IPS ಅಧಿಕಾರಿಯೇ ಬೆಚ್ಚಿ ಬೀಳುವ ರೀತಿಯಲ್ಲಿ ರೌಡಿಗಳು ಮನೆ ಕಟ್ಟಿಕೊಂಡಿದ್ದಾರೆ ಅಂದ್ರೆ ಅದೆಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರಬೇಡ
ಮಂಡ್ಯ : ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು. ಅಪರಾಧ ಪ್ರಕರಣಗಳು ಏರಿಕೆಯಾಗಿದೆ ಅನ್ನುವ ಕುರಿತಂತೆ ಕೆಡಿಪಿ ಸಬೆಯಲ್ಲಿ ಗಂಭೀರ ಚರ್ಚೆ ನಡೆದಿತ್ತು. ಕೊಲೆ, ಕೊಲೆ ಯತ್ನ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳಿಗೂ ಮಂಡ್ಯ ಸಾಕ್ಷಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಡಿಪಿ ಸಭೆಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಬುಧವಾರ ರಾತ್ರಿಯೇ ಫೀಲ್ಡಿಗೆ ಇಳಿದ ಮಂಡ್ಯ ಎಸ್ಪಿ ಯತೀಶ್ ಹಾಗೂ ಎಎಸ್ಪಿ ವೇಣುಗೋಪಾಲ್ ರೌಡಿಗಳ ಮನೆಗೆ ದಾಳಿ ನಡೆಸಿದ್ದಾರೆ. ರಾತ್ರೋ ರಾತ್ರಿ ಅಧಿಕಾರಿಗಳ ತಂಡದೊಂದಿಗೆ ತೆರಳಿದ ಎಸ್ಪಿ ಹಾಗೂ ಎಎಸ್ಪಿ ರೌಡಿಗಳಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ. ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ರೆ, ಜಿಲ್ಲೆಗೆ ಕಳಂಕ ತಂದ್ರೆ ಸುಮ್ಮನಿರೋದಿಲ್ಲ ಎಂದು ಯತೀಶ್ ಖಡಕ್ಕ್ ಸೂಚನೆ ನೀಡಿದ್ದಾರೆ.
ಈ ನಡುವೆ ರೌಡಿಯೊಬ್ಬನ ಮನೆ ಕಂಡ ಎಸ್ಪಿ ಯತೀಶ್ ಒಂದು ಕ್ಷಣ ಗಾಬರಿಯಾಗಿದ್ದಾರೆ. ಕೋಟಿ ಬೆಲೆ ಬಾಳುವ ಮನೆ ಕಟ್ಟಿರುವ ರಹಸ್ಯವನ್ನು ಕೇಳಿದ್ರೆ ಬಾಯಿ ಬಿಡಲು ರೌಡಿ ಸಿದ್ದವಿರಲಿಲ್ಲ. ಹೀಗಾಗಿ ಏನು ಕೆಲಸ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಏನು ಇಲ್ಲ ಅಂದಾಗ ಎಸ್ಪಿಯವರಗೆ ಕುತೂಹಲ ತಡೆಯಲಾಗಲಿಲ್ಲ. ಹೆಂಡ್ತಿ ಮಕ್ಕಳು ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಹೂ ಸರ್ ಅಂದಾಗ. “ ಅಲ್ಲಯ್ಯ ಏನು ಕೆಲಸ ಮಾಡ್ತೀಲ್ಲ ಅಂತೀಯಾ. ಇಷ್ಟು ದೊಡ್ಡ ಮನೆ ಕಟ್ಟಿದ್ದೀಯಾ, ಅದನ್ನ ಮೆಂಟೇನ್ ಮಾಡಬೇಕು, ಹೆಂಡ್ತಿ ಮಕ್ಕಳನ್ನು ಸಾಕಬೇಕು, ಹೇಗಯ್ಯ ಇದೆಲ್ಲಾ ಸಾಧ್ಯ ಅಂದಿದ್ದಾರೆ.
Discussion about this post