ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಲು ಭಯವಾಗುತ್ತಿದೆ. ಪೊಲೀಸ್ ಠಾಣೆಗಳಲ್ಲಿ ನ್ಯಾಯ ಸಿಗುತ್ತದೆ ಅನ್ನುವ ಭರವಸೆಗಳು ಕಾಣಿಸುತ್ತಿಲ್ಲ. ಬದಲಾಗಿ ಪೊಲೀಸ್ ಆಯುಕ್ತರ ಕಚೇರಿಗೋ, ಪೊಲೀಸ್ ಮಹಾ ನಿರ್ದೇಶಕರನ್ನೇ ನೇರವಾಗಿ ಭೇಟಿಯಾದರೆ ಮಾತ್ರ ನ್ಯಾಯ ಸಿಗಬಹುದೇನೋ. ಕಾರಣ ಸಿಂಪಲ್… ಲಂಚ ಸ್ವೀಕರಿಸಿದ ಆರೋಪದಲ್ಲಿ ಅಮಾನತುಗೊಳ್ಳುತ್ತಿರುವ ಪೊಲೀಸರ ಸಂಖ್ಯೆ ಹೆಚ್ಚುತ್ತಿದೆ. ದುರಂತ ಅಂದ್ರೆ ಲಂಚ ಸ್ವೀಕರಿಸುವುದರಲ್ಲಿ ಮಹಿಳಾ ಇನ್ಸ್ ಪೆಕ್ಟರ್ ಗಳು ಪುರುಷ ಅಧಿಕಾರಿಗಳನ್ನು ಮೀರಿಸುವಂತಿದ್ದಾರೆ.
ಹೋಂ ಡೆಕೊರೇಷನ್ ವಿಚಾರದಲ್ಲಿನ ವಿವಾದ ಬಗೆಹರಿಸುವ ನೆಪದಲ್ಲಿ ಉದ್ಯಮಿ ಬಳಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ ಪೆಕ್ಟರ್ ರೇಣುಕಾ ಇದೀಗ ಅಮಾನತುಗೊಂಡಿದ್ದಾರೆ. ವೈಟ್ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇಣುಕಾ ಜೊತೆಗೆ ಇಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಪೇದೆಯನ್ನು ಕೂಡಾ ಅಮಾನತು ಮಾಡಲಾಗಿದೆ.
ಎಸಿಬಿ ಸಲ್ಲಿಸಿದ ವರದಿ ಆಧಾರದಲ್ಲಿ ಡಿಜಿಪಿ ಪ್ರವೀಣ್ ಸೂದ್ ಅವರು ಇನ್ಸ್ಪೆಕ್ಟರ್ ರೇಣುಕಾ ಅವರನ್ನು ಅಮಾನತು ಮಾಡಿದರೆ, ಪಿಎಸ್ಐ ನವೀನ್ ಮತ್ತು ಗಣೇಶ್ ಹಾಗೂ ಕಾನ್ಸ್ಟೇಬಲ್ ಹೇಮಂತ್ ರನ್ನ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ
ಘಟನೆಯ ವಿವರ – ಸುದೀಪ್ ಅವರ ದೂರನ್ನು ಆಧರಿಸಿ
ಇದನ್ನೂ ಓದಿ : ಲೇಡಿ ಸಿಂಗಂ ಆಗಲು ಹೋದ ಬಿಲ್ಡಪ್ ಇನ್ಸ್ ಪೆಕ್ಟರ್ ಪಾರ್ವತಮ್ಮ ಅಮಾನತು : ಗಾಂಜಾ ಸೇದಿಸಿ ಕೇಸ್ ಹಾಕಿದ್ದ ಪಾಪಿ ಪೊಲೀಸರು
ಒಳಾಂಗಣ ವಿನ್ಯಾಸ ಕೆಲಸ ಮಾಡಿಕೊಡುವ ಸಲುವಾಗಿ ಸುದೀಪ್ ಅನ್ನುವವರು ಕಾಸು ಪಡೆದು ಯಾವುದೇ ಕೆಲಸ ಮಾಡಿಲ್ಲ, ಹಾಗೂ ಕಾಸೂ ವಾಪಸು ಕೊಟ್ಟಿಲ್ಲ ಎಂದು ಶ್ವೇತಾಸಿಂಗ್ ಎಂಬುವರು ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ಮಾಡಬೇಕಾಗಿದ್ದ ಪೊಲೀಸರು ಮಾಡಿದ್ದು ಮಾತ್ರ ಖತರ್ನಾಕ್ ಕೆಲಸ
ದೂರು ಬಂದ ಬೆನ್ನಲ್ಲೇ ಜುಲೈ 16ರಂದು ಸುದೀಪ್ ಮನೆ ಬಂದ್ದ ಪೊಲೀಸರು, ವಿಚಾರಣೆ ಮಾಡಬೇಕೆಂದು ಹೇಳಿ ಪತ್ನಿಯೊಂದಿಗೆ ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಕಿ ಇರುವ ಕೆಲಸ ಪೂರ್ಣಗೊಳಿಸಲು ಟೈಮ್ ಕೊಡಿ ಅಂದ್ರೆ ಅದಕ್ಕೆ ಅವಕಾಶವೇ ಕೊಡಲಿಲ್ಲವಂತೆ.
ಈ ವೇಳೆ ಆಗ ಪಿಎಸ್ಐ ನವೀನ್, ಶ್ವೇತಾ ಅವರಿಗೆ ತಕ್ಷಣ 5 ಲಕ್ಷ ರೂ ಕೊಡಿ ನಿಮ್ಮನ್ನು ಬಂಧಿಸಬಾರದು ಅನ್ನುವುದಾದ್ರೆ ನಮಗೆ 10 ಲಕ್ಷ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅದರಂತೆ ಸಂಬಂಧಿ ಚಂದ್ರನ್ ಬಳಿ 10 ಲಕ್ಷ ರೂಪಾಯಿ ಪಡೆದು, 5 ಲಕ್ಷ ರೂಪಾಯಿಯನ್ನು ಶ್ವೇತಾ ಸಿಂಗ್ ಹಾಗೂ ಉಳಿದ 5 ಲಕ್ಷವನ್ನು ಪಿಎಸ್ಐ ನವೀನ್ ಅವರಿಗೆ ನೀಡಿದ್ದಾರೆ. ಹಾಗಿದ್ದರೂ ಪೊಲೀಸರ ಹಣದ ದಾಹ ಮಾತ್ರ ಇಂಗಿರಲಿಲ್ಲ. ಮತ್ತೆ ಸುದೀಪ್ ಗೆ ಕರೆ ಮಾಡಿದ್ದ ನವೀನ್ ಬಾಕಿ 5 ಲಕ್ಷ ತಂದುಕೊಡುವಂತೆ ಒತ್ತಾಯಿಸಿದ್ದಾರೆ. ಜುಲೈ 17ರಂದು ಠಾಣೆಗೆ ಹೋಗಿ ಹಣ ಹೊಂದಿಸಲು ಅಸಾಧ್ಯ ಎಂದು ಕೈ ಚೆಲ್ಲಿದ್ದಾರೆ.
ಇದನ್ನೂ ಓದಿ : ಬರ್ತ್ ಡೇ ಕಂಟಕ : ಬಡ್ತಿ ಪಡೆದ ಮೂರೇ ದಿನಕ್ಕೆ ಅಮಾನತುಗೊಂಡ ಪೊಲೀಸ್ ಅಧಿಕಾರಿ
ಮತ್ತೆ ಜುಲೈ 19ಕ್ಕೆ ಕರೆ ಮಾಡಿದ ಪೊಲೀಸರು ಕಾಸಿನ ಹಿಂದೆ ಬಿದ್ದಿದ್ದಾರೆ. ಠಾಣೆಗೆ ಹೋಗಿ ಪಿಎಸ್ಐ ನವೀನ್ ನನ್ನು ಭೇಟಿಯಾದ್ರೆ. 5 ಲಕ್ಷವನ್ನು ಮೇಡಂ ಕೊಂಡೊಯ್ದ್ರು, ನಮ್ಗೆ ಒಂದು ರೂಪಾಯಿಯೂ ಸಿಗಲಿಲ್ಲ. ಹೀಗಾಗಿ ಇವತ್ತು 2 ಲಕ್ಷ, ನಾಳೆ 2 ಲಕ್ಷ ಕೊಡು ಅಂದಿದ್ದಾರೆ. ಪೊಲೀಸರ ವರ್ತನೆಯಿಂದ ಬೇಸತ್ತ ಸುದೀಪ್ ಎಸಿಬಿ ಬಾಗಿಲು ತಟ್ಟಿದ್ದಾರೆ. ಈ ಸಂಬಂಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದಾದ ಬಳಿಕ ಎಸಿಬಿ ಅಧಿಕಾರಿಗಳು ಇನ್ಸ್ಪೆಕ್ಟರ್ ರೇಣುಕಾ ಮನೆ ಮೇಲೆ ದಾಳಿ ಕೂಡಾ ಮಾಡಿದ್ದರು.
ದುರಂತ ಅಂದ್ರೆ ಒಂದು ವರ್ಷದ ಹಿಂದೆಷ್ಟೇ ರೇಣುಕಾ, ಪಿಎಸ್ಐಯಿಂದ ಇನ್ಸ್ಪೆಕ್ಟರ್ಗೆ ಬಡ್ತಿ ಪಡೆದಿದ್ದರು.
Discussion about this post