ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು
ಹಿಂದೂ ನಂಬಿಕೆಯಲ್ಲಿ ಪ್ರಕೃತಿದೆ ದೊಡ್ಡ ಸ್ಥಾನವನ್ನು ನೀಡಲಾಗಿದೆ. ಪಶು, ಪ್ರಾಣಿ, ಪಕ್ಷಿಗಳಿಗೂ ಈ ನಂಬಿಕೆಯಲ್ಲಿ ಜಾಗವಿದೆ. ಮಾತ್ರವಲ್ಲದೆ ಪ್ರತಿಯೊಂದು ದಿನಾಂಕ ಕೂಡಾ ತನ್ನದೇ ರೀತಿ ಮಹತ್ವ ಪಡೆದುಕೊಂಡಿದೆ. ಅದರಲ್ಲಿ ಅಮವಾಸ್ಯೆ ಹಾಗೂ ಹುಣ್ಣಿಮೆ ಬಗ್ಗೆ ವಿಶೇಷವಾದ ಮಾತುಗಳನ್ನು ಕೇಳಲಾಗಿದೆ. ಅಮಾವಾಸ್ಯೆಯನ್ನು ಪಿತೃಗಳಿಗಾಗಿ ಅಂದ್ರೆ ಸಂದು ಹೋದವರಿಗಾಗಿ ಮೀಸಲಿಡಲಾಗಿದೆ. ಈ ದಿನ ಆಚರಣೆಗೂ ತನ್ನದೇ ಆದ ನಿಯಮ, ವಿಧಿ ವಿಧಾನಗಳಿವೆ.
ಇನ್ನು ಅಮವಾಸ್ಯೆಯ ದಿನ ಕೆಲ ವಸ್ತುಗಳ ಖರೀದಿಸಬೇಡಿ ಅನ್ನಲಾಗಿದೆ. ಹೀಗಾಗಿ ಅಮವಾಸ್ಯೆ ದಿನ ನೀವು ಈ ವಸ್ತುಗಳ ಖರೀದಿ ಮಾಡುವಾಗ ಎಚ್ಚರಿಕೆ ವಹಿಸಿ
ಪೂಜೆಗೆ ಸಂಬಂಧಿಸಿದ ವಸ್ತುಗಳು
ಅಮಾವಾಸ್ಯೆ ಪಿತೃ ಕರ್ಮಕ್ಕೆ ಸೂಕ್ತ ದಿನ. ಹಾಗಂತ ಈ ದಿನ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದಂತೆ.
ಎಣ್ಣೆ
ಅಮಾವಾಸ್ಯೆ ಪಿತೃಗಳನ್ನು ಗೌರವಿಸುವ ದಿನವಾದ ಕಾರಣ, ಯಾವುದೇ ರೀತಿಯ ಅಲಂಕಾರವನ್ನು ಮಾಡಬಾರದಂತೆ. ಹೀಗಾಗಿ ಈ ದಿನ ಅಂದ್ರೆ ಅಮಾವಾಸ್ಯೆಯಂದು ತಲೆಗೆ ಎಣ್ಣೆ ಹಚ್ಚಬಾರದೆಂದು ಹೇಳಲಾಗಿದೆ. ಬದಲಾಗಿ, ಈ ದಿನದಲ್ಲಿ ಎಣ್ಣೆ ದಾನ ಮಾಡುವುದು ಪ್ರಯೋಜನಕಾರಿಯಂತೆ. ಶನಿ ದೋಷ ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.
ಗೋಧಿ
ಅಮಾವಾಸ್ಯೆ ದಿನ ಗೋಧಿ ಸೇರಿದಂತೆ ಯಾವುದೇ ಧಾನ್ಯ ಖರೀದಿಸುವುದು ಸೂಕ್ತವಲ್ಲ.ಇದು ಅಶುಭ ಎಂದು ನಂಬಲಾಗಿದೆ.
ಮದ್ಯ – ಮಾಂಸ
ಮದ್ಯವನ್ನು ಈ ದಿನ ಮಾತ್ರವಲ್ಲ ಜೀವನಪೂರ್ತಿ ಖರೀದಿಸದೇ ಇರುವುದು ತುಂಬಾ ಒಳ್ಳೆಯದು. ಜೀವನ ಪೂರ್ತಿ ಮದ್ಯ ಸೇವಿಸದೇ ಇರುವುದು ತುಂಬಾ ಶುಭಕರ. ಅದರಂತೆ ಅಮಾವಾಸ್ಯೆಯಂದು ಮದ್ಯ ಮಾಂಸ ಖರೀದಿಸುವುದು ಹಾಗೂ ಸೇವಿಸುವುದು ಅಶುಭ ಅನ್ನಲಾಗಿದೆ. ಲಾಲ್ ಕಿತಾಬ್ ಪ್ರಕಾರ, ಈ ದಿನದಲ್ಲಿ ಮಾಂಸ ಸೇವನೆಯಿಂದ ಶನಿಯ ತೊಂದರೆಗಳು ಹೆಚ್ಚಾಗುತ್ತವೆ ಅನ್ನಲಾಗಿದೆ
ಪೊರಕೆ
ಅಮಾವಾಸ್ಯೆಯಂದು ಜನ ಶನಿ ದೇವನನ್ನು ಪೂಜಿಸುತ್ತಾರೆ. ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಹೀಗಾಗಿ ಅಮಾವಾಸ್ಯೆಯಂದು ಪೊರಕೆ ಖರೀದಿಸಿದರೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳಂತೆ. ಹೀಗೆ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ ಅನ್ನುವುದು ನಂಬಿಕೆ.
Discussion about this post