ಶವಸಂಸ್ಕಾರ ಸಲುವಾಗಿ ಪ್ರಯಾಣಿಕರನ್ನು ಮತ್ತು ಶವವನ್ನು ಹೊತ್ತು ಸಾಗುತ್ತಿದ್ದ ಮೆಟಾಡೋರ್ ಮತ್ತು ಕಲ್ಲು ತುಂಬಿದ ಲಾರಿ ನಡುವೆ ಡಿಕ್ಕಿ ಸಂಭವಿಸಿ 18 ಮಂದಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಈ ದುರ್ಘಟನೆಯಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ತಡರಾತ್ರಿ 12 ಗಂಟೆಯ ಸುಮಾರಿಗೆ ನಾಡಿಯಾ ಜಿಲ್ಲೆಯ ಫುಲ್ಬರಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಮೆಟಾಡೋರ್ ಪ್ರಯಾಣಿಕರೆಂದು ಗೊತ್ತಾಗಿದೆ. ಸಂಬಂಧಿ ಮಹಿಳೆಯ ಶವವನ್ನು ಅಂತ್ಯಸಂಸ್ಕಾರಕ್ಕೆಂದು ಮೆಟಾಡೋರ್ ಇವರು ತೆಗೆದುಕೊಂಡು ಹೋಗುತ್ತಿದ್ದರು.
ಅತೀಯಾದ ಮಂಜು ಮತ್ತು ವಾಹನದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅನೈತಿಕ ಸಂಬಂಧದ ಕಾರಣಕ್ಕೆ ಪತ್ನಿಯೊಂದಿಗೆ ಜಗಳ : ಗಂಟಲು ಕೊಯ್ದುಕೊಂಡ ವ್ಯಕ್ತಿ
ನವದೆಹಲಿ : ಅನೈತಿಕ ಸಂಬಂಧದ ವಿಚಾರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಏರಲಾರಂಭಿಸಿದೆ. ಮದುವೆಯಾದ ಬಳಿಕ ಮಕ್ಕಳೊಂದಿಗೆ ಸಂಸಾರ ನಡೆಸುವುದನ್ನು ಬಿಟ್ಟು ಪಕ್ಕದ ಮನೆಯವರೊಂದಿಗೆ ಸರಸಕ್ಕೆ ಹೋಗಿ ಎಡವಟ್ಟುಗಳಾಗುತ್ತಿದೆ.
ಹೀಗೆ ತನ್ನ ಅನೈತಿಕ ಸಂಬಂಧ ವಿಚಾರ ಪತ್ನಿಗೆ ಗೊತ್ತಾದ ಕರ್ಮಕ್ಕೆ ವ್ಯಕ್ತಿಯೊಬ್ಬ ಗಂಟಲು ಕೊಯ್ದುಕೊಂಡ ಘಟನೆ ಗಾಜಿಯಾಬಾದ್ನ ನಂದಗ್ರಾಮ್ ನಡೆದಿದೆ. ಇಲ್ಲಿನ 30 ವರ್ಷದ ಓಂಪ್ರಕಾಶ್ ಎಂಬಾತ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ. ಈತ ನೆರೆ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಓಂಪ್ರಕಾಶ್ ಪತ್ನಿಗೆ ಗೊತ್ತಿತ್ತು.
ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಆಕೆ ಗಂಡನನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಳು. ಅದರಂತ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಈ ವೇಳೆ ನಾನು ನನ್ನ ಹೆಂಡತಿಯೊಂದಿಗೆ ಇರಲಾರೆ ಎಂದು ಹೇಳುತ್ತಾ, ಬ್ಲೇಡ್ ನಿಂದ ಗಂಟಲನ್ನು ಸೀಳಿಕೊಂಡಿದ್ದಾನೆ.
ಸಂಸಾರ ಸರಿ ಮಾಡೋಣ ಎಂದು ಹೊರಟ ಪೊಲೀಸರಿಗೆ ಈ ಬೆಳವಣಿಗೆ ಆತಂಕ ತಂದಿದೆ. ಹೀಗಾಗಿ ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Discussion about this post