ಕೊರೋನಾ ಆತಂಕದ ನಡುವೆಯೂ ದೊಡ್ಮನೆ ಹುಡುಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಈ ಹಿಂದೆಯೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ನಿರ್ದೇಶಕ ಪವನ್ Action cut ಹೇಳಲಿದ್ದಾರೆ ಎಂದು ಗೊತ್ತಾಗಿತ್ತು ಆದರೆ ಚಿತ್ರದ ಟೈಟಲ್, ಚಿತ್ರದ ಕಥೆಯೇನು ಅನ್ನುವ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಹೊಸ ಚಿತ್ರಕ್ಕೆ ‘ದ್ವಿತ್ವ’ ಎಂದು ಶೀರ್ಷಿಕೆ ಇಡಲಾಗಿದೆ.
ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ಈ ಸಿನಿಮಾ ಸಲುವಾಗಿ ಬಂಡವಾಳ ಸುರಿಯಲಿದೆ. ಈಗಾಗಲೇ ಹೊಂಬಾಳೆ ಕೆಜಿಎಫ್, ‘ಸಲಾರ್’ ಹೀಗೆ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡೋ ಸಿನಿಮಾಗಳಿಗೆ ಬಂಡವಾಳ ಹಾಕಿದೆ. ಹೀಗಾಗಿಯೇ ದ್ವಿತ್ವ ಬಗ್ಗೆಯೂ ಕುತೂಹಲವಿದೆ.
ಇನ್ನು ಹೊಂಬಾಳೆ ಈ ಹಿಂದೆ ಪುನೀತ್ ಅವರ ನಿನ್ನಿಂದಲೇ, ರಾಜಕುಮಾರ, ಯುವರತ್ನ ಸಿನಿಮಾಗಳನ್ನು ನಿರ್ಮಿಸಿತ್ತು. ಇದು ಪುನೀತ್ ಜೊತೆಗಿನ ನಾಲ್ಕನೇ ಸಿನಿಮಾ.
ಈ ಚಿತ್ರದ ಛಾಯಾಗ್ರಹಣ ಜವಾಬ್ದಾರಿಯನ್ನು ಪ್ರೀತಾ ಜಯರಾಮನ್ ಹೊತ್ತುಕೊಂಡಿದ್ದು, ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಗಳಿದೆ.
Discussion about this post