ಬೆಂಗಳೂರು : ಕೆಲ ದಿನಗಳ ಹಿಂದೆ ಸರ್ಕಾರಿ ಬಸ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಚುಂಬಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣವನ್ನು ಕೆಲ ಮಾಧ್ಯಮಗಳು ಗೀತಾ ಗೋವಿಂದಂ ಸಿನಿಮಾಗೆ ಹೋಲಿಸಿ ಜನರ ಟೀಕೆಗೆ ಗುರಿಯಾಗಿದ್ದವು. ವಿದ್ಯಾರ್ಥಿನಿಗೆ ಆಗಿರುವ ಮಾನಸಿಕ ಹಿಂಸೆಯನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಸಪ್ಟಂಬರ್ 12 ರಂದು ಬಳ್ಳಾರಿಯಿಂದ ನಗರಕ್ಕೆ KSRTC BUSನಲ್ಲಿ ಬಂದ ವಿದ್ಯಾರ್ಥಿನಿಯನ್ನು ಅದೇ ಬಸ್ ನಲ್ಲಿದ್ದ ಯುವಕನೊಬ್ಬ ಚುಂಬಿಸಿ ಪರಾರಿಯಾಗಿದ್ದ. ತುಮಕೂರು ರಸ್ತೆಯ ಟಿ. ದಾಸರಹಳ್ಳಿ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆ ಬಳಿಕ ವಿದ್ಯಾರ್ಥಿನಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕುಂಟೆ ಪೊಲೀಸರು, ಸಿಸಿಟಿವಿ ಹಾಗೂ ಬಸ್ ಟಿಕೆಟ್ ಮಾಹಿತಿ ಆಧರಿಸಿ ತನಿಖೆ ಪ್ರಾರಂಭಿಸಿದ್ದರು. ಈ ವೇಳೆ ವಿಜಯನಗರದ ನಿವಾಸಿ ಮಧುಸೂಧನ್ ರೆಡ್ಡಿ ಕೃತ್ಯ ಎಸಗಿದ್ದಾನೆ ಅನ್ನುವುದು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
Karnataka police have launched a hunt for a youth who kissed his co-passenger — a college student, before alighting from a bus in Bengaluru. According to the police, the incident took place on September 13, when the girl was returning to Bengaluru from Bellary in a state government-owned KSRTC luxury bus after Vinayak Chaturthi festival.
Discussion about this post