ನಟ ಅರ್ಜುನ್ ಸರ್ಜಾ ಅವರ ಜೀವನದ ಬಹುದೊಡ್ಡ ಆಸೆಯೊಂದು ಇದೀಗ ನೆರವೇರಿದೆ. ಆಂಜನೇಯನಿಗೆ ಅದ್ಭುತವಾದ ಒಂದು ದೇವಸ್ಥಾನ ನಿರ್ಮಿಸಬೇಕು ಅನ್ನುವುದು ಅವರ ಅನೇಕ ವರ್ಷಗಳ ಕನಸಾಗಿತ್ತು. ಸಾಕಷ್ಟು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ದೇವಸ್ಥಾನ ನಿರ್ಮಾಣ ಕಾರ್ಯ ಇದೀಗ ಪೂರ್ಣಗೊಂಡಿದೆ. ಮಾತ್ರವಲ್ಲದೆ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೂ ದಿನ ನಿಗದಿಯಾಗಿದೆ.
ದೇವಸ್ಥಾನದ ಕುಂಭಾಭಿಷೇಕ ಸಮಾರಂಭ ಜುಲೈ1 ಹಾಗೂ ಜುಲೈ2ರಂದು ಚೆನ್ನೈನಲ್ಲಿ ನಡೆಲಿದೆ.
![arjun sarja2](https://torrentspree.com/wp-content/uploads/2021/06/arjun-sarja2.jpg)
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಸ್ನೇಹಿತರು, ಬಂಧುಗಳು ಹಾಗೂ ಭಕ್ತಾಧಿಗಳನ್ನು ಕರೆದು ತುಂಬ ಅದ್ದೂರಿಯಾಗಿ ಈ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ದೆ. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಿಲ್ಲ. ಹಾಗಿದ್ದರೂ ಜನರಿಗೆ ಈ ಕಾರ್ಯಕ್ರಮ ಮಿಸ್ ಆಗಬಾರದು ಎಂದು ಯೂಟ್ಯೂಬ್ ಮೂಲಕ ಲೈವ್ ಪ್ರಸಾರ ಮಾಡುತ್ತೇವೆ ಅಂದಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಆಂಜನೇಯನ ಭಕ್ತರಾಗಿರುವ ಸರ್ಜಾ ಕುಟುಂಬ ಪಾಲ್ಗೊಳ್ಳಲಿದೆ.
Discussion about this post