ಕೇರಳಕ್ಕೆ ಸಹಾಯ ಹಸ್ತ ಚಾಚಿದವರ ಕಥೆಗಳನ್ನು ಕೆದಕುತ್ತಾ ಹೋದರೆ ಸಿಗುವುದು ಅಚ್ಚರಿಯ ವಿಷಯ. ಕೈ ತುಂಬಾ ಕಾಸು ಇದ್ದವರು ಸಹಾಯ ಮಾಡಿದ ಮೇಲೆ ಪಡೆದ ಪ್ರಚಾರಕ್ಕೆ ಕಡಿಮೆ ಇಲ್ಲ. ಆದರೆ ಒಂದೊಂದು ರೂಪಾಯಿ ಕೊಟ್ರಲ್ಲ ಅವರು ಪ್ರಚಾರ ಪಡೆಯಲೂ ಇಲ್ಲ, ಮಾಧ್ಯಮಗಳು ಪ್ರಚಾರ ಕೊಡಲೂ ಇಲ್ಲ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಕೇರಳದ ಬಗ್ಗೆ ಕೆದಕುತ್ತಿದ್ದಾಗ ಸಿಕ್ಕಿದ ಕಥೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ,
ಬೆಂಗಳೂರಿನಲ್ಲಿ ಯುವಕರ ತಂಡವೊಂದು ಕೇರಳಕ್ಕೆ ಹಣ, ವಸ್ತು ಸಂಗ್ರಹ ಮಾಡುತ್ತಿತ್ತು. ಈ ವೇಳೆ ಧರ್ಮಪುರಿಯ ನಿವಾಸಿ ರಮೇಶ್ ತಂಡಕ್ಕೆ ಎದುರಾಗಿದ್ದಾರೆ. ಸೀಬೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುವ ರಮೇಶ್ ಗೆ ಜೀವನಕ್ಕೆ ಅಂದಿನ ಆದಾಯವೇ ಆಧಾರ. ಆ ದಿನ ದುಡಿದದ್ದು ಆ ದಿನದ ಖರ್ಚಿಗೆ.
ಆದರೆ ಸಹಾಯ ಎಂದು ಹೋದವರಿಗೆ ರಮೇಶ್ ನಿರಾಶೆ ಮಾಡಲಿಲ್ಲ. ಬದಲಿಗೆ 5 ಬಾಕ್ಸ್ ಪೇರಳೆ ಹಣ್ಣುಗಳನ್ನು ತಂಡದ ಕೈಗಿಟ್ಟರು.ಸಂಜೆ ಹೊತ್ತಿನಲ್ಲಿ ವ್ಯಾಪಾರಕ್ಕೆ ಎಂದು ತಂದ ಹಣ್ಣನ್ನು ದಾನ ಮಾಡುವುದನ್ನು ಕಂಡ ಕಾರ್ಯಕರ್ತರು ನಿಮ್ಮ ಆದಾಯಕ್ಕೆ ತೊಂದರೆಯಾಗುವುದಿಲ್ಲವೇ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ರಮೇಶ್ ಹೇಳಿದ್ದು “Panam naleikku venalum sambadhikkalam” – ನಾನು ಕಾಸು ನಾಳೆಯೂ ಸಂಪಾದಿಸಬಲ್ಲೇ ಎಂದು. ಸಿಕ್ಕಿರುವ ಮಾಹಿತಿ ಪ್ರಕಾರ ಇವರು ಕಗ್ಗದಾಸಪುರದಲ್ಲಿ ವ್ಯಾಪಾರ ಮಾಡುತ್ತಾರಂತೆ.
ಯಾರಿಗಾದರೂ ಈ ವ್ಯಕ್ತಿ ಸಿಕ್ಕರೆ ಒಂದು Thanks ಹೇಳಿ ಬನ್ನಿ.
Discussion about this post