Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Bhanwar Singh Meena : ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಕೊಡಗು ಜಿಪಂ ಸಿಇಒ ಪತ್ನಿ

Radhakrishna Anegundi by Radhakrishna Anegundi
August 6, 2022
in ಟ್ರೆಂಡಿಂಗ್
Bhanwar Singh Meena kodagu-gp-ceo-wife-gave-birth-in-government-hospital
Share on FacebookShare on TwitterWhatsAppTelegram

ಸಿದ್ದರಾಮಯ್ಯ, ಬೊಮ್ಮಾಯಿ, ಕುಮಾರಸ್ವಾಮಿ ಹೀಗೆ ಸಾಲು ಸಾಲು ರಾಜಕಾರಣಿಗಳಿಗೆ ಈ ಅಧಿಕಾರಿ Bhanwar Singh Meena ಆದರ್ಶವೇ ಸರಿ

ಕೊಡಗು : ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ ಅಂದ್ರೆ ಸರ್ಕಾರಿ ಅಧಿಕಾರಿ ಮತ್ತು ಸರ್ಕಾರ ನಡೆಸುವವರಿಗೆ ಅಂದ್ರೆ ರಾಜಕಾರಣಿಗಳಿಗೆ ಅಸಡ್ಡೆ. ಕೊರೋನಾ ಬಂದ ಸಂದರ್ಭದಲ್ಲಿ ಅದ್ಯಾವ ರಾಜಕಾರಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಹೇಳಿ. ಅನಾರೋಗ್ಯ ಅಂದಾಗ ಅದ್ಯಾವ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ.( Bhanwar Singh Meena)

ಈ ನಡುವೆ ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ( Chief Executive Officer,ZP,Kodagu) ಭನ್ವರ್‌ ಸಿಂಗ್‌ ಮೀನಾ ( Bhanwar Singh Meena) ಅವರ ಪತ್ನಿ ಕನಿಷ್ಕಾ ಮೀನಾ ಜಿಲ್ಲಾ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಕನಿಷ್ಥಾ ಮೀನಾ ಗಂಡು ಮಗುವಿನ ತಾಯಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ 8.56ಕ್ಕೆ ಶಸ್ತ್ರಚಿಕಿತ್ಸೆ ನಡೆದಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ : rajkumar takale : ಕಾಂಗ್ರೆಸ್ ನಾಯಕಿಯ ಪ್ರೇಮ ಪ್ರಕರಣ : ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ಸೋಮಶೇಖರ್‌, ಶಸ್ತ್ರಚಿಕಿತ್ಸೆ ನಡೆಸಿದ್ದು, ಹೆರಿಗೆ ಸಂಬಂಧಿಸಿದಂತೆ ತಪಾಸಣೆ, ಔಷಧ ಎಲ್ಲವನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಭನ್ವರ್‌ ಸಿಂಗ್‌ ಮೀನಾ ತಮ್ಮ ಪತ್ನಿಯ ಗರ್ಭಿಣಿ ತಪಾಸಣೆಯನ್ನು ಕೂಡಾ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಸಿದ್ದರು,

ಈ ನಡುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕೊಡಗು ಜಿಪಂ ಸಿಇಒ ಭನ್ವರ್‌ ಸಿಂಗ್‌ ಮೀನಾ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಲಿಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಯಲ್ಲೂ ನುರಿತ ವೈದ್ಯರ ತಂಡವಿದೆ, ನಾವಂತು ಮೊದಲಿನಿಂದಲೂ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವು, ಇನ್ನು ಮುಂದೆಯೂ ಸರ್ಕಾರಿ ಆಸ್ಪತ್ರೆಯಲ್ಲೇ ಟ್ರೀಟ್ ಮೆಂಟ್ ಪಡೆಯುತ್ತೇವೆ ಅಂದಿದ್ದಾರೆ.

Child Incident : ಮಹಡಿಯಿಂದ ಮಗು ಎಸೆದ ತಾಯಿ : ಕ್ರೂರಿ ತಾಯಿಯ ಅಸಲಿ ಕತೆ ಇಲ್ಲಿದೆ

ಮಕ್ಕಳಿರಲಿ ಮನೆ ತುಂಬಾ ಅನ್ನೋದು ಹಿರಿಯರ ಮಾತು. ಕೆಟ್ಟ ಮಗನಿರುತ್ತಾನೆ ಆದರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋದು ಲೋಕದ ಮಾತು. Child Incident

ಆದರೆ ಕಲಿಯುಗದಲ್ಲಿ ಈ ಮಾತುಗಳಿಗೆಲ್ಲಾ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ಘಟನೆಗಳನ್ನು ಗಮನಿಸಿದರೆ ಕಲಿಯುಗ ಅಂತ್ಯವಾಗುತ್ತಿದೆಯೇ ಅನ್ನಿಸುತ್ತಿದೆ.ಯಾಕಂದ್ರೆ ಬರೀ ಅಧರ್ಮದ ಸುದ್ದಿಯೇ ಕೇಳಿ ಬರುತ್ತಿದೆ. Child Incident

ಈ ನಡುವೆ ತಾನೇ ಹೆತ್ತ ಮಗುವನ್ನು ತಾಯಿಯೇ ಕ್ರೂರವಾಗಿ ಕೊಂದ ಘಟನೆ (Child Incident) ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಇದೀಗ ಈ ಘಟನೆ ಬಗ್ಗೆ ಮತ್ತಷ್ಟು Updateಗಳು ಸಿಕ್ಕಿದೆ.

ಮಗುವನ್ನು ಕೊಂದ ಸುಷ್ಮಾ SR ನಗರದ ಕಿರಣ್ ಅವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಇವರಿಬ್ಬರೂ ಲಂಡನ್ ನಲ್ಲಿ ನೆಲೆಸಿದ್ದರು.ಹಲವು ವರ್ಷಗಳ ಕಾಲ ಇವರಿಗೆ ಸಂತಾನವಾಗಿರಲಿಲ್ಲ. ಹಾಗೇ ಬೆಂಗಳೂರಿಗೆ ಮರಳಿ ಅವರಿಗೆ 4 ವರ್ಷಗಳ ಹಿಂದೆ ಸಂತಾನ ಭಾಗ್ಯವಾಗಿತ್ತು.

ಇದನ್ನೂ ಓದಿ : police transfer : ಅಮಿತ್ ಶಾ ರಾಜ್ಯ ಭೇಟಿಯ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಆದರೆ ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಮಗು ಬುದ್ದಿಮಾಂದ್ಯ ಅನ್ನುವುದು ಗೊತ್ತಾಗಿದೆ.ಹೀಗಾಗಿ ಸುಷ್ಮಾ ಖಿನ್ನತೆಗೆ ಒಳಗಾಗಿದ್ದಳಂತೆ. 24 ಗಂಟೆಯೂ ಮಗುವಿನ ಮೇಲೆ ನಿಗಾ ಬೇರೆ ವಹಿಸಬೇಕಾಗಿತ್ತು. ಇದೇ ಕಾರಣಕ್ಕಾಗಿ ಕೆಲ ತಿಂಗಳ ಹಿಂದೆ ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಕಿರಣ್ ಮಗುವನ್ನು ಕರೆದುಕೊಂಡು ಬಂದಿದ್ದರು.

ಮೊದಲಿಗೆ ಮಹಡಿಯಿಂದ ಬಿದ್ದು ಮಗು ಮೃತಪಟ್ಟಿದೆ ಎಂದೇ ಭಾವಿಸಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ವೇಳೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಮೊದಲಿಗೆ ಪೊಲೀಸರನ್ನೂ ದಾರಿ ತಪ್ಪಿಸಲು ಸುಷ್ಮಾ ಯತ್ನಿಸಿದ್ದಾಳೆ ಆದರೆ ನೌಟಂಕಿ ಆಟ ಪೊಲೀಸರಿಗೆ ಗೊತ್ತಾಗಿದೆ. ಇದೀಗ ಸುಷ್ಮಾ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದ್ದು, ಕೊಲೆಗಾರ್ತಿ ಪೊಲೀಸರಿಗೆ ಶರಣಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Tags: MAIN
ShareTweetSendShare

Discussion about this post

Related News

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

sanath krishna muliya project-cheetah-puttur-veterinarian-travelled-with-big-cats-from-namibia

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

belagavi leopard : ಚಿರತೆ ಹಿಡಿಯಲು ಮೂತ್ರ ತಂದ ಅರಣ್ಯಾಧಿಕಾರಿಗಳು : ಹನಿ ಟ್ರ್ಯಾಪ್ ತಂತ್ರಕ್ಕೆ ಬಕ್ರ ಆಗುತ್ತಾ…

Tumakuru : ಮುಂಜಿಗೆ ಹೆದರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋದ ಅರ್ಚಕ ವಾಪಾಸ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Independence day : ವಿಧಾನಸೌಧದ ಮೇಲೆ ಧ್ವಜ ಹಾರಿಸುವವರ ಬಗ್ಗೆ ನಿಮಗೆಷ್ಟು ಗೊತ್ತು…

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್