Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

theft arrest : ಕಳ್ಳ ಪತಿ : ಪತ್ನಿ ಅತ್ತೆಯಿಂದ ಮಾಲು ವಿಲೇವಾರಿ : ಕಳ್ಳರ ಕುಟುಂಬ

Radhakrishna Anegundi by Radhakrishna Anegundi
July 16, 2022
in ಕ್ರೈಮ್
husband-wife-and-mother-in-law-arrested-in-theft-case
Share on FacebookShare on TwitterWhatsAppTelegram

ಇಡೀ ಕುಟುಂಬದ ಉದ್ಯೋಗ ಕಳ್ಳತನವಾಗಿತ್ತು, ಕದ್ದ ಮಾಲುಗಳನ್ನು ಖರೀದಿಸಲು ಚಿನ್ನದಂಗಡಿ ಮಾಲೀಕರನ್ನೂ ಫಿಕ್ಸ್ ( theft arrest ) ಮಾಡಲಾಗಿತ್ತು

ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳುವು ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಅಂದ್ರೆ ಈ ಗ್ಯಾಂಗ್ ನ ಸದಸ್ಯರು ಒಂದೇ ಕುಟುಂಬದವರು. ( theft arrest ) ಪತಿ ಪತ್ನಿ ಮತ್ತು ಅತ್ತೆಯೇ ಕಳ್ಳತನ ಕೃತ್ಯದಲ್ಲಿ ಪಾಲುದಾರರಾಗಿದ್ದರು.ಕದ್ದ ಚಿನ್ನ ಎಂದು ಗೊತ್ತಿದ್ದರೂ ಖರೀದಿ ಮಾಡುತ್ತಿದ್ದ ಜ್ಯುವೆಲ್ಲರಿ ಮಾಲೀಕರನ್ನೂ ಬಂಧಿಸಿಲಾಗಿದೆ.

ಬಂಧಿತರನ್ನು ಕೆಜಿ ಹಳ್ಳಿಯ ಬಾಗಲೂರು Lay out ನ ಜಾನ್ ಪ್ರವೀಣ್ ಆಲಿಯಾಸ್ ಮೂಗು ಮಚ್ಚೆ (32) ಈತನ ಪತ್ನಿ ಆನಂದಿ (19) ಅತ್ತೆ ಧನಲಕ್ಷ್ಮಿ (36) ಹಾಗೂ ಚಿನ್ನ ಖರೀದಿ ಮಾಡುತ್ತಿದ್ದ ಪಿಳ್ಳಣ್ಣ ಗಾರ್ಡನ್ ಭವರ್ ಲಾಲ್ (48) ಮತ್ತು ಚೇತನ್ ಚೌಧರಿ (29) ಎಂದು ಗುರುತಿಸಲಾಗಿದೆ. ಬಂಧಿತರಿಂದ 17.35 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : minor driving fine : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಾಯಿಗೆ 25,500 ರೂ ದಂಡ ವಿಧಿಸಿದ ಕೋರ್ಟ್

ಬೀಗ ಹಾಕಿದ ಮನೆಗಳನ್ನು ಗುರುತಿಸಿದ ಬಳಿಕ ಪ್ರವೀಣ್ ಮನೆಗೆ ನುಗ್ಗಿ ಚಿನ್ನಾಭರಣ ದೋಚಿಕೊಂಡು ಬರುತ್ತಿದ್ದ ಬಳಿಕ ಆನಂದಿ ಮತ್ತು ಧನಲಕ್ಷ್ಮಿ ಚಿನ್ನಾಭರಣಗಳನ್ನು  ಭವರ್ ಲಾಲ್ ಮತ್ತು ಚೇತನ್ ಗೆ ಮಾರಾಟ ಮಾಡುತ್ತಿದ್ದರು.ಅಂಗಡಿಗೆ ಹೋಗಿ ಮಾರಾಟ ಮಾಡಿದರೆ ಸಿಸಿಟಿವಿಯಲ್ಲಿ ಸಾಕ್ಷಿ ಸಿಗುತ್ತದೆ ಅನ್ನುವ ಕಾರಣದಿಂದ ತಾವಿದ್ದ ಜಾಗಕ್ಕೆ ಚಿನ್ನದ ವ್ಯಾಪಾರಿಗಳನ್ನು ಕರೆಸಿ ವ್ಯವಹಾರ ಕುದುರಿಸುತ್ತಿದ್ದರು. ಕಳ್ಳ ಮಾಲು ಖರೀದಿಸಿದ ಕರ್ಮಕ್ಕಾಗಿ ಇದೀಗ ವ್ಯಾಪಾರಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

ಎರಡು ಗಂಟೆ ಯುವತಿ ಒತ್ತೆಯಾಳು : ಯುವಕನಿಂದ ಹಣ ಚಿನ್ನ ಸುಲಿಗೆ

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪೊಲೀಸರು ಮಾಡುತ್ತಿರುವ ರೌಡಿ ಪರೇಡ್ ಗಳು ಫಲ ನೀಡುತ್ತಿಲ್ಲ. ಖಾಕಿ ಭಯವಿರುತ್ತಿದ್ರೆ ಪುಂಡರು ಪೋಕರಿಗಳು ಹೆಡೆ ಎತ್ತುತ್ತಿರಲಿಲ್ಲ

ಬೆಂಗಳೂರು : ಪ್ರಿಯಕರನ ಜೊತೆಗೆ ಸುತ್ತಾಡುತ್ತಿದ್ದ ಟೆಕ್ಕಿಯನ್ನು ಬೆದರಿಸಿ ಚಿನ್ನ ಮತ್ತು ಹಣವನ್ನು ಲೂಟಿ ಮಾಡಿದ್ದ ಮೂವರು ದುಷ್ಕರ್ಮಿಗಳನ್ನು ದೇವಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು  ದೇವನಹಳ್ಳಿ ಅಕ್ಕುಪೇಟೆ ನಿವಾಸಿ ಅನಿಲ್ ಕುಮಾರ್ ಆಲಿಯಾಸ್ ದೇವು, ಸುಬ್ರಮಣಿ ಆಲಿಯಾಸ್ ಸುಟ್ಟ ಮತ್ತು ಪವನ್ ಕುಮಾರ್ ಪೋಲಿ ಎಂದು ಗುರುತಿಸಲಾಗಿದೆ.

ಆಂಧ್ರಪ್ರದೇಶ ಮೂಲದ ಯುವತಿ ಹೊಸಕೋಟೆಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಯುವತಿಯೊಂದಿಗೆ ಚಿಕ್ಕಬಳ್ಳಾಪುರ ಮೂಲದ ಕಿರಣ್ ಅನ್ನುವ ಯುವಕನೊಂದಿಗೆ ಮದುವೆ ಕೂಡಾ ನಿಶ್ಚಯವಾಗಿತ್ತು. ಮುಂದಿನ ತಿಂಗಳು ಮದುವೆ ಕೂಡಾ ನಿಗದಿಯಾಗಿದೆ. ಈ ನಡುವೆ ಖಾಸಗಿ ಕಂಪನಿ ಉದ್ಯೋಗಿ ಕಿರಣ್ ಜುಲೈ 8 ರಂದು ತನ್ನ ಭಾವಿ ಪತ್ನಿ ದೇವನಹಳ್ಳಿಯ ಬೈಪಾಸ್ ರಸ್ತೆಯ ಹೋಟೆಲ್ ಒಂದರಲ್ಲಿ ಊಟ ಮುಗಿಸಿ 10,30ರ ಸುಮಾರಿಗೆ ಮರಳುತ್ತಿದ್ದರು.

ಈ ವೇಳೆ ಮಾರ್ಗ ಮಧ್ಯೆ ಅಡ್ಡಗಟ್ಟಿದ ಆರೋಪಿಗಳು ಕಿರಣ್ ನನ್ನು ಕಬ್ಬಿಣದ ರಾಡ್ ನಿಂದ ಥಳಿಸಿ ಬೆದರಿಸಿ 10 ಗ್ರಾಮ್ ಚಿನ್ನದ ಸರ ಕಸಿದಿದ್ದಾರೆ. ಈ ವೇಳೆ ಹಣವಿಲ್ಲ ಅನ್ನುವುದನ್ನು ಅರಿತ ಆರೋಪಿಗಳು ಎಟಿಎಂನಿಂದ ಡ್ರಾ ಮಾಡಿ ಕೊಡುವಂತೆ ಧಮ್ಕಿ ಹಾಕಿದ್ದಾರೆ.

ಬಳಿಕ ಆರೋಪಿಗಳ ಪೈಕಿ ಸುಬ್ರಮಣಿ ಎಂಬಾತ ತಮ್ಮದೇ ಕಾರಿನಲ್ಲಿ ಕಿರಣ್ ನನ್ನು ಕೂರಿಸಿ ಎಟಿಎಂನಿಂದ 15 ಸಾವಿರ ಡ್ರಾ ಮಾಡಿಸಿದ್ದಾನೆ. ಬಳಿ ಮಾರ್ಗ ಮಧ್ಯೆ ಊಟ ಹಾಗೂ ಮದ್ಯ ಪಾರ್ಸೆಲ್ ಮಾಡಿಸಿಕೊಂಡು ದೇವನಹಳ್ಳಿ ಬೈಪಾಸ್ ಗೆ ಮರಳಿದ್ದಾನೆ.

ಅಷ್ಟು ಹೊತ್ತು ತನಕ ಏನಿಲ್ಲ ಅಂದರೂ ಎರಡು ಗಂಟೆಗಳ ಕಾಲ ಯುವತಿ ದುಷ್ಕರ್ಮಿಗಳ ವಶದಲ್ಲಿ ಇದ್ದಳು. ಮರು ದಿನ ಯುವತಿ ದೇವನಹಳ್ಳಿ ಠಾಣೆಗೆ ಕೃತ್ಯದ ಬಗ್ಗೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 10 ಗ್ರಾಂ ಚಿನ್ನದ ಸರ, ಕಾರು ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.

ಈ ಘಟನೆಯಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಮಟ್ಟಿಗೆ ಪೊಲೀಸರ ಕಾರ್ಯ ಮೆಚ್ಚಬೇಕು. ಆದರೆ ದುಷ್ಕರ್ಮಿಗಳು ಹೀಗೆ ಕೃತ್ಯ ಎಸಗುತ್ತಿದ್ದಾರೆ ಅಂದ್ರೆ ಅವರಿಗೆ ಕಾನೂನು, ಪೊಲೀಸರ ಭಯವಿಲ್ಲ ಎಂದೇ ಅರ್ಥ. ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಸರ್ಕಾರ ಕೊಟ್ಟಿರುವ ಆಸ್ತ್ರಗಳನ್ನು ಸರಿಯಾಗಿ ಬಳಸಿದರೆ ಕ್ರಿಮಿನಲ್ ಗಳು ತಲೆ ಎತ್ತಲು ಸಾಧ್ಯವೇ…

Tags: MAIN
ShareTweetSendShare

Discussion about this post

Related News

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

honey-trap-gang-busted-in-bluru-woman-arrested

Honey trap : ಮಂಚದಾಟಕ್ಕೆ ಮನೆಗೆ ಆಹ್ವಾನ : ಹನಿಟ್ರ್ಯಾಪ್’ಗೆ ಪ್ರಿಯತಮೆಯನ್ನೇ ಬಿಟ್ಟಿದ್ದ ಪ್ರೇಮಿ

KGF-inspired : ಸಿನಿಮಾ ಪ್ರೇರಣೆಯಿಂದ ಸರಣಿ ಕೊಲೆ : ಸಮಾಜದ ಸ್ವಾಸ್ಥ್ಯ ಕೆಡಿಸುವ ಚಿತ್ರಗಳ ಬಗ್ಗೆ ಇರಲಿ ಎಚ್ಚರ

Mysuru crime : ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ : ಪ್ರಿಯಕರನ್ನು ಬಂಧಿಸಿದ ಪೊಲೀಸರು

Fake journalists : ಅಕ್ಕಿ ವ್ಯಾಪಾರಿಯಿಂದ 5 ಲಕ್ಷ ಪೀಕಿಸಲು ಹೋದ 6 ಮಂದಿ ನಕಲಿ ಪತ್ರಕರ್ತರು ಅಂದರ್

Kerala honey trap : ದೇವರನಾಡಿನಲ್ಲಿ ಬಾಡಿಗೆ ಜೋಡಿ : ಒಂದು ಹನಿ ಟ್ರ್ಯಾಪ್ ಗೆ 40 ಸಾವಿರ

Bengaluru crime : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಮಿಷ : 4 ಕೋಟಿ ರೂ ಸುಲಿಗೆಗೆ ಮುಂದಾದ ಸುಂದರಿಯ ಬಂಧನ

Mandya honey trap : ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ : ಸಲ್ಮಾಭಾನು ಎಂಬಾಕೆಯನ್ನು ಬಂಧಿಸಿದ ಪೊಲೀಸರು

Police :ಸಾಮಾಜಿಕ ಕಾರ್ಯಕರ್ತೆಯ ದಂಧೆ : ಯುವತಿಗೆ ಲೈಂಗಿಕ ಶೋಷಣೆ : ಮೂವರು ಅಂದರ್

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್