ನವದೆಹಲಿ : ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ವುಹಾನ್ ವೈರಸ್ ದೃಢಪಟ್ಟಿದೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕರ್ನಾಟಕ ಮೂಲದ ಕೃಷ್ಣಪ್ಪ ಗೌತಮ್ ಗೆ ಸೋಂಕು ತಗುಲಿದೆ.
ಇತ್ತೀಚೆಗೆ ಕೃನಾಲ್ ಪಾಂಡ್ಯ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಹಲ್ ಮತ್ತು ಗೌತಮ್ ಕ್ವಾರಂಟೈನ್ ನಲ್ಲಿದ್ದರು.ಇದೀಗ ಕೃನಾಲ್ ಪಾಂಡ್ಯ ಸಂಪರ್ಕಕ್ಕೆದಿಂದಲೇ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಕೃನಾಲ್ ಸೋಂಕಿಗೆ ತುತ್ತಾಗಿದ್ದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಒಟ್ಟು ಎಂಟು ಆಟಗಾರರನ್ನು ಬದಲಿಸಿತ್ತು. ಅವರೆಲ್ಲರೂ ಕೃನಾಲ್ ಪಾಂಡ್ಯ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಮನೀಷ್ ಪಾಂಡೆ, ದೀಪಕ್ ಚಾಹರ್, ಯಜುವೇಂದ್ರ ಚಾಹಲ್, ಇಶಾನ್ ಕಿಶನ್ ಹಾಗೂ ಕೃಷ್ಣಪ್ಪ ಗೌತಮ್ ಅವರು ಜುಲೈ 27 ರಿಂದ ಕ್ವಾರಂಟೈನ್ನಲ್ಲಿದ್ದರು.ಈಗ ಚಾಹಲ್ ಹಾಗೂ ಗೌತಮ್ಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ ಆಟಗರಾರರು ನೆಗೆಟಿವ್ ಆಗಿತ್ತು, ಕಣಕ್ಕಿಳಿಯುವ ಸಾಧ್ಯತೆಗಳಿದೆ.
Discussion about this post