ಬೆಂಗಳೂರು : ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹೆಸರಿನಲ್ಲಿ ದೇವಸ್ಥಾನದ ಆರ್ಚಕನೊಬ್ಬ ಲಕ್ಷ ಲಕ್ಷ ಕಲೆಕ್ಷನ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರವಿ ನನ್ನ ಅಣ್ಣ, ಆಶ್ರಯ ಯೋಜನೆ ಅಡಿ ಮನೆ ಬೇಕಿದ್ದರೆ ಇಷ್ಟು ಲಕ್ಷ ಕೊಡಿ, ಅಣ್ಣನ ಇನ್ಫ್ಲುಯೆನ್ಸ್ ಮಾಡಿ ಮನೆ ಕೊಡಿಸುವೆ ಎಂದು ದೇವಾಲಯಕ್ಕೆ ಬರೋ ಭಕ್ತರಿಗೆ ಪಂಗನಾಮ ಹಾಕಿದ್ದಾನೆ.
ಉತ್ತರಹಳ್ಳಿಯ ಅರ್ಚಕ ಮಹಾಬಲ ಆಂಜನೇಯಸ್ವಾಮಿ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ದೇವಸ್ಥಾನಕ್ಕೆ ಬರೋ ಭಕ್ತರಿಗೆ ಚನ್ನಣ್ಣನವರ್ ನ್ನ ಸಹೋದರ ಎಂದು ಫೋಟೋ ತೋರಿಸಿ ನಂಬಿಸಿದ್ದಾನೆ. ಜೊತೆಗೆ ಸೆಲಿಬ್ರಿಟಿಗಳ ಜೊತೆ ತೆಗೆಸಿಕೊಂಡಿದ್ದ ಫೋಟೋ ತೋರಿಸಿ ತಾನೊಬ್ಬ ಪಿಸ್ತಾ ಎಂದು ಸಾರಿದ್ದಾನೆ. ದೇವರು ದಿಂಡಿರು, ಭಕ್ತಿ, ಶಾಂತಿ, ನೆಮ್ಮದಿ ಎಂದು ಬರೋ ಭಕ್ತರು ಇವನ ಮಾತುಗಳನ್ನು ನಂಬಿದ್ದಾರೆ.
ಯಾವಾಗ ಉಚಿತ ಮನೆ ಸಿಗುತ್ತದೆ ಎಂದು ಪುಂಗಿ ಉದಿದನೋ, ಅನೇಕ ಭಕ್ತರು 50 ಸಾವಿರದಿಂದ 1 ಲಕ್ಷ ರೂ. ವರೆಗೂ ಅರ್ಚಕನಿಗೆ ಕೊಟ್ಟಿದ್ದಾರೆ. ಅರ್ಚಕನ ಮಾತು ನಂಬಿ ದಾಖಲೆ ಕಾಸು ಕೊಟ್ಟವರು ಅದೆಷ್ಟು ತಿಂಗಳಾದರೂ ಮನೆ ಬರುವುದು ಕಾಣಿಸಲಿಲ್ಲ. ಕೊನೆಗೆ ಕೇಳಿದ್ರೆ ಕೊರೋನಾ, ರಾಜಕೀಯ ಬೆಳವಣಿಗೆ ಎಂದೆಲ್ಲಾ ಕಥೆ ಕಟ್ಟುತ್ತಿದ್ದ. ಇದ್ಯಾಕೋ ಅರ್ಚಕ ಚಾಲಕಿ ಅನ್ನುವ ಅನುಮಾನ ಬಂದು ಕಾಸು ಕೊಟ್ಟವರು ವಿಚಾರವನ್ನು ರವಿ ಚನ್ನಣ್ಣನವರ್ ಗಮನಕ್ಕೆ ತಂದಿದ್ದಾರೆ.
ಅವನ್ಯಾರೋ ನನಗೆ ಗೊತ್ತೇ ಇಲ್ಲ, ದೂರು ಕೊಟ್ಟು ಅರೆಸ್ಟ್ ಮಾಡಿಸಿ ಎಂದು ಸಲಹೆ ಕೊಟ್ಟ ನೇಲೆ ಅರ್ಚಕನ ವಿರುದ್ಧ ವಂಚನೆ ದೂರು ದಾಖಲಿಸಲಾಗಿದೆ. ಇದೀಗ ಅರ್ಚಕ ದೂರು ದಾಖಲಾಗುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾನೆ.
Discussion about this post