ಬಂಟ್ವಾಳ : ಸಪ್ಟಂಬರ್ 8ರಂದು ಪಣೋಲಿಬೈಲ್ ಬಳಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಬೇಧಿಸಿರುವ ಬಂಟ್ವಾಳ ಪೊಲೀಸರು ಭೇಷ್ ಅನ್ನಿಸಿಕೊಂಡಿದ್ದಾರೆ. ಬಂಧಿತರನ್ನು ಪುತ್ತೂರು ಆರ್ಯಾಪು ಗ್ರಾಮದ ರೋಹಿತ್ (22) ಮತ್ತು ಲೋಹಿತ್ ಎಂದು ಗುರುತಿಸಲಾಗಿದೆ.
ಸೆ.8ರಂದು ಮಧ್ಯಾಹ್ನ ಪಣೋಲಿಬೈಲು ಬಳಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆ ವತ್ಸಲಾ (53) ಎಂಬವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಪರಾರಿಯಾಗಿದ್ದರು. ಈ ಸಬಂಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆ ಸಲುವಾಗಿ ತನಿಖೆ ಪ್ರಾರಂಭಿಸಿದ್ದರು. ಸಿಸಿಟಿವಿ ಸೇರಿದಂತೆ ತಾಂತ್ರಿಕ ಸಾಕ್ಷಿ ಆಧಾರದಲ್ಲಿ ಇದೀಗ ಪುತ್ತೂರಿನ ಇಬ್ಬರು ಖದೀಮರನ್ನು ಬಂಧಿಸಿ ಅಪರಾಧಕ್ಕಾಗಿ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Discussion about this post