ಬೆಂಗಳೂರು : ಒಬ್ಬ ಸೆಲೆಬ್ರೆಟಿಯಾದವನು, ಒಬ್ಬ ನಾಯಕ ಅನ್ನಿಸಿಕೊಂಡವನು ಹೇಗಿರಬಾರದು ಅಂದ್ರೆ, ದರ್ಶನ್ ರೀತಿ ಇರಬಾರದು ಅನ್ನುವುದು ಸ್ಪಷ್ಟ. ಇದಕ್ಕೆ ಸಾಕ್ಷಿ ಇಂದು ಅವರಾಡಿದ ಮಾತುಗಳು. ಸಮಾಜಕ್ಕೆ ಅದರ್ಶರಾಗಿರಬೇಕಾದ ದರ್ಶನ್, ಇಂದ್ರಜಿತ್ ಲಂಕೇಶ್ ವಿರುದ್ಧ ಮಾತನಾಡುವ ಭರದಲ್ಲಿ ಆಡಬಾರದ ಮಾತುಗಳನ್ನು ಆಡಿದ್ದಾರೆ. ತಮ್ಮ ಸುತ್ತ ಇರೋ ಮಂದಿಯನ್ನು ರಕ್ಷಿಸಬೇಕು ಅನ್ನುವ ಹಠಕ್ಕೆ ಬಿದ್ದಿರುವಂತಿರುವ ದರ್ಶನ್ ಆಡಿರುವ ಮಾತುಗಳನ್ನು ಕೇಳಿದ್ರೆ, ಛೇ…ಅನ್ನಿಸುತ್ತಿದೆ.
![darshan safari](https://torrentspree.com/wp-content/uploads/2021/04/darshan-safari.jpg)
ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಇಂದ್ರಜಿತ್ ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದ್ರಜಿತ್ ಲಂಕೇಶ್ ಅಪ್ಪನಿಗೆ ಹುಟ್ಟಿದವರೇ ಆಗಿದ್ದರೆ ಅವರು ದಾಖಲೆ ರಿಲೀಸ್ ಮಾಡಲಿ ಎಂದು ಸವಾಲು ಹಾಕಿರುವ ದರ್ಶನ್ ಅವರು ಎಷ್ಟು ಬೇಕಾದರೂ ದಾಖಲೆ ರಿಲೀಸ್ ಮಾಡಲಿ, ನಾನು ಕೇರ್ ಮಾಡೋದಿಲ್ಲ. ದೊಡ್ಮನೆ ಅನ್ನ ತಿಂದು ಬಂದಿರೋದು ನಾವು ನಮ್ಮ ಅಪ್ಪ ಕೂಡಾ ಅಲ್ಲೇ ಅನ್ನ ತಿಂದಿದ್ದಾರೆ.
Discussion about this post