾರಂಭದಲ್ಲಿ ಏನಾಗಿತ್ತು ಅನ್ನುವುದನ್ನು ವಿವರಿಸಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಅದೊಂದು ಸಿನಿಮಾ ಅಳಿಸಿ ಹಾಕಿತ್ತು.
ಮಾತ್ರವಲ್ಲದೆ ಮಂಗಳಮುಖಿಯಾಗಿ ಗುರುತಿಸಿಕೊಂಡ ಸಾಧಕರು ಬರೆದ ಪುಸ್ತಕ, ಅವರ ಜೀವನ ಚರಿತ್ರೆಗಳು ಕೂಡಾ ತೃತೀಯ ಲಿಂಗಿಗಳ ಸಂಕಷ್ಟವೇನು ಅನ್ನುವುದನ್ನು ಸಮಾಜದ ಮುಂದಿಟ್ಟಿತ್ತು. ಹೀಗಾಗಿ ನಮ್ಮಂತೆ ಅವರು ಕೂಡಾ ಮನುಷ್ಯರು ಅನ್ನುವ ಭಾವನೆ ಮೂಡಿತ್ತು.
ಇದನ್ನೂ ಓದಿ : ರಾಜ್ಯದಲ್ಲಿ ಡೆಂಘೀ ಜ್ವರದ ಅಬ್ಬರ : ದೊಡ್ಡಬಳ್ಳಾಪುರದಲ್ಲಿ 6 ವರ್ಷದ ಬಾಲಕಿ ಬಲಿ
ಆದರೆ ಬೆಂಗಳೂರಿನಲ್ಲಿ ಗುರುವಾರ ನಡೆದ ಘಟನೆ ಮಂಗಳಮುಖಿಯರ ಬಗ್ಗೆ ಹೊಸ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಕಲ್ಕೆರೆ ನಗರದಲ್ಲಿ ಆಯೋಜಿಸಲಾಗಿದ್ದ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನುಗ್ಗಿದ ಮಂಗಳಮುಖಿಯರ ಗ್ಯಾಂಗ್ 25 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದೆ. ಪೂಜೆ ಸಂಭ್ರಮದಲ್ಲಿದ್ದ ಮನೆ ಮಾಲೀಕರು ಅಷ್ಟೆಲ್ಲಾ ಕಾಸು ಕೊಡಲು ಸಾಧ್ಯವಿಲ್ಲ ಅಂದಿದ್ದಾರೆ.
ಅಷ್ಟಕ್ಕೆ ರೊಚ್ಚಿಗೆದ್ದ ಗ್ಯಾಂಗ್ ಅಸಭ್ಯವಾಗಿ ಬಟ್ಟೆ ಎತ್ತಿದ್ದಾರೆ. ಜೊತೆಗೆ ಮನೆ ಮಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಚೆಯರ್ ಗಳನ್ನು ಒಡೆದು ಹಾಕಿ ದಾಂಧಲೆ ಎಬ್ಬಿಸಿದ್ದಾರೆ. ಇನ್ನೇನು ಪೊಲೀಸರು ಬರುತ್ತಿದ್ದಾರೆ ಅಂದ ತಕ್ಷಣ ಶಾಪ ಹಾಕಿ ಎರಡು ಆಟೋಗಳಲ್ಲಿ ಪರಾರಿಯಾಗಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಅನೇಕರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಶುಭ ಕಾರ್ಯ ನಡೆಸುವುದೇ ಕಷ್ಟವಾಗಿದೆ. ಅಂಗಡಿ ಒಪನ್, ಗೃಹ ಪ್ರವೇಶ, ಮದುವೆ ಹೀಗೆ ಯಾವುದೇ ಶುಭ ಕಾರ್ಯಕ್ರಮ ಮಾಡಿದ್ರೆ ಸಾಕು, ತೃತೀಯ ಲಿಂಗಿಗಳ ಗ್ಯಾಂಗ್ ಕಾಸಿಗೆ ಬೇಡಿಕೆ ಇಡುತ್ತದೆ. ಮರ್ಯಾದೆಗೆ ಅಂಜಿ ಕಾಸು ಕೊಡದೆ ವಿಧಿ ಇರೋದಿಲ್ಲ ಅಂದಿದ್ದಾರೆ.
Discussion about this post