CRPF ಒಂದೇ ಅಲ್ಲ. ಬೇಕಿದ್ದರೆ ಅಮೆರಿಕ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋ ಗಳನ್ನು ಕೂಡ ಮೋದಿ ಅವರು ಏರ್ಪಾಡು ಮಾಡಿ ಸುಮಲತಾ ಭದ್ರತೆಗೆ ಕಳುಹಿಸಿಕೊಡುವುದು ಸೂಕ್ತ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದ ಬೆನ್ನಲ್ಲೇ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ರಾಜ್ಯ ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ.
ನಾನೂ ಸಿದ್ದರಾಮಯ್ಯ ಜೊತೆಯಾಗಿರುವುದನ್ನು ಸಾರ್ಥಕ ಮಾಡಿ : ದೇವೇಗೌಡ ಮನವಿ
ಚುನಾವಣೆಯ ಪ್ರಚಾರ ವೇಳೆಯಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ ನಾವು ಜವಾಬ್ದಾರರಲ್ಲ ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ಸಿಎಂ ಅವರ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ. ಈ ಕುರಿತು ಸೂಕ್ತ ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದರು.
ಅಯ್ಯೋಯ್ಯೋ ಇದೊಂದು ಫೋಟೋ ವೈರಲ್ ಆಗ್ಲೇ ಬಾರದಿತ್ತು……
ಸುಮಲತಾ ಅವರ ಸುರಕ್ಷತೆಗೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಆಯೋಗ ಪತ್ರ ಬರೆದಿದ್ದು, 24 ಗಂಟೆಗಳ ಅವಧಿಯಲ್ಲಿ ಈ ಬಗ್ಗೆ ಎಲ್ಲಾ ಸೂಕ್ತ ಕ್ರಮ ಕೈಗೊಂಡು ಅದರ ಎಲ್ಲಾ ವಿವರಗಳನ್ನು ತಿಳಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಅಲ್ಲಿಗೆ ಕುಮಾರಸ್ವಾಮಿಯವರು ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.
Discussion about this post