ಮೋದಿ ಹೆಸರು ಹೇಳಿದರೂ ಕರ್ನಾಟಕದಲ್ಲಿ ಮುಂದಿನ ಸಲ ಬಿಜೆಪಿ ಗೆಲ್ಲುವ ಸಾಧ್ಯತೆಗಳಿಲ್ಲ. ಬೊಮ್ಮಾಯಿ ನೇತೃತ್ವದ ಸರ್ಕಾರದ ನೀತಿ ನಿಯಮಗಳಿಂದ ಜನ ಬೇಸತ್ತು ಹೋಗಿದ್ದಾರೆ. ಮೋದಿ ಬರ್ತಾರೆ ಎಂದು ಕಳಪೆ ಕಾಮಗಾರಿಯನ್ನೇ ಈ ಸರ್ಕಾರ ಮಾಡಿದೆ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ, ಅವರ ಕಣ್ಣಿಗೆ ಮಣ್ಣೆರೆಚುವಲ್ಲಿ ಬಿಬಿಎಂಪಿ ಯಶಸ್ವಿಯಾಗಿತ್ತು. ಬೆಂಗಳೂರನ್ನು ಅದೆಷ್ಟು ಸುಂದರವಾಗಿರಿಸಿದ್ದೇವೆ ನೋಡಿ ಎಂದು ಬೊಮ್ಮಾಯಿ ಸರ್ಕಾರ ಪ್ರಧಾನಿಯವರನ್ನೇ ಬಕ್ರ ಮಾಡಿತ್ತು. ಆದರೆ ಯಾವಾಗ ಅಸಲಿ ಮುಖ ಬಯಲಾಯ್ತೋ, ಪ್ರಧಾನ ಮಂತ್ರಿ ಸಚಿವಾಲಯ ವರದಿ ಕೇಳಿದೆ.
ಹೌದು ಜೂನ್ 20 ರಂದು ಪ್ರಧಾನಿ ಮಂತ್ರಿ ಬೆಂಗಳೂರಿಗೆ ಬರ್ತಾರೆ ಎಂದು ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಗುಂಡಿಗಳನ್ನು ಮುಚ್ಚಿ, ಬೆಂಗಳೂರು ಶೈನಿಂಗ್ ಅನ್ನಲಾಗಿತ್ತು. ಇದಕ್ಕಾಗಿ ಸರ್ಕಾರ 23 ಕೋಟಿ ಹಣವನ್ನು ಬೇರೆ ಖರ್ಚು ಮಾಡಿತ್ತು. ಆದರೆ ಮೋದಿ ದೆಹಲಿಗೆ ತಲುಪುವ ಮುನ್ನ ಹಾಕಿದ ಡಾಂಬರು ಕಿತ್ತುಕೊಂಡು ಹೋಗಿದೆ. ಮುಚ್ಚಿದ ಗುಂಡಿ ಬಾಯಿ ತೆರೆದು ನರ ಬಲಿಗಾಗಿ ಕಾದು ಕುಳಿತಿದೆ.
ಬೆಂಗಳೂರು ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಮಾಡಿದ ಡಾಂಬರೀಕರಣ ಇದೀಗ ಕಿತ್ತುಕೊಂಡು ಹೋಗಿದೆ. ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿದೆ. ಯಾವಾಗ ಕಳಪೆ ಕಾಮಗಾರಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತೋ, ಪ್ರಧಾನ ಮಂತ್ರಿ ಸಚಿವಾಲಯ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕಚೇರಿ ಬಿಬಿಎಂಪಿ ಆಯುಕ್ತರಿಂದ ವರದಿ ಕೇಳಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಂಗಳಮುಖಿಯರ ರೌಡಿಸಂ : ಗೃಹಪ್ರವೇಶ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆ
ಪ್ರಧಾನಮಂತ್ರಿ ಸಚಿವಾಲಯ ವರದಿ ಕೇಳಿದ ತಕ್ಷಣ ಎಲ್ಲವೂ ಸರಿಯಾಗುತ್ತದೆ ಅಂದುಕೊಳ್ಳಬೇಡಿ. ಡಾಂಬರು ಹಾಕಿದ ವೇಳೆ ಮಳೆ ಬಂದಿದೆ. ಹೀಗಾಗಿ ಹೀಗಾಗಿದೆ ಎಂದು ಪಾಲಿಕೆ ಆಯುಕ್ತರು ಉತ್ತರ ಕೊಡ್ತಾರೆ. ಅಲ್ಲಿಗೆ ಖೇಲ್ ಖತಂ.
Discussion about this post