ರಾಮನಗರ : ಭಾರತದಲ್ಲಿ ದಾಖಲಾಗಿರುವ ಪ್ರಕರಣಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೈಲಾಸ ಅನ್ನುವ ಹೆಸರಿನ ದ್ವೀಪ ಸೇರಿರುವ ನಿತ್ಯಾನಂದ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಈ ನಡುವೆ ನಿತ್ಯಾನಂದ ಆಶ್ರಮದಿಂದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವುದು ಮಲೇಷ್ಯಾ ಪ್ರಜೆಯಾಗಿರುವ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ.
ಈ ಸಂಬಂಧ ಪುಷ್ಪಾರಾಣಿ ರಾಮಲಿಂಗಂ ಅನ್ನುವವರು ದೂರು ಕೊಟ್ಟಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಮಗನನ್ನು 8 ವರ್ಷಗಳ ಹಿಂದೆ ಚಿಕಿತ್ಸೆಗಾಗಿ ಮಲೇಷಿಯಾದಿಂದ ಕರೆ ತಂದು ಬಿಡದಿಯ ಆಶ್ರಮದಲ್ಲಿ ನೆಲೆಸಿದ್ದೆವು. ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿದ ಮಗ ಕ್ರಿಸ್ಟನ್ ಭಾಸ್ಕರನ್ ಕೊಠಡಿಗೆ ಹಿಂತಿರುಗಿಲ್ಲ. ಮಗ ವಾಪಾಸ್ ಬಾರದ ಕಾರಣ ಇಡೀ ಆಶ್ರಮ ಹುಡುಕಿದರೂ ಮಗ ಪತ್ತೆಯಾಗಿಲ್ಲ. ಇದರೊಂದಿಗೆ ಮಗನ ಲಾಕನ್ ನಲ್ಲಿದ್ದ ಪಾಸ್ ಪೋರ್ಟ್ ಕೂಡಾ ಕಾಣಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Discussion about this post