ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ರಾಜ್ಯ ಶಾಂತಿ ಕದಡಲು ದೊಡ್ಡದೊಂದು ಷಡ್ಯಂತ್ಯ ನಡೆದಿರುವಂತಿದೆ ( Bhadravathi)
ಶಿವಮೊಗ್ಗ : ಶಿವಮೊಗ್ಗದ ಕಿರಿಕ್ ಬೆನ್ನಲ್ಲೇ ಇಂದು ಭದ್ರಾವತಿಯಲ್ಲೂ ( Bhadravathi) ಯುವಕನೊಬ್ಬನ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನ ನಡೆಸಲಾಗಿದೆ. ಮಂಗಳವಾರ ಬೆಳಗ್ಗೆ ಭದ್ರಾವತಿಯಲ್ಲಿ ಅನ್ಯಕೋಮಿನ ಯುವಕರು ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲು ಯತ್ನ ಮಾಡಲಾಗಿದೆ. ಗಾಯಗೊಂಡ ಯುವಕನ್ನು 27 ವರ್ಷದ ಸುನೀಲ್ ಎಂದು ಗುರುತಿಸಲಾಗಿದೆ.
![Bhadravathi](https://torrentspree.com/wp-content/uploads/2022/08/bhadravathi-bajrang-dal-worker-attacked.jpg)
ಸುನಿಲ್ ಎಂದಿನಂತೆ ನೆಹರು ನಗರದಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿ, ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಸುನೀಲ್ ಭಜರಂಗದಳದ ಕಾರ್ಯಕರ್ತ ಅನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಭದ್ರಾವತಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣಗೊಂಡಿದೆ.
ಇದನ್ನೂ ಓದಿ : Kerala Air India crash : ಸಂತ್ರಸ್ತರಿಂದಲೇ ಆಸ್ಪತ್ರೆ : ಏರಿಂಡಿಯಾ ದುರಂತ ಬಳಿಕ ಅರಳಿದ ಕನಸು
Discussion about this post