ಬೆಂಗಳೂರು : ಚಂದನ್ ಆಚಾರ್, ಕಿರಿಕ್ ಪಾರ್ಟಿಯ ಸಿನಿಮಾ ಮೂಲಕ ಚಿತ್ರ ಪೇಮಿಗಳಿಗೆ ಪರಿಚಯವಾದವರು. ಅವರ ಅಸಲಿ ಮುಖ ಪರಿಚಯವಾಗಿದ್ದು ಬಿಗ್ ಬಾಸ್ ಮನೆಯಲ್ಲಿ.
ಕೆಲವರಿಗೆ ಚಂದನ್ ಸಿಕ್ಕಾಪಟ್ಟೆ ಇಷ್ಟವಾಗಿದ್ದರು, ಮತ್ತೆ ಕೆಲವರಿಗೆ ಅಯ್ಯೋ ಸಿಕ್ಕಾಪಟ್ಟೆ ಹುಳು ಬಿಡೋ ಪಾರ್ಟಿ ಎಂದು ಬೈಯ್ದುಕೊಂಡಿದ್ದರು. ಅದೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ ಚಂದನ್ ಆಚಾರ್ ಅದ್ಭುತ ಕಲಾವಿದ.
ತನ್ನೊಳಗಿನ ಕಲಾವಿದನನ್ನು ಅವರು “ಮಂಗಳವಾರ ರಜಾದಿನ” ಅನ್ನುವ ಚಿತ್ರದ ಮೂಲಕ ತೆರೆದಿಡಲಿದ್ದಾರೆ..
ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಅನ್ನುವುದೆ ಚಿತ್ರದ ಕಥಾ ಹಂದರ. ಅಂದ ಹಾಗೇ ಫೆ 5ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡಿದ್ರೆ. ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
Discussion about this post