ಇತ್ತೀಚಿನ ದಿನಗಳಲ್ಲಿ ಪ್ರಿಯತಮೆಯನ್ನು ಪ್ರಿಯಕರ ಅಪಹರಿಸುವ ಸುದ್ದಿ ಕೇಳಿದ್ದೇವೆ. ಪ್ರೀತಿಸಲಿಲ್ಲ ಎಂದು ಹುಡುಗರು ಹುಡುಗಿಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳೂ ನಡೆದಿದೆ.
ಆದರೆ ಚೆನೈನಲ್ಲಿ ಪ್ರಿಯತಮೆಯೊಬ್ಬಳು ಸೆಲ್ಫಿ ಕಾರಣಕ್ಕೆ ಶುರುವಾದ ಕಿರಿಕ್ ನಿಂದ ಬೇಸತ್ತು ಪ್ರಿಯಕರನ ಅಪರಹರಣಕ್ಕೆ ಸುಪಾರಿ ಕೊಟ್ಟು ಸುದ್ದಿಯಾಗಿದ್ದಾಳೆ.
ತಮಿಳುನಾಡಿನ ಚೆನ್ನೈ ನವೀತ್ ಅಹ್ಮದ್ ಅಮೆರಿಕ ಮೂಲದ ಯುವತಿಯೊಂದಿಗೆ ಪ್ರೀತಿಯಲ್ಲಿದ್ದ ಬಿದ್ದಿದ್ದ. ಆದರೆ ಆ ಪ್ರೀತಿ ತುಂಬಾ ದಿನ ಇರಲಿಲ್ಲ. ಅವರಿಬ್ಬರ ನಡುವೆ ಬ್ರೇಕಪ್ ಆಗಿತ್ತು. ಆದರೆ ಇಬ್ಬರೂ ಚೆನ್ನೈನ ಅಣ್ಣಾ ನಗರ ಪ್ರದೇಶದ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ವೇಳೆ ತೆಗೆದ ಸೆಲ್ಫಿ ಹಾಗೂ ಅಮೆರಿಕಾ ಯುವತಿಯ ಕೆಲ ಖಾಸಗಿ ಪೋಟೋಗಳು ನವೀತ್ ಮೊಬೈಲ್ ನಲ್ಲಿತ್ತು.
ಫೋಟೋ ಡಿಲೀಟ್ ಮಾಡಿಲ್ಲ ಅನ್ನುವುದು ಗೊತ್ತಾದ ಯುವತಿ, ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಬ್ರೇಕಪ್ ನಂತ್ರ ಆ ಫೋಟೋಗಳು ಬೇಕಾಗಿಲ್ಲ ಹೀಗಾಗಿ ಡಿಲೀಟ್ ಮಾಡು ಎಂದು ಕೋರಿಕೊಂಡಿದ್ದಾಳೆ. ಆದರೆ ನವೀತ್ ಫೋಟೋ ಡಿಲೀಟ್ ಮಾಡಿರಲಿಲ್ಲ.
ಹೀಗಾಗಿ ನವೀತ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳುವ ಸಲುವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಇತರೆ ಗೆಳೆಯರಿಗೆ ಅಪಹರಣ ಸುಪಾರಿ ಕೊಟ್ಟಿದ್ದಾಳೆ.
ಅದರಂತೆ ಮೂವರು ಯುವಕರು ನವೀತ್ ಕಾಲೇಜಿನಿಂದ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಡ್ಡ ಹಾಕಿ ಅಪಹರಿಸಿದ್ದಾರೆ. ನಂತ್ರ ಮೊಬೈಲ್ ಮತ್ತು ವಾಚ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ದೂರು ಸ್ವೀಕರಿಸಿದ್ದ ಪೊಲೀಸರು, ಕಾರ್ಯಾಚರಣೆ ನಡೆಸಿ ಮೂವರು ಯುವಕರನ್ನು ಬಂಧಿಸಿದ್ದಾರೆ.
Discussion about this post