ಕರ್ನಾಟಕ ವಾಣಿಜ್ಯ ಮಂಡಳಿಗೆ ರಾಷ್ಟ್ರಪ್ರಶಸ್ತಿ ಪಡೆದ ಕಲಾವಿದನ ನೆನಪಿಲ್ಲದಿರಬಹುದು, ಆದರೆ ಅವರ ಆತ್ಮೀಯರ ಪಾಲಿಗೆ ಸಂಚಾರಿ ವಿಜಯ್ ಸದಾ ನೆನಪಿರುತ್ತಾರೆ. ನಿಜಕ್ಕೂ ವಾಣಿಜ್ಯ ಮಂಡಳಿ ಬಗ್ಗೆ ಕನ್ನಡಿಗರು ಗೌರವ ಇಟ್ಟುಕೊಂಡಿದ್ದರು. ಆದರೆ ಯಾವಾಗ ಸಂಚಾರಿ ವಿಜಯ್ ಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲಿ ಲೋಪ ಎಸಗಿದೋ ಇರೋ ಗೌರವವನ್ನು ಅದು ಕಳೆದುಕೊಂಡಿತು.
ಈ ನಡುವೆ ಸ್ನೇಹಿತನ ಅಗಲಿಕೆಯಿಂದ ನೊಂದಿರುವ ನೀನಾಸಂ ಸತೀಶ್, ಈ ಬಾರಿ ಹುಟ್ಟು ಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ನೋವಿನಲ್ಲಿ ಸಂಭ್ರಮಿಸುವ ಮನಸ್ಥಿತಿ ನನ್ನದಲ್ಲ. ಹೀಗಾಗಿ ಪೆಟ್ರೋಮ್ಯಾಕ್ಸ್ ಟೀಸರ್ ಬಿಡುಗಡೆಯನ್ನೂ ಮುಂದೂಡಿದ್ದೇವೆ ಅಂದಿದ್ದಾರೆ.
ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಸತೀಶ್ ನೀನಾಸಂ ಅವರಿಗೆ ಹರಿಪ್ರಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ.
Discussion about this post