ಈ ದುರ್ಘಟನೆ ಸ್ಥಳೀಯ ಜನಪ್ರತಿನಿಧಿಯೇ ನೇರ ಕಾರಣ. ಪ್ರತೀ ಗ್ರಾಮಕ್ಕೆ ಸರಿಯಾದ ಕಾಲು ಸಂಕ ಮಾಡಿರುತ್ತಿದ್ರೆ ಹೀಗಾಗುತ್ತಿರಲಿಲ್ಲ (Byndur)
ಉಡುಪಿ : ಶಾಲೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ 7 ವರ್ಷದ ಬಾಲಕಿ ಮರದ ಕಾಲು ಸಂಕದಿಂದ ಕಾಲು ಜಾರಿ ಹೊಳೆ ಪಾಲಾದ ದಾರುಣ ಘಟನೆ ಉಡುಪಿ ಜಿಲ್ಲೆಯ ಬೈಂದೂರು (Byndur) ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ನಡೆದಿದೆ. ನೀರು ಪಾಲಾದ ಬಾಲಕಿಯನ್ನು ಸನ್ನಿಧಿ (7) ಎಂದು ಗುರುತಿಸಲಾಗಿದೆ.
![udupi girl1](https://torrentspree.com/wp-content/uploads/2022/08/udupi-girl1.jpg)
ಚಪ್ಪರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಸನ್ನಿಧಿ ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮರದ ದಿಮ್ಮಿಯಿಂದ ನಿರ್ಮಿಸಲಾದ ಕಾಲು ಸಂಕ ದಾಟುವಾಗ ಕಾಲು ಜಾರಿ ಹೊಳೆಗೆ ಬಿದ್ದಿದ್ದಾಳೆ.
![udupi girl2](https://torrentspree.com/wp-content/uploads/2022/08/udupi-girl2.jpg)
ಇದೀಗ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಊರವರು ರಕ್ಷಣಾ ತಂಡದೊಂದಿಗೆ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : Bengaluru news : ಹಸುವಿನ ಕೆಚ್ಚಲು, ಬಾಲ ಕತ್ತರಿಸುತ್ತಿದ್ದ ಪಾಪಿಯ ಬಂಧನ
Discussion about this post