ಮಾಡಬೇಕಾದ ಕೆಲಸವನ್ನು ಮಾಡಿಕೊಂಡಿರುತ್ತಿದ್ರೆ ಸಾಯುವ ಸ್ಥಿತಿ ಬರುತ್ತಿರಲಿಲ್ಲ. ( bangalore murder ) ಅನ್ಯಾಯವಾದ ಮೇಲೆ ಕಾನೂನು ಪ್ರಕಾರ ಹೋಗಿರುತ್ತಿದ್ರೆ ದಂಪತಿ ಜೈಲು ಸೇರಬೇಕಾಗಿರಲಿಲ್ಲ
ಬೆಂಗಳೂರು : ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಬೆದರಿಸುತ್ತಿದ್ದ ಸ್ನೇಹಿತನನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ( bangalore murder ) ದಂಪತಿಯನ್ನು ಕಾಡುಗೋಡಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ಮೂಲಕ ಜುಲೈ 3 ರಂದು ಪತ್ತೆಯಾದ ಶವದ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.ಬಂಧಿತರನ್ನು ವಿಶಾಲ್ ಪ್ರಜಾಪತಿ, ರುಬಿ ಪ್ರಜಾಪತಿ ಮತ್ತು ಗುಂಜಾ ದೇವಿ ಎಂದು ಗುರುತಿಸಲಾಗಿದೆ.
ಹದಿನೈದು ದಿನಗಳ ಹಿಂದೆ ಉತ್ತರಪ್ರದೇಶ ಮೂಲದ ವಿಶಾಲ್ ಪ್ರಜಾಪತಿ, ರುಬಿ ಪ್ರಜಾಪತಿ, ಗುಂಜಾ ದೇವಿ ಹಾಗೂ ಬಿಹಾರದ ಓಂನಾಥ್ ಸಿಂಗ್ ಬೆಂಗಳೂರಿಗೆ ಬಂದಿದ್ದರು. ಬೆಳತ್ತೂರಿನ ನೆರೆಹೊರೆಯಲ್ಲಿ ಮನೆ ಮಾಡಿಕೊಂಡಿದ್ದ ಇವರ ಪೈಕಿ ಓಂನಾಥ್ ಗುಟ್ಕಾ ಪೂರೈಸುವ ಕೆಲಸ ಮಾಡುತ್ತಿದ್ದ. ವಿಶಾಲ್ ಗಾರ್ಮೆಂಟ್ಸ್ ನಲ್ಲಿ ಟೈಲರ್ ಆಗಿ ದುಡಿಯುತ್ತಿದ್ದ. ಈ ನಡುವೆ ಓಂನಾಥ್ ಸಿಂಗ್ ವಿಶಾಲ್ ಗೆ ತಿಳಿಯದಂತೆ ಆತನ ಪತ್ನಿ ರುಬಿ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಮಾತ್ರವಲ್ಲದೆ ರುಂಬಿ ಜೊತೆಗಿನ ಏಕಾಂತದ ದೃಶ್ಯಗಳನ್ನು ಸೆರೆ ಹಿಡಿದಿದ್ದ ಓಂನಾಥ್, ಅವನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ
ಇದನ್ನೂ ಓದಿ : rahul Gandhi : ಭಾರತ್ ಜೋಡೋ ಯಾತ್ರೆಯ ಸಭೆಯ ನಡುವೆಯೇ ಯುರೋಪ್ ಗೆ ಹಾರಿದ ರಾಹುಲ್
ಆದರೆ ಈ ಸಂಬಂಧ ತುಂಬಾ ದಿನ ನಡೆಯಲಿಲ್ಲ. ಪತ್ನಿ ರುಬಿ ಗೆಳೆಯನ ಜೊತೆಗೆ ಸಲುಗೆಯಿಂದ ಇರುವುದು ವಿಶಾಲ್ ಗೆ ಗೊತ್ತಾಗಿದೆ. ಹೀಗಾಗಿ ಹೆಂಡತಿಯನ್ನು ಗದರಿದ್ದಾನೆ. ಆಗ ರುಬಿ “ ನನಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ಯಾಚಾರ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ” ಎಂದು ಕಣ್ಣೀರಿಟ್ಟಿದ್ದಳು.
ಹೀಗಾಗಿ ಜುಲೈ 3 ರಂದು ಮಾತುಕತೆ ನೆಪದಲ್ಲಿ ಓಂನಾಥ್ ನನ್ನು ಮನೆಗೆ ಕರೆಸಿಕೊಂಡ ದಂಪತಿ, ದುಪ್ಪಟ್ಟದಿಂದ ಕುತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಮೂಟೆ ಕಟ್ಟಿ ಬೆಳತ್ತೂರು – ಕೊಡಿಗೇಹಳ್ಳಿ ಮುಖ್ಯರಸ್ತೆಯ ಚರಂಡಿ ಬಳಿ ಬಿಸಾಡಿ ಪರಾರಿಯಾಗಿದ್ದರು.
ಅಪರಿಚಿತ ವ್ಯಕ್ತಿಯ ಶವ ಸಿಕ್ಕ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು ತಾಂತ್ರಿಕ ಮಾಹಿತಿ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ಆಗ ಆತ್ಮೀಯರೇ ಕೊಲೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಮಂಗಳೂರಿಗೆ ಪರಾರಿಯಾಗಿರುವ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಆರೋಪಿಗಳನ್ನು ಮಂಗಳೂರಿನಲ್ಲೇ ಬಂಧಿಸಲಾಗಿದೆ. ಇನ್ನು ಕೊಲೆಗೆ ಸಹಕರಿಸಿದ ಗುಂಜಾ ದೇವಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ಪತ್ತೆದಾರಿಕೆ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದ ಪಾಕ್ ಪತ್ರಕರ್ತ
ಯುಪಿಎ ಸರ್ಕಾರದಲ್ಲಿ ಈ Pakistan journalist ಘಟನೆ ನಡೆದಿದ್ದು, ಯಾವುದೆಲ್ಲಾ ಮಾಹಿತಿಗಳು ಪಾಕ್ ಐಎಸ್ಐ ಕೈ ಸೇರಿದೆ ಅನ್ನುವುದು ಗೊತ್ತಿಲ್ಲ
ನವದೆಹಲಿ : ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪತ್ರಕರ್ತನೊಬ್ಬ ( Pakistan journalist ) ಬೆಂಗಳೂರಿನಲ್ಲಿ ಪತ್ತೆದಾರಿ ಕೆಲಸ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಐಎಸ್ಐ ಸಂಘಟನೆಗೆ ಕೊಟ್ಟ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ವಿಷಯವನ್ನು ಬೆಂಗಳೂರಿನಲ್ಲಿ ಪತ್ತೆದಾರಿಕೆ ನಡೆಸಿದ್ದ ಪಾಕಿಸ್ತಾನ ಹಿರಿಯ ಅಂಕಣಕಾರ ನುಸ್ರತ್ ಮಿರ್ಜಾ ಅವರೇ ಬಹಿರಂಗಪಡಿಸಿದ್ದಾರೆ. ಶಕೀಲ್ ಚೌಧರಿಯವರ ಯೂ ಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಈ ಸ್ಫೋಟಕ ಹೇಳಿಕೆಯನ್ನು ನುಸ್ರತ್ ಮಿರ್ಜಾ ಬಹಿರಂಗಪಡಿಸಿದ್ದು, ಯಾವೆಲ್ಲಾ ಮಾಹಿತಿಗಳನ್ನು ಅವರು ಸಂಗ್ರಹಿಸಿದ್ದಾರೆ.ಯಾವೆಲ್ಲಾ ಮಾಹಿತಿಗಳು ಪಾಕಿಸ್ತಾನದ ಐಎಸ್ಐ ಕೈ ಸೇರಿದೆ ಅನ್ನುವುದು ಮಾತ್ರ ಗೊತ್ತಾಗಿಲ್ಲ.
( ಮನಮೋಹನ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ) ಅಂದ್ರೆ 2005 ರಿಂದ 2011 ರ ವೇಳೆಯಲ್ಲಿ ನಾನು ಭಾರತಕ್ಕೆ ಹೋಗಿದ್ದೆ. ಆಗ ಖುರ್ಷಿದ್ ಮೆಹಮೂದ್ ಪಾಕ್ ವಿದೇಶಾಂಗ ಸಚಿವರಾಗಿದ್ದರು. ಪಾಕಿಸ್ತಾನದಿಂದ ಭಾರತಕ್ಕೆ ಹೋಗುವವರಿಗೆ ಮೂರು ಊರುಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ. ಆದರೆ ಖುರ್ಷಿದ್ ಮೆಹಮೂದ್ ಕಾರಣದಿಂದ ನಾನು 7 ನಗರಗಳಿಗೆ ಭೇಟಿ ನೀಡುವ ಅವಕಾಶ ಗಿಟ್ಟಿಸಿಕೊಂಡೆ. ಹೀಗಾಗಿ ನಾನು ಬೆಂಗಳೂರು, ಚೆನೈ, ಕೋಲ್ಕತಾ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟೆ.
ಒಮ್ಮೆ ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಆಹ್ವಾನದ ಮೇರೆಗೆ ಉಗ್ರವಾದ ಕುರಿತು ಉಪನ್ಯಾಸ ನೀಡಲು ಭಾರತಕ್ಕೆ ಭೇಟಿ ಕೊಟ್ಟೆ ಅಂದಿರುವ ಮಿರ್ಜಾ ಈ ವೇಳೆ ಅನೇಕ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಪತ್ರಕರ್ತರನ್ನು ಭೇಟಿ ಮಾಡಿ ಸಂದರ್ಶನ ನೀಡಿದ್ದೇನೆ ಅಂದಿದ್ದಾರೆ.
Discussion about this post