ಬೆಂಗಳೂರು : ವೇಶ್ಯೆಯರಿಗೆ ಹಣ ಸುರಿಯುವ ಸಲುವಾಗಿ ಕಾರು ಕದಿಯುತ್ತಿದ್ದ ಖದೀಮನನ್ನು ( Car theft ) ಎಚ್.ಎಸ್.ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೋಲಾರ ಮುಳಬಾಗಿಲು ಮೂಲದ ಅರುಣ್ ಕುಮಾರ್ ( 25 ) ಎಂದು ಗುರುತಿಸಲಾಗಿದೆ. ಬಿ.ಕಾಂ ಪದವೀಧರನಾಗಿದ್ದ ಈತ ಕಳೆದ 5 ತಿಂಗಳಿನಿಂದ ದೇವರಬೀಸನಹಳ್ಳಿಯಲ್ಲಿ ವಾಸವಾಗಿದ್ದ
ಕಳೆದ ಕೆಲವು ದಿನಗಳಿಂದ HSR Police Station ವ್ಯಾಪ್ತಿಯಲ್ಲಿ ಕಾರು ಕಳ್ಳತನದ ( Car theft )ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು. ವಿಶೇಷ ಅಂದ್ರೆ ಲಾಕ್ ಮಾಡಿದ ಹೈ ಸೆಕ್ಯೂರಿಟಿ ಹೊಂದಿದ ಕಾರುಗಳೇ ಕಳ್ಳತನವಾಗುತ್ತಿತ್ತು. ಇದು ಪೊಲೀಸರ ತಲೆ ಬಿಸಿಗೂ ಕಾರಣವಾಗಿತ್ತು.
ಈ ನಡುವೆ ಠಾಣಾ ವ್ಯಾಪ್ತಿಯ ಟೀಚರ್ಸ್ ಕಾಲೋನಿಯ ಮುಖ್ಯರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಕಳುವು ಮಾಡಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರ ಕೈಗೆ ಅರುಣ್ ಕುಮಾರ್ ಸಿಕ್ಕಿಬಿದ್ದಿದ್ದಾನೆ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ರೆ ಹಲವಾರು ಕಾರು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನಿಂದ 10 ಕಾರು, ಒಂದು ಟೂ ವೀಲ್ಹರ್, ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : Karnataka news : ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ತಾರಾ ಸರ್ಕಸ್ ಸಕ್ಸಸ್ : ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿ ಮುಂದುವರಿಕೆ
ಆದ್ಯಾಕೆ ಕಾರು ಕಳ್ಳತನ ಮಾಡುತ್ತೀಯಾ ಅಂದಾಗ ಅರುಣ್ ಹೇಳಿದ ಕಥೆಯನ್ನ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ವೇಶ್ಯೆಯರ ಚಟಕ್ಕೆ ಬಿದ್ದಿದ್ದ ಅರುಣ್ ಕುಮಾರ್ ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ದರೋಡೆ, ಕಳ್ಳತನ ಮಾಡುತ್ತಿದ್ದ. ಹೀಗೆ ದರೋಡೆ ಪ್ರಕರಣವೊಂದರಲ್ಲಿ ಆಂಧ್ರ ಪ್ರದೇಶ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿ ಮದನಪಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿ ರಾಕೇಶ್ ಅನ್ನುವಾತನ ಪರಿಚಯವಾಗಿತ್ತು. ಈ ರಾಕೇಶ್, ತಂತ್ರಜ್ಞಾನ ಬಳಸಿ ಕಾರು ಕಳುವು ಮಾಡುವ ಬಗ್ಗೆ ಮಾಹಿತಿ ಕೊಟ್ಟಿದ್ದ.
ಜೈಲಿನಿಂದ ಹೊರ ಬಂದವನೇ ಯೂಟ್ಯೂಬ್ ನಲ್ಲಿ ಕಾರು ಕಳ್ಳತನಕ್ಕೆ ಬಳಸುವ ಡಿವೈಸ್ ಬಗ್ಗೆ ಅಧ್ಯಯನ ಮಾಡಿದ್ದ. ಜೊತೆಗೆ 50 ಸಾವಿರ ರೂಪಾಯಿ ಪಾವತಿಸಿ ಚೀನಾದಿಂದ ಎಕ್ಸ್ ಟೂಲ್, ಆಟೋ ಡಯಾಗ್ನೋಸ್ಟಿಕ್ ಟೂಲ್ ಡಿವೈಸ್ ತರಿಸಿಕೊಂಡಿದ್ದ. ಈ ಸಾಧನದ ಮೂಲಕ ಕಾರಿನ ಸಾಫ್ಟ್ ವೇರ್ ಹ್ಯಾಕ್ ಮಾಡಿ ಕೋಣನಕುಂಟೆ, ಮೈಕೋ ಲೇ ಜೌಟ್, ಬಿಡದಿ ಸೇರಿ ಹಲವು ಭಾಗಗಳಲ್ಲಿ ಕಾರು ಎಗರಿಸಿದ್ದ.
ಇದನ್ನೂ ಓದಿ : basavaraj bommai : ನಳಿನ್ ಕುಮಾರ್ ಕಟೀಲು ಅವರಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹೀಗೆ ಕದ್ದ ಕಾರುಗಳನ್ನು ತಮಿಳುನಾಡು, ಆಂಧ್ರಕ್ಕೆ ಒಯ್ದು ನಕಲಿ ಆರ್.ಸಿ. ವಿಮಾ ದಾಖಲೆ, ಸೃಷ್ಟಿಸಿ ಗಿರಾಕಿಗಳಿಗೆ ಕಡಿಮೆ ದರಕ್ಕೆ ಕಾರು ಮಾರಾಟ ಮಾಡುತ್ತಿದ್ದ. ಹೀಗೆ ಬಂದ ದುಡ್ಡನ್ನು ವೇಶ್ಯೆಯರ ಸಹವಾಸಕ್ಕೆ ಸುರಿಯುತ್ತಿದ್ದ. ಕೆಲವೊಮ್ಮೆ ಯುವತಿಯರ ಜೊತೆ ಪ್ರವಾಸಿ ತಾಣಗಳಿಗೆ ತೆರಳಿ ಮಜಾ ಉಡಾಯಿಸುತ್ತಿದ್ದ. ಗೋವಾ ಪಾಂಡಿಚೇರಿ ಕಡೆ ಹೋಗಿ ಸ್ಟಾರ್ ಹೊಟೇಲ್ ಗಳಲ್ಲಿ ವಾಸ್ತವ್ಯ ಹೂಡಿ,ಕ್ಯಾಸಿನೋಗಳಲ್ಲಿ ಜೂಜಾಡುತ್ತಿದ್ದ. ಕಾಸು ಖಾಲಿಯಾಗುತ್ತಿದ್ದಂತೆ ಮತ್ತೆ ಕಳ್ಳತನ ಕೆಲಸಕ್ಕೆ ಬರುತ್ತಿದ್ದ.
Discussion about this post