ಹೈದರಾಬಾದ್ ಕ್ರೀಡಾಂಗಣದಲ್ಲಿ ಐಪಿಎಲ್ ನಡೆದ ಪಂದ್ಯದ ವೇಳೆ ಕುಡಿದು ಅಸಭ್ಯವಾಗಿ ವರ್ತಿಸಿ, ಪಂದ್ಯ ವೀಕ್ಷಣೆಗೆ ಅಡ್ಡಿ ಮಾಡಿದ ಕಾರಣಕ್ಕೆ ತೆಲುಗು ಆ್ಯಂಕರ್ ಸೇರಿ 6 ಮಂದಿಯ ಮೇಲೆ ದೂರು ದಾಖಲಿಸಲಾಗಿದೆ.
ಭಾನುವಾರ ಹೈದರಾಬಾದ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ವೇಳೆ ಈ ಘಟನೆ ನಡೆದಿದ್ದು, ಭರತ್ ಫೈನಾನ್ಸಿಯಲ್ ಕಂಪೆನಿಯ ಉಪಾಧ್ಯಕ್ಷರಾದ ಸಂತೋಷ್ ಉಪಾಧ್ಯಾಯ್ ಎಂಬವರು ಉಪ್ಪಾರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಆ್ಯಂಕರ್ ಪ್ರಶಾಂತಿ ಸೇರಿದಂತೆ ಕೆಲ ಯುವಕರು ಹಾಗೂ ಯುವತಿಯರು ಪಂದ್ಯ ನೋಡಲು ಅಡ್ಡಿ ಪಡಿಸಿ ದಾಂಧಲೆ ನಡೆಸುತ್ತಿದ್ದರು. ಈ ವೇಳೆ ದೂರುದಾರರು ಪ್ರಶಾಂತಿ ಮತ್ತು ಗ್ಯಾಂಗ್ ಗೆ ಎಚ್ಚರಿಕೆ ಕೊಟ್ಟರೂ ಅವರು ಕ್ಯಾರೇ ಅನ್ನಲಿಲ್ಲ. ಬದಲಾಗಿ ಸಂತೋಷ್ ಅವರ ವಿರುದ್ಧ ಅಸಭ್ಯ ಮಾತುಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ಇದೀಗ ಐಪಿಸಿ ಸೆಕ್ಷನ್ 341, 188, 506 ಮತ್ತು 70(ಬಿ) ಅಡಿ ದೂರು ದಾಖಲಿಸಿರುವ ಪೊಲೀಸರು ಕೆ.ಪೂರ್ಣಿಮ (27), ಕೆ.ಪ್ರಿಯಾ (23), ಸಿ.ಪ್ರಶಾಂತಿ (32), ವಿ.ಶ್ರೀಕಾಂತ್ ರೆಡ್ಡಿ (48), ಎಲ್. ಸುರೇಶ್ (28), ಜಿ.ವೇಣುಗೋಪಾಲ್ (38) ಎಂಬವರ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
Discussion about this post