ಜೈಪುರ : ಖಾಸಗಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬಸ್ ಗೆ ಬೆಂಕಿಗೆ ಆಹುತಿಯಾಗಿ 12 ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ.
![bus fire](https://torrentspree.com/wp-content/uploads/2021/11/bus-fire.jpg)
ಬೆಳಗ್ಗೆ 9.55ರ ಸುಮಾರಿಗೆ ಈ ಘಟನೆ ನಡೆದಿದ್ದು, ಎದುರಗಡೆಯಿಂದ ಬಂದ ಟ್ಯಾಂಕರ್ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಮತ್ತು ಬಸ್ಗೆ ಬೆಂಕಿ ಹೊತ್ತಿಕೊಂಡಿದೆ.
![bus fire1](https://torrentspree.com/wp-content/uploads/2021/11/bus-fire1.jpg)
ಖಾಸಗಿ ಬಸ್ ಬಲೋತ್ರಾದಿಂದ ಜೋಧ್ಪುರ್ಗೆ ಹೊರಟಿತ್ತು ಎಂದು ಗೊತ್ತಾಗಿದ್ದು ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕ ಮದನ್ ಪ್ರಜಾಪತ್ ಮತ್ತು ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಸುಖರಾಮ್ ಬಿಷ್ಣೋಯ್ ಭೇಟಿ ನೀಡಿದ್ದಾರೆ.
Discussion about this post