ಪ್ರಶಾಂತ್ ನೀಲ್ ಮೊದಲ ಬಾರಿಗೆ ನಿರ್ದೇಶಕರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು ಉಗ್ರಂ ಚಿತ್ರದ ಮೂಲಕ ಶ್ರೀಮುರಳಿಗಾಗಿ ‘ಉಗ್ರಂ’ ನಿರ್ದೇಶನ ಮಾಡಿದ್ದ ನೀಲ್, ಮುರುಳಿಗೆ ಸಿನಿ ಜರ್ನಿಯಲ್ಲಿ ದೊಡ್ಡ ಟರ್ನ್ ತಂದುಕೊಟ್ಟಿದ್ದರು.
ಇದಾದ ದೊಡ್ಡ ಗ್ಯಾಪ್ ನಂತ್ರ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿದ್ದು ಕೆಜಿಎಫ್ ಪ್ರಾಜೆಕ್ಟ್. ಇದು ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತು ಅನ್ನುವುದು ಇತಿಹಾಸ. ಇಡೀ ವಿಶ್ವವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ಹಿರಿಮೆ ಕೆಜಿಎಫ್ ನದ್ದು.
ಇದೀಗ ಕೆಜಿಎಫ್ ಪಾರ್ಟ್ 2 ಕೂಡಾ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗುತ್ತಿದೆ.
ಈ ನಡುವೆ ಹೊಸದೊಂದು ಸುದ್ದಿ ಬಂದಿದ್ದು, ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ನಿರ್ಮಾಪಕರಾಗುತ್ತಿದ್ದಾರೆ.
ಮತ್ತೆ ಶ್ರೀಮುರಳಿ ಚಿತ್ರಕ್ಕಾಗಿ ಬಂಡವಾಳ ಹೂಡುತ್ತಿರುವ ನೀಲ್ ನಿರ್ದೇಶನದ ಜವಾಬ್ದಾರಿಯನ್ನು ಸೂರಿಗೆ ವಹಿಸಿದ್ದಾರೆ.
ಶ್ರೀಮುರಳಿ ಹೊಸ ಸಿನಿಮಾಗೆ ಲಕ್ಕಿ ಖ್ಯಾತಿಯ ನಿರ್ದೇಶಕ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಯಶ್ ಮತ್ತು ರಮ್ಯಾ ನಟನೆಯ ಲಕ್ಕಿ ಸಿನಿಮಾ ನಿರ್ದೇಶನ ಮಾಡಿದ್ದ ಸೂರಿ ಈಗ ಶ್ರೀಮುರಳಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಡಾಕ್ಟರ್ ಆಗಿದ್ದ ಸೂರಿ ‘ಲಕ್ಕಿ’ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
Discussion about this post