Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

bengaluru rowdies : ಉಚ್ಚೆ ಹೊಯ್ಯುವ ವಿಚಾರಕ್ಕೆ ಬಾರ್ ನಲ್ಲಿ ಕಿತ್ತಾಡಿಕೊಂಡ ಎರಡು ರೌಡಿ ಗ್ಯಾಂಗ್

Radhakrishna Anegundi by Radhakrishna Anegundi
July 18, 2022
in ಕ್ರೈಮ್
bengaluru rowdies bangalore two-rowdy-groups-fight-bar
Share on FacebookShare on TwitterWhatsAppTelegram

ಮಚ್ಚು ಹಿಡಿದವರಿಗೆ ಕಿತ್ತಾಡಲು ಕಾರಣಗಳೇ ಬೇಕಿಲ್ಲ. ( bengaluru rowdies ) ಅದರಲ್ಲೂ ಖಾಕಿ ಭಯವಿಲ್ಲದೆ ಮರೆಯುತ್ತಿರುವ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ

ಬೆಂಗಳೂರು : ಬಾರ್ ಒಂದರ ಶೌಚಾಲಯದಲ್ಲಿ ಮೂತ್ರ ಹೊಯ್ಯುವಾಗ ಇಬ್ಬರು ರೌಡಿಗಳ ( bengaluru rowdies ) ನಡುವೆ ಪ್ರಾರಂಭವಾದ ಜಗಳ ಅತಿರೇಕಕ್ಕೆ ಹೋದ ಘಟನೆ ನಗರದ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಬಿಯಲ್ ಬಾಟಲಿಯಲ್ಲಿ ಹೊಡೆದಾಡಿಕೊಂಡ ರೌಡಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ( 25 ) ರಾಘವೇಂದ್ರ ತನ್ನ ಸ್ನೇಹಿತರಾದ ಆಕಾಶ್ ಮತ್ತು ನವೀನ್ ಜೊತೆಗೆ ಸೆವೆನ್ ಹಿಲ್ಸ್ ಬಾರ್ ಗೆ ತೆರಳಿದ್ದರು. ಇದೇ ಬಾರ್ ಗೆ ಶ್ರೀರಾಮಪುರ ಠಾಣೆಯ ರೌಡಿ ಶೀಟರ್ ಯಶವಂತ (24) ಕೂಡಾ ಬಂದಿದ್ದ.

ಇದನ್ನೂ ಓದಿ : xi jinping – ಇಸ್ಲಾಂ ಧರ್ಮ ಚೀನಾದಲ್ಲಿ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು

ರಾತ್ರಿ12.15ರ ಸುಮಾರಿಗೆ ರಾಘವೇಂದ್ರ ಮೂತ್ರ ವಿಸರ್ಜನೆ ಸಲುವಾಗಿ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಇದ್ದ ಮತ್ತೊಬ್ಬ ರೌಡಿ ಶೀಟರ್ ಯಶವಂತ್, ನನ್ನ ಯಾಕೆ ಗುರಾಯಿಸ್ತೀಯಾ ಎಂದು ಕಿರಿಕ್ ತೆಗೆದಿದ್ದಾನೆ. ಅಷ್ಟಕ್ಕೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಬಂದಿದೆ. ಈ ವೇಳೆ ಯಶವಂತ್ ಬಿಯರ್ ಬಾಟಲಿಯಿಂದ ರಾಘವೇಂದ್ರನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಯಶವಂತ್ ಸಹಚರರು ರಾಘವೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ ರಾಘವೇಂದ್ರ ಮತ್ತು ಆತನ ಸಹಚರರು ಯಶವಂತ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಹೀಗೆ ಎರಡು ಗುಂಪುಗಳ ಕೆಲ ಕಾಲ ಬಾರ್ ನಲ್ಲಿ ಪ್ರದರ್ಶನ ತೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ 5 ಮಂದಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಜನಾಕ್ರೋಶಕ್ಕೆ ನಡುಗಿದ ಸರ್ಕಾರ : ಶೀಘ್ರದಲ್ಲೇ ಹಾಲು ಮೊಸರು ದರ ಇಳಿಕೆ

ಅಕ್ಕಿ ಬೇಳೆ ಕಾಳು ಹಾಲು ಮೊಸರು ಹೀಗೆ ನಿತ್ಯ ಉಪಯೋಗಿಸುವ ವಸ್ತುಗಳ ಮೇಲಿನ GST ಪರಿಣಾಮ ಜನಸಾಮಾನ್ಯನ ಮೇಲಾಗಿದೆ.

ಬೆಂಗಳೂರು : ಆಚ್ಛೇ ದಿನ್ ಬರುತ್ತದೆ ಎಂದು ಕಾದಿದ್ದ ಮಂದಿಗೆ ಆಷಾಢ ತಿಂಗಳಲ್ಲೇ ಸರ್ಕಾರ ಶಾಕ್ ಕೊಟ್ಟಿದೆ. ಸೋಮವಾರದಿಂದ ಮತ್ತೊಂದು ಸುತ್ತಿನ ದುಬಾರಿ ದುನಿಯಾ ಪ್ರಾರಂಭವಾಗಿದ್ದು, ನಿತ್ಯ ಬಳಸುವ ವಸ್ತುಗಳು ತುಟ್ಟಿಯಾಗಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ದರ ಏರಿಕೆಯಿಂದ ತರ್ಕಾರಿ ಸೇರಿದಂತೆ ಅನೇಕ ನಿತ್ಯ ಬಳಕೆಯ ವಸ್ತುಗಳು ದುಬಾರಿಯಾಗಿದೆ. ಅದಕ್ಕೆ ಇದೀಗ GST ಹೆಸರಿನಲ್ಲಿ ಮತ್ತೊಂದು ದರಾಸುರನ ಸೇರ್ಪಡೆಯಾಗಿದೆ.

ಪ್ಯಾಕ್ ಮಾಡಿದ ವಸ್ತುಗಳಿಂದ ಹಿಡಿದು ಆಸ್ಪತ್ರೆಯ ಬಿಲ್ ತನಕ GST ಹಾಕಲಾಗಿದೆ. ಈ ಕಾರಣದಿಂದ ಅಕ್ಕಿ ಬೇಳೆ ಕಾಳು ಹಾಲು ಮೊಸರಿನ ದರವೂ ಏರಿಕೆಯಾಗಿದೆ. ಅದರಲ್ಲೂ ಅಕ್ಕಿ ಮತ್ತು ಬೇಳೆ ಕಾಳುಗಳನ್ನು ಮದ್ಯಮ ವರ್ಗದ ಮಂದಿ ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಒಂದು ಕಡೆ ಲಂಚ ಕೊಟ್ಟರೆ ಕೆಲಸವಾಗೋದಿಲ್ಲ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗಾದ್ರೆ ದುಡಿದ ಹಣದಲ್ಲಿ ಉಳಿತಾಯ ಮಾಡೋದಾದ್ರೂ ಹೇಗೆ ಅನ್ನುವುದು ಜನರ ಪ್ರಶ್ನೆಯಾಗಿತ್ತು.

ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ಯಾಕ್ ಮಾಡಿದ ವಸ್ತುಗಳ ದರ ಏರಿಸುವ ಅಗತ್ಯವಿಲ್ಲ. ಇದು ಉತ್ಪಾದಕರ ಮೇಲೆ ಹಾಕುವ GSTಯಾಗಿದೆ. ಇದನ್ನು ಉತ್ಪಾದಕರೇ ಕ್ಲೇಮ್ ಮಾಡಿಕೊಂಡು ವಾಪಾಸ್ ಪಡೆಯಲು ಅವಕಾಶವಿದೆ. ಹಾಗಿರುವಾಗ ಇದನ್ನು ಗ್ರಾಹಕರಿಗೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ. ಈ ಸಂಬಂಧ GST ಕೌನ್ಸಿಲ್ ನಿಂದಲೇ ಆದೇಶವೊಂದನ್ನು ಹೊರಡಿಸುವುದಾಗಿ ಹೇಳಿದ್ದಾರೆ.

ಈ ಮೂಲಕ ಶೀಘ್ರದಲ್ಲೇ ಏರಿದ ಬೆಲೆಗಳು ಇಳಿಯುವಂತಾಗಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಆಗಿರುವ  ಲೋಪವನ್ನು ಪತ್ತೆ ಹಚ್ಚಿ ಸರಿಪಡಿಸುವುದಾಗಿ ಹೇಳಿದ್ದಾರೆ. ಸಿಟಿ ರವಿ, ಈಶ್ವರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ ಈ ಹಿಂದೆ ನರೇಂದ್ರ ಮೋದಿಯವರು ಅಕ್ಕಿ ಕಾಳು ಬೇಳೆಗಳ ಮೇಲೆ ತೆರಿಗೆ ಹಾಕುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಟೀಕಿಸಿ ಮಾಡಿದ ಭಾಷಣ ವೈರಲ್ ಆಗುತ್ತಿದೆ. ಅವತ್ತು ನೀವು ಹೇಳಿದ್ದೇನು ಇವತ್ತು ನೀವು ಮಾಡುತ್ತಿರುವುದೇನು ಎಂದು ಪ್ರಶ್ನಿಸುತ್ತಿದ್ದಾರೆ.

Tags: MAIN
ShareTweetSendShare

Discussion about this post

Related News

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

honey-trap-gang-busted-in-bluru-woman-arrested

Honey trap : ಮಂಚದಾಟಕ್ಕೆ ಮನೆಗೆ ಆಹ್ವಾನ : ಹನಿಟ್ರ್ಯಾಪ್’ಗೆ ಪ್ರಿಯತಮೆಯನ್ನೇ ಬಿಟ್ಟಿದ್ದ ಪ್ರೇಮಿ

KGF-inspired : ಸಿನಿಮಾ ಪ್ರೇರಣೆಯಿಂದ ಸರಣಿ ಕೊಲೆ : ಸಮಾಜದ ಸ್ವಾಸ್ಥ್ಯ ಕೆಡಿಸುವ ಚಿತ್ರಗಳ ಬಗ್ಗೆ ಇರಲಿ ಎಚ್ಚರ

Mysuru crime : ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ : ಪ್ರಿಯಕರನ್ನು ಬಂಧಿಸಿದ ಪೊಲೀಸರು

Fake journalists : ಅಕ್ಕಿ ವ್ಯಾಪಾರಿಯಿಂದ 5 ಲಕ್ಷ ಪೀಕಿಸಲು ಹೋದ 6 ಮಂದಿ ನಕಲಿ ಪತ್ರಕರ್ತರು ಅಂದರ್

Kerala honey trap : ದೇವರನಾಡಿನಲ್ಲಿ ಬಾಡಿಗೆ ಜೋಡಿ : ಒಂದು ಹನಿ ಟ್ರ್ಯಾಪ್ ಗೆ 40 ಸಾವಿರ

Bengaluru crime : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಮಿಷ : 4 ಕೋಟಿ ರೂ ಸುಲಿಗೆಗೆ ಮುಂದಾದ ಸುಂದರಿಯ ಬಂಧನ

Mandya honey trap : ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ : ಸಲ್ಮಾಭಾನು ಎಂಬಾಕೆಯನ್ನು ಬಂಧಿಸಿದ ಪೊಲೀಸರು

Police :ಸಾಮಾಜಿಕ ಕಾರ್ಯಕರ್ತೆಯ ದಂಧೆ : ಯುವತಿಗೆ ಲೈಂಗಿಕ ಶೋಷಣೆ : ಮೂವರು ಅಂದರ್

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್