ಸಿದ್ದರಾಮಯ್ಯ, ಬೊಮ್ಮಾಯಿ, ಕುಮಾರಸ್ವಾಮಿ ಹೀಗೆ ಸಾಲು ಸಾಲು ರಾಜಕಾರಣಿಗಳಿಗೆ ಈ ಅಧಿಕಾರಿ Bhanwar Singh Meena ಆದರ್ಶವೇ ಸರಿ
ಕೊಡಗು : ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ ಅಂದ್ರೆ ಸರ್ಕಾರಿ ಅಧಿಕಾರಿ ಮತ್ತು ಸರ್ಕಾರ ನಡೆಸುವವರಿಗೆ ಅಂದ್ರೆ ರಾಜಕಾರಣಿಗಳಿಗೆ ಅಸಡ್ಡೆ. ಕೊರೋನಾ ಬಂದ ಸಂದರ್ಭದಲ್ಲಿ ಅದ್ಯಾವ ರಾಜಕಾರಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಹೇಳಿ. ಅನಾರೋಗ್ಯ ಅಂದಾಗ ಅದ್ಯಾವ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ.( Bhanwar Singh Meena)
ಈ ನಡುವೆ ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ( Chief Executive Officer,ZP,Kodagu) ಭನ್ವರ್ ಸಿಂಗ್ ಮೀನಾ ( Bhanwar Singh Meena) ಅವರ ಪತ್ನಿ ಕನಿಷ್ಕಾ ಮೀನಾ ಜಿಲ್ಲಾ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಕನಿಷ್ಥಾ ಮೀನಾ ಗಂಡು ಮಗುವಿನ ತಾಯಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ 8.56ಕ್ಕೆ ಶಸ್ತ್ರಚಿಕಿತ್ಸೆ ನಡೆದಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ : rajkumar takale : ಕಾಂಗ್ರೆಸ್ ನಾಯಕಿಯ ಪ್ರೇಮ ಪ್ರಕರಣ : ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ಸೋಮಶೇಖರ್, ಶಸ್ತ್ರಚಿಕಿತ್ಸೆ ನಡೆಸಿದ್ದು, ಹೆರಿಗೆ ಸಂಬಂಧಿಸಿದಂತೆ ತಪಾಸಣೆ, ಔಷಧ ಎಲ್ಲವನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಭನ್ವರ್ ಸಿಂಗ್ ಮೀನಾ ತಮ್ಮ ಪತ್ನಿಯ ಗರ್ಭಿಣಿ ತಪಾಸಣೆಯನ್ನು ಕೂಡಾ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಸಿದ್ದರು,
ಈ ನಡುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕೊಡಗು ಜಿಪಂ ಸಿಇಒ ಭನ್ವರ್ ಸಿಂಗ್ ಮೀನಾ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಲಿಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಯಲ್ಲೂ ನುರಿತ ವೈದ್ಯರ ತಂಡವಿದೆ, ನಾವಂತು ಮೊದಲಿನಿಂದಲೂ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವು, ಇನ್ನು ಮುಂದೆಯೂ ಸರ್ಕಾರಿ ಆಸ್ಪತ್ರೆಯಲ್ಲೇ ಟ್ರೀಟ್ ಮೆಂಟ್ ಪಡೆಯುತ್ತೇವೆ ಅಂದಿದ್ದಾರೆ.
Child Incident : ಮಹಡಿಯಿಂದ ಮಗು ಎಸೆದ ತಾಯಿ : ಕ್ರೂರಿ ತಾಯಿಯ ಅಸಲಿ ಕತೆ ಇಲ್ಲಿದೆ
ಮಕ್ಕಳಿರಲಿ ಮನೆ ತುಂಬಾ ಅನ್ನೋದು ಹಿರಿಯರ ಮಾತು. ಕೆಟ್ಟ ಮಗನಿರುತ್ತಾನೆ ಆದರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋದು ಲೋಕದ ಮಾತು. Child Incident
ಆದರೆ ಕಲಿಯುಗದಲ್ಲಿ ಈ ಮಾತುಗಳಿಗೆಲ್ಲಾ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ಘಟನೆಗಳನ್ನು ಗಮನಿಸಿದರೆ ಕಲಿಯುಗ ಅಂತ್ಯವಾಗುತ್ತಿದೆಯೇ ಅನ್ನಿಸುತ್ತಿದೆ.ಯಾಕಂದ್ರೆ ಬರೀ ಅಧರ್ಮದ ಸುದ್ದಿಯೇ ಕೇಳಿ ಬರುತ್ತಿದೆ. Child Incident
ಈ ನಡುವೆ ತಾನೇ ಹೆತ್ತ ಮಗುವನ್ನು ತಾಯಿಯೇ ಕ್ರೂರವಾಗಿ ಕೊಂದ ಘಟನೆ (Child Incident) ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಇದೀಗ ಈ ಘಟನೆ ಬಗ್ಗೆ ಮತ್ತಷ್ಟು Updateಗಳು ಸಿಕ್ಕಿದೆ.
ಮಗುವನ್ನು ಕೊಂದ ಸುಷ್ಮಾ SR ನಗರದ ಕಿರಣ್ ಅವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಇವರಿಬ್ಬರೂ ಲಂಡನ್ ನಲ್ಲಿ ನೆಲೆಸಿದ್ದರು.ಹಲವು ವರ್ಷಗಳ ಕಾಲ ಇವರಿಗೆ ಸಂತಾನವಾಗಿರಲಿಲ್ಲ. ಹಾಗೇ ಬೆಂಗಳೂರಿಗೆ ಮರಳಿ ಅವರಿಗೆ 4 ವರ್ಷಗಳ ಹಿಂದೆ ಸಂತಾನ ಭಾಗ್ಯವಾಗಿತ್ತು.
ಇದನ್ನೂ ಓದಿ : police transfer : ಅಮಿತ್ ಶಾ ರಾಜ್ಯ ಭೇಟಿಯ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ
ಆದರೆ ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಮಗು ಬುದ್ದಿಮಾಂದ್ಯ ಅನ್ನುವುದು ಗೊತ್ತಾಗಿದೆ.ಹೀಗಾಗಿ ಸುಷ್ಮಾ ಖಿನ್ನತೆಗೆ ಒಳಗಾಗಿದ್ದಳಂತೆ. 24 ಗಂಟೆಯೂ ಮಗುವಿನ ಮೇಲೆ ನಿಗಾ ಬೇರೆ ವಹಿಸಬೇಕಾಗಿತ್ತು. ಇದೇ ಕಾರಣಕ್ಕಾಗಿ ಕೆಲ ತಿಂಗಳ ಹಿಂದೆ ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಕಿರಣ್ ಮಗುವನ್ನು ಕರೆದುಕೊಂಡು ಬಂದಿದ್ದರು.
ಮೊದಲಿಗೆ ಮಹಡಿಯಿಂದ ಬಿದ್ದು ಮಗು ಮೃತಪಟ್ಟಿದೆ ಎಂದೇ ಭಾವಿಸಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ವೇಳೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಮೊದಲಿಗೆ ಪೊಲೀಸರನ್ನೂ ದಾರಿ ತಪ್ಪಿಸಲು ಸುಷ್ಮಾ ಯತ್ನಿಸಿದ್ದಾಳೆ ಆದರೆ ನೌಟಂಕಿ ಆಟ ಪೊಲೀಸರಿಗೆ ಗೊತ್ತಾಗಿದೆ. ಇದೀಗ ಸುಷ್ಮಾ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದ್ದು, ಕೊಲೆಗಾರ್ತಿ ಪೊಲೀಸರಿಗೆ ಶರಣಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Discussion about this post