ಕ್ರಿಕೆಟ್ ಅಭಿಮಾನಿಗಳಲ್ಲಿ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಬಗ್ಗೆ ಒಂದು ಅಸಹನೆ ಎಂದಿಗೂ ಇದೆ. ಆದರೆ ಇದೀಗ ರವಿಶಾಸ್ತ್ರೀಯವರ ಅಸಲಿ ಮುಖವನ್ನು ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಅದು ಕನ್ನಡಿಗರ ರಾಹುಲ್ ದ್ರಾವಿಡ್ ಕುರಿತ ವಿಷಯ.
ಭಾರತ ಕ್ರಿಕೆಟ್ ತಂಡ ಮಹಾಗೋಡೆ ಎಂದೇ ಪ್ರಸಿದ್ಧರಾಗಿದ್ದ ತಾಳ್ಮೆಯ ಮೂರ್ತಿಗೆ ಸಿಗಬೇಕಾಗಿದ್ದ ಗೌರವ ಮತ್ತು ಅದ್ಭುತ ಅವಕಾಶವನ್ನು ರವಿಶಾಸ್ತ್ರಿ ತಪ್ಪಿಸಿದ್ದಾರೆ ಎಂದು ಗಂಗೂಲಿ ನೇರ ಆರೋಪ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಕನ್ಸಲ್ಟೆಂಟ್ ಬ್ಯಾಟಿಂಗ್ ಕೋಚ್ ಹಾಗೂ ಕನ್ಲಲ್ಟೆಂಟ್ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ರನ್ನು ನಾವು ಆಯ್ಕೆ ಮಾಡುವಂತೆ ನಾವು ನಿರ್ಧಾರ ಮಾಡಿದ್ದೆವು. ಇದಕ್ಕೆ ದ್ರಾವಿಡ್ ಹಾಗೂ ಜಹೀರ್ ಖಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಇದೇ ವೇಳೆ ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಗೊಂಡಿದ್ದ ರವಿಶಾಸ್ತ್ರಿ ಜತೆ ರಾಹುಲ್ ದ್ರಾವಿಡ್ ಮಾತುಕತೆ ನಡೆಸಿದರು. ನಂತರ ತಾವು ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ಆಗುವುದಿಲ್ಲ ಎಂದು ದ್ರಾವಿಡ್ ಹೇಳಿಕೆ ಕೊಟ್ಟರು. ರವಿಶಾಸ್ತ್ರಿ ಜೊತೆಗಿನ ಭೇಟಿ ವೇಳೆ ಅವರ ನಡುವೆ ಏನು ನಡೆಯಿತು ಎಂಬುದು ನಮಗೆ ಗೊತ್ತಾಗಲಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಕನ್ನಡಿಗ ಅನಿಲ್ ಕುಂಬ್ಳೆ ಎರಡನೇ ಬಾರಿಗೆ ಕೋಚ್ ಆಗುವುದನ್ನು ತಡೆದು ತಾವೇ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ ವಿರುದ್ಧ ಸೌರವ್ ಗಂಗೂಲಿ ಈ ಹಿಂದೆ ಬಹಿರಂಗವಾಗಿ ವಾಕ್ಸಮರ ನಡೆಸಿರುವುದನ್ನು ಈ ವೇಳೆ ಸ್ಮರಿಸಿಕೊಳ್ಳಬಹುದು.
Discussion about this post