Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

PSI Anita Lakshmi : ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡಿತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ

Radhakrishna Anegundi by Radhakrishna Anegundi
July 6, 2022
in ಟ್ರೆಂಡಿಂಗ್
PSI Anita Lakshmi chandra-layout-police-station-psi-anita-lakshmi-did-a-humanity-work
Share on FacebookShare on TwitterWhatsAppTelegram

ಕಟ್ಟು ನಿಟ್ಟಿನ ಖಾಕಿ ಇಲಾಖೆ ಇತ್ತೀಚಿನ ದಿನಗಳಲ್ಲಿ ಹೆಸರು ಕೆಡಿಸಿಕೊಂಡಿದೆ. ಒಂದೆಡೆ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕುತ್ತಿದೆ. ಮತ್ತೊಂದು ಕಡೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ನ್ಯಾಯ ಸಿಗುವ ಭರವಸೆಗಳು ಇಲ್ಲದಾಗುತ್ತಿದೆ. ಈ ನಡುವೆ ಆಶಾಕಿರಣವಾಗಿ ಗೋಚರಿಸಿದವರು PSI Anita Lakshmi

ಬೆಂಗಳೂರು : ಪೊಲೀಸ್ ಇಲಾಖೆ ಹಿಂದಿನಂತಿಲ್ಲ. ಜನಸ್ನೇಹಿ ಪೊಲೀಸ್ ಠಾಣೆ ಅನ್ನುವುದು ನ್ಯೂಸ್ ಪೇಪರ್ ಗಳಲ್ಲಿ ಬರೆಯಲು ಮಾತ್ರ ಚೆಂದ. ಆದ್ಯಾವ ಪೊಲೀಸ್ ಠಾಣೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಗೌರವ ಸಿಗುತ್ತದೆ ಹೇಳಿ. ವಿಐಪಿಯೋ, ಖಾದಿಯೋ ಹೋದರೆ ಅವನಿಗೆ ರಾಜಾತಿಥ್ಯ. ಜನ ಸಾಮಾನ್ಯನೊಬ್ಬ ಹೋದ್ರೆ ಕೂರಲು ಚೆಯರ್ ಬಿಡಿ, ಕುಡಿಯಲು ನೀರು ಸಿಗೋದಿಲ್ಲ. ಆದರೆ ಇಂತಹ ಆತಂಕ ಮತ್ತು ಆರೋಪದ ನಡುವೆ ಭರವಸೆ ಅನ್ನುವಂತೆ ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಒಂದು ಹೆಸರು PSI Anita Lakshmi.

ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಿತಾಲಕ್ಷ್ಮೀ ಮಂಗಳವಾರ ಜುಲೈ 5ರ ಮಧ್ಯಾಹ್ನ ಗಸ್ತಿನಲ್ಲಿದ್ದರು. ಈ ವೇಳೆ ಚಂದ್ರಾಲೇಔಟ್‍ನ ಗ್ಯಾರೇಜ್ ಬಳಿ 25 ವರ್ಷದ ಯುವಕನೊಬ್ಬ ಫಿಡ್ಸ್ ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿದ್ದಾರೆ. ಕುಸಿದು ಬಿದ್ದಿದ್ದ ಇಮ್ರಾನ್ ಗೆ ಗ್ಯಾರೇಜ್‍ನಲ್ಲಿ ಇದ್ದ ಕಬ್ಬಿಣವನ್ನು ತಂದು ಸ್ಥಳೀಯರು ಆತನ ಕೈಗಿಟ್ಟಿದ್ದಾರೆ.

ಇದನ್ನೂ ಓದಿ : Guruji Murder Accused Arrest : ಒಂದು ಕಾಲದ ಆಪ್ತನೇ ಯಮಕಿಂಕರನಾದನಲ್ಲ…

ಈ ವೇಳೆ ಯುವಕನ ಸಂಕಷ್ಟಕ್ಕೆ ಸ್ಪಂದಿಸಿದ Anita Lakshmi ತಕ್ಷಣ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಸಮುಯದಲ್ಲಿ ಚಿಕಿತ್ಸೆ ಸಿಕ್ಕ ಕಾರಣ ಇಮ್ರಾನ್ ಚೇತರಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರೇ ಈತನ ಚಿಕಿತ್ಸಾ ವೆಚ್ಚವನ್ನೂ ಭರಿಸಿದ್ದಾರೆ. ಈ ನಡುವೆ ಈತ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾನೆ ಅನ್ನುವುದನ್ನು ಅರಿತ ಅನಿತಾಲಕ್ಷ್ಮಿ ಕುಡಿಯುವುದನ್ನು ಬಿಡುವಂತೆ ಮನವೊಲಿಸಿದ್ದಾರೆ. ಪೊಲೀಸ್ ಅಧಿಕಾರಿ ಅನ್ನುವುದನ್ನು ಪಕ್ಕಕ್ಕಿಟ್ಟು ಸಹೋದರಿ ಅನ್ನುವಂತೆ ಗದರಿದ್ದಾರೆ ಕೂಡಾ.

ಒಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲೂ ಮಾನವೀಯತೆಯ ಮುಖಗಳು ಇವೆ ಅನ್ನುವುದನ್ನು ಅನಿತಾ ಲಕ್ಷ್ಮಿ ತೋರಿಸಿಕೊಟ್ಟಿದ್ದಾರೆ. ಎಲ್ಲಾದ್ರೂ ಈ ಮೇಡಂ ಸಿಕ್ರೆ ಅವರ ಮಾತೃ ಹೃದಯದ ಈ  ಸೇವೆಗೊಂದು ಸೆಲ್ಯೂಟ್ ಹೊಡೆಯುವುದನ್ನು ಮರೆಯಬೇಡಿ. PSI Anita Lakshmi ಕೆಲಸ ಇತರ ಅಧಿಕಾರಿಗಳ ಕಣ್ಣು ತೆರೆಸಲಿ ಅನ್ನುವುದೇ ನಮ್ಮ ಆಶಯ.

ಒಂದು ಕಾಲದ ಆಪ್ತನೇ ಯಮಕಿಂಕರನಾದನಲ್ಲ…

ಹುಬ್ಬಳ್ಳಿ : ಚಂದ್ರಶೇಖರ ಗುರೂಜಿಯನ್ನು ( guruji murder case ) ಕೊಲೆಗೈದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ( Guruji Murder Accused Arrest).ದುರಂತ ಅಂದ್ರೆ ಈ ಆರೋಪಿಗಳು ಒಂದು ಕಾಲದಲ್ಲಿ ಚಂದ್ರಶೇಖ್ ಗುರೂಜಿ ಆಪ್ತರಾಗಿದ್ದರು. ಅವರದ್ದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರೂಜಿ ಕೊಟ್ಟ ಸಂಬಳದಿಂದ ಜೀವನ ಕಟ್ಟಿಕೊಂಡಿದ್ದರು. ಆದರೆ ಆ ಉಪಕಾರವನ್ನೇ ಮರೆತು ಕೊಲೆ ಮಾಡಿದ್ದಾರೆ ಅಂದ್ರೆ ಕೊಲೆಯ ಹಿಂದೆ ಮಹಾರಹಸ್ಯವೊಂದು ಅಡಗಿರಲೇಬೇಕು.

ಇನ್ನು ಪೊಲೀಸರು ವಶಕ್ಕೆ ಪಡೆದಿರುವ ಮಹಾಂತೇಶ ಶಿರೂರ್ ಚಂದ್ರಶೇಖರ್ ಗುರೂಜಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದನಂತೆ.  ಗುರೂಜಿಯ ಬಲಗೈಯಂತೆ ಕೆಲಸ ಮಾಡಿಕೊಂಡಿದ್ದ ಅನ್ನಲಾಗಿದೆ. ಚಂದ್ರಶೇಖರ್ ಗುರೂಜಿಯ ( Chandrashekhar Guruji ) ಖಾಸಗಿ ವ್ಯವಹಾರಗಳನ್ನು ಇದೇ ಮಹಾಂತೇಶ್ ನೋಡಿಕೊಳ್ಳುತ್ತಿದ್ದ ಅನ್ನಲಾಗಿದೆ. ಹೀಗಾಗಿ ಗುರೂಜಿಯ ರಹಸ್ಯಗಳು ಇವನಿಗೆ ಗೊತ್ತಿತ್ತು ಅನ್ನಲಾಗಿದೆ.

ಗುರೂಜಿ ಮತ್ತು ಮಹಾಂತೇಶ್ ಅದೆಷ್ಟು ಆತ್ಮೀಯರು ಅಂದ್ರೆ ಮಹಾಂತೇಶ್ ಗೆ ವನಜಾಕ್ಷಿಯನ್ನು ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿಯಂತೆ. ಇನ್ನು ವನಜಾಕ್ಷಿ ಕೂಡಾ ಸರಳ ವಾಸ್ತು ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ಸಾವಿರ ಕೋಟಿಗೂ ಅಧಿಕ ವ್ಯವಹಾರದ ಸರಳ ವಾಸ್ತು ಸಾಮ್ರಾಜ್ಯದ ಒಡೆಯ ಚಂದ್ರಶೇಖರ್ ಗುರೂಜಿ ಜೊತೆಗೆ ಮಹಾಂತೇಶ್ ಸಂಬಂಧ ಯಾಕೆ ಹಾಳಾಯ್ತು ಅನ್ನುವುದು ಈಗಿರುವ ಯಕ್ಷ ಪ್ರಶ್ನೆ.

ಇನ್ನು ಇತ್ತೀಚೆಗೆ ಸರಳ ವಾಸ್ತು ಸಂಸ್ಥೆಯಿಂದ ಒಂದಿಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು. ಇವರ ಪರವಾಗಿ ಇದೇ ಮಹಾಂತೇಶ್ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಅನ್ನುವ ಸುದ್ದಿಗಳು ಕೂಡಾ ಬಂದಿದೆ. ಆದರೆ ಇವೆಲ್ಲವೂ ಕೊಲೆಯಾದ ಬೆನ್ನಲ್ಲೇ ಹರಿದಾಡುತ್ತಿರುವ ಸುದ್ದಿ. ಆದರೆ ನಿಜಕ್ಕೂ ಕೊಲೆಗೆ ಕಾರಣವೇನು ಅನ್ನುವುದು ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಲಿದೆ.

Tags: FEATURED
ShareTweetSendShare

Discussion about this post

Related News

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

sanath krishna muliya project-cheetah-puttur-veterinarian-travelled-with-big-cats-from-namibia

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

belagavi leopard : ಚಿರತೆ ಹಿಡಿಯಲು ಮೂತ್ರ ತಂದ ಅರಣ್ಯಾಧಿಕಾರಿಗಳು : ಹನಿ ಟ್ರ್ಯಾಪ್ ತಂತ್ರಕ್ಕೆ ಬಕ್ರ ಆಗುತ್ತಾ…

Tumakuru : ಮುಂಜಿಗೆ ಹೆದರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋದ ಅರ್ಚಕ ವಾಪಾಸ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Independence day : ವಿಧಾನಸೌಧದ ಮೇಲೆ ಧ್ವಜ ಹಾರಿಸುವವರ ಬಗ್ಗೆ ನಿಮಗೆಷ್ಟು ಗೊತ್ತು…

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್