Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಪ್ಪ ಮಗನಿಗೆ ಶಾಕ್ ಕೊಟ್ಟ ಸಿಎಂ ಇಬ್ರಾಹಿಂ : JDS ಪಕ್ಷದಿಂದ ಹೆಚ್‌ಡಿಕೆ, ನಿಖಿಲ್‌ ಕುಮಾರಸ್ವಾಮಿ ಉಚ್ಛಾಟನೆ

ಅಪ್ಪ ಮಗನಿಗೆ ಶಾಕ್ : JDS ಪಕ್ಷದಿಂದ ಹೆಚ್‌ಡಿಕೆ, ನಿಖಿಲ್‌ ಕುಮಾರಸ್ವಾಮಿ ಉಚ್ಛಾಟನೆ ಪತ್ರದ ರಹಸ್ಯವೇನು

Radhakrishna Anegundi by Radhakrishna Anegundi
17-10-23, 5 : 49 pm
in ಟಾಪ್ ನ್ಯೂಸ್, ರಾಜ್ಯ
https://torrentspree.com/hd-kumaraswamy-and-nikhil-kumaraswamy-expelled-from-jds-cm-ibrahim/
Share on FacebookShare on TwitterWhatsAppTelegram

ಕುಮಾರಸ್ವಾಮಿ ಮತ್ತು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಅನ್ನಲಾಗಿರುವ ಪತ್ರ ಈಗ ಸದ್ದು ಮಾಡುತ್ತಿದೆ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಇದೀಗ ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷ ಒಡೆದ ಮನೆಯಾಗಿದೆ. ಕುಮಾರಸ್ವಾಮಿಯವರು ಕೈಗೊಳ್ಳುತ್ತಿರುವ ನಿರ್ಧಾರ ಪಕ್ಷದ ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ.

ಪರಿಸ್ಥಿತಿ ಗಮನಿಸಿದರೆ ಹಿಂದೊಮ್ಮೆ JDU, JDS ಹುಟ್ಟಿದ ರೀತಿಯಲ್ಲೇ , ಜೆಡಿಎಸ್ ಮತ್ತೊಮ್ಮೆ ಹೋಳಾಗುವ ಲಕ್ಷಣ ಕಾಣಿಸುತ್ತಿದೆ. ಈ ನಡುವೆ JDS ಪಕ್ಷದಿಂದ ಹೆಚ್‌ಡಿಕೆ, ನಿಖಿಲ್‌ ಕುಮಾರಸ್ವಾಮಿ ಉಚ್ಛಾಟನೆ ಮಾಡಿರುವ ಪತ್ರವೊಂದು ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಮಾಹಿತಿಗಳ ಪ್ರಕಾರ ಇದೊಂದು ಫೇಕ್ ಪತ್ರ ಅನ್ನಲಾಗಿದೆ. ನಕಲಿ ಪತ್ರವನ್ನು ಕಿಡಿಗೇಡಿಗಳು ಸೃಷ್ಟಿಸಿದ್ದಾರೆ ಅನ್ನಲಾಗಿದೆ. ಆದರೆ ಈ ಬಗ್ಗೆ ಸಿಎಂ ಇಬ್ರಾಹಿಂ ಸ್ಪಷ್ಟನೆ ನೀಡಬೇಕಾಗಿದೆ.

jds letter

ಈ ನಡುವೆ ಉಚ್ಛಾಟನೆ ಪತ್ರದ ಬಗ್ಗೆ ಇಬ್ರಾಹಿಂ ಸ್ಪಷ್ಟನೆ ಕೊಟ್ಟಿದ್ದು, ಅಂತಹ ಯಾವುದೇ ನಿರ್ಧಾರಗಳು ಪಕ್ಷದಲ್ಲಿ ನಡೆದಿಲ್ಲ. ಹೀಗೆಲ್ಲಾ ನಕಲಿ ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಇಪ್ಪತ್ತಾರು ವಾರದ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ನಕಾರ

ಮಾಹಿತಿಗಳ ಪ್ರಕಾರ ಕುಮಾರಸ್ವಾಮಿ,  ಸಿಎಂ ಇಬ್ರಾಹಿಂ ಅವರ ಬಳಿ ಮೈತ್ರಿಯ ಬಗ್ಗೆ ಮಾತುಕತೆ ಮಾಡಿಲ್ಲವಂತೆ. ಪಕ್ಷದ ರಾಜ್ಯಾಧ್ಯಕ್ಷನಾಗಿರುವ ನನ್ನನ್ನೇ ಕುಮಾರಸ್ವಾಮಿ ಅದು ಹೇಗೆ ಸೈಡ್ ಲೈನ್ ಮಾಡಿದ್ರು ಅನ್ನೋದು ಅವರ ಆಕ್ರೋಶ. ಮಾತ್ರವಲ್ಲದೆ ಇಬ್ರಾಹಿಂ ಅವರಿಗೆ ಜೆಡಿಎಸ್ ಬಿಟ್ಟರೆ ಮತ್ತೆಲ್ಲೂ ರಾಜಕೀಯ ನೆಲೆಗಳಿಲ್ಲ, ಕಾಂಗ್ರೆಸ್ ಬಾಗಿಲು ಈಗಾಗಲೇ ಇಬ್ರಾಹಿಂ ಅವರಿಗೆ ಮುಚ್ಚಿದ್ದು, ಅಲ್ಪಸಂಖ್ಯಾತರ ನಾಯಕನಾಗಿ ಉಳಿಯಲು ಅವರಿಗೆ ಒದ್ದಾಡುತ್ತಿದ್ದಾರೆ ಅನ್ನಲಾಗಿದೆ.

Kumaraswamy tears Father HD Devegowda Health

ಇಂದು ಬೆಳಗ್ಗೆ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಸಭೆಯೊಂದು ನಡೆದಿದ್ದು, ದಳಪತಿಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಸಭೆಯಲ್ಲಿ ಮಾತನಾಡಿದ್ದ ಇಬ್ರಾಹಿಂ ನಮ್ಮದೇ ನಿಜವಾದ ಜೆಡಿಎಸ್‌ ಪಕ್ಷ, ನಾನೇ ರಾಜ್ಯಾಧ್ಯಕ್ಷ, ನನ್ನನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ.  ಶೀಘ್ರದಲ್ಲೇ 19 ಶಾಸಕರ ಜೊತೆ ಚರ್ಚಿಸಿ, ಹೊಸ ಕೋರ್‌ ಕಮಿಟಿ ರಚಿಸುತ್ತೇನೆ. ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿಯಾಗಿ ನಮ್ಮ ನಿರ್ಧಾರ ತಿಳಿಸುತ್ತೇನೆ. ಕುಮಾರಸ್ವಾಮಿ ಅವರನ್ನು ಉಚ್ಛಾಟಿಸೋ ವಿಚಾರದಲ್ಲಿ ಶಾಸಕರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ  ಅಂದಿದ್ದರು.

nikil kumaraswamy

ಈ ಬಗ್ಗೆ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ , ಅವರದೇ ಒರಿಜಿನಲ್‌ ಅಂತಾ ಬೋರ್ಡ್‌ ಹಾಕಿಕೊಳ್ಳಲಿ, ಅವರನ್ನು ಬೇಡ ಅಂದಿರೋರು ಯಾರು, ಅವರನ್ನು ಹಿಡ್ಕೊಂಡಿರೋರು ಯಾರು? ಉಚ್ಛಾಟನೆ ಮಾಡಿಕೊಳ್ಳಲಿ, ಅವರು ಫ್ರೀ ಇದಾರೆ ಏನ್‌ ಬೇಕಾದ್ರೂ ಮಾಡ್ಕೋಬಹುದು. ಅದು ಅವರಿಗೆ ಬಿಟ್ಟಿದ್ದು. ಅವರ ಮಾತನ್ನೆಲ್ಲಾ ಗಂಭೀರವಾಗಿ ಯಾಕೆ ತಗೋತಿರಿ? ಅಂದಿದ್ದಾರೆ.

Tags: FEATUREDJDSKumaraswamy
ShareTweetSendShare

Discussion about this post

Related News

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

Uttarkashi Tunnel Collapse : ಯಾವುದೇ ಕ್ಷಣದಲ್ಲಿ ಸಿಹಿ ಸುದ್ದಿ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ  

ಪದ್ಮನಾಭನಗರದ ಬಿಜೆಪಿ ನಾಯಕ ಅಶೋಕ್ ಗೆ (R Ashok) ಪ್ರತಿಪಕ್ಷ ಸ್ಥಾನ : ಮತ್ತೆ ಎಡವಿತೇ ಬಿಜೆಪಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್