ಇಬ್ಬರನ್ನು ಹುಡುಗರನ್ನು ಪ್ರೀತಿಸಬೇಡ, ಬದುಕು ಕಷ್ಟವಾಗುತ್ತದೆ ಎಂದು ಬುದ್ದಿ ಮಾತು ಹೇಳಿದ ತಾಯಿಯನ್ನೇ ಮಗಳೊಬ್ಬಳು ಹತ್ಯೆ ಮಾಡಿದ ಘಟನೆ ಹೈದರಬಾದ್ ನಲ್ಲಿ ನಡೆದಿದೆ.
38 ವರ್ಷದ ರಜಿತಾ ಕೊಲೆಯಾದ ಮಹಿಳೆ.ಕೀರ್ತಿ ಕೊಲೆ ಮಾಡಿದ ಯುವತಿ.
ತಾಯಿ ರಜಿತಾ ಹಾಗೂ ಮಗಳು ಕೀರ್ತಿ ಮುನಗನೂರಿನಲ್ಲಿ ವಾಸಿಸುತ್ತಿದ್ದರು. ರಜಿತಾ ಪತಿ ಶ್ರೀನಿವಾಸ್ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಮಗಳು ಹಾದಿ ತಪ್ಪಿದ್ದಾಳೆ. ಇಬ್ಬರು ಹುಡುಗರನ್ನು ಏಕ ಕಾಲಕ್ಕೆ ಪ್ರೀತಿಸುತ್ತಿದ್ದಾಳೆ ಅನ್ನುವ ವಿಷಯ ತಾಯಿ ರಜಿತಾಗೆ ಗೊತ್ತಾಗಿದೆ. ಹೀಗಾಗಿ ಮಗಳ ಬದುಕು ಹಾಳಾಗುವುದು ಬೇಡ ಎಂದು ಕೀರ್ತಿಯನ್ನು ಕರೆದು ಬುದ್ದಿ ಮಾತು ಹೇಳಿದ್ದಾರೆ.
ಅಷ್ಟಕ್ಕೇ ತಾಯಿ ಮೇಲೆ ಕೆರಳಿದ ಕೀರ್ತಿ, ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಮುಗಿಸಿದ್ದಾಳೆ.
ಕೊಲೆ ಮಾಡಿದ ಬಳಿಕ ಮೂರು ದಿನ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಅಲ್ಲೇ ತನ್ನ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು. ಬಳಿಕ ಮೃತದೇಹದ ವಾಸನೆ ಬರುತ್ತಿರುವುದನ್ನು ಕಂಡು ಮೃತದೇಹವನ್ನು ರಾಮನ್ನಪೇಟೆ ರೈಲ್ವೆ ಹಳಿ ಮೇಲೆ ಎಸೆದಿದ್ದಳು.
ಈ ನಡುವೆ ತಂದೆಗೆ ಫೋನ್ ಮಾಡಿದ್ದ ಕೀರ್ತಿ ವಿಶಾಖಪಟ್ಟಣಂ ಪ್ರವಾಸ ಹೋಗುವುದಾಗಿ ಹೇಳಿ ಪ್ರೇಮಿ ಜೊತೆ ವಾಸಿಸುತ್ತಿದ್ದಳು. ಇದಾದ ನಂತರ ಪೊಲೀಸ್ ಠಾಣೆಗೆ ಹೋಗಿ, ನನ್ನ ತಾಯಿ ಕಾಣೆಯಾಗಿದ್ದಾರೆ. ತಂದೆ-ತಾಯಿ ಜಗಳವಾಡುತ್ತಿದ್ದರು ಎಂದು ದೂರು ಬೇರೆ ದಾಖಲಿಸಿದ್ದಳು.
ಮತ್ತೊಂದು ಕಡೆ ಕೆಲಸ ಮುಗಿಸಿದ ಬಂದ ಶ್ರೀನಿವಾಸ್ ರಜಿತಾ ಕಾಣೆಯಾಗಿರುವುದರ ಬಗ್ಗೆ ಪ್ರಶ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
Discussion about this post