ಅಪಘಾತದ ಭೀಕರತೆ ( tamil nadu bus accident) ಎಷ್ಟಿತ್ತು ಅಂದ್ರೆ ಸೀಟ್ ನಲ್ಲಿ ಕೂತಿದ್ದ ಮಂದಿ ಕೂತಲ್ಲೇ ಜಜ್ಜಿದ ಪರಿಣಾಮ ಮೃತಪಟ್ಟಿದ್ದಾರೆ
HIGHLIGHTS
- ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್
- ದುರ್ಘಟನೆಯಲ್ಲಿ ಆರು ಮಂದಿ ಸಾವು 10 ಮಂದಿಗೆ ಗಾಯ
- ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಚೆನೈ : ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್ ( Tamil Nadu State Transport Corporation -TNSTC) ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಮಾಯಕ ಆರು ಜೀವಗಳು ಶುಕ್ರವಾರ ಪ್ರಾಣ ಕಳೆದುಕೊಂಡಿದೆ. ಶುಕ್ರವಾರ ಮುಂಜಾನೆ ( JULY 8 ) ಚೆನೈ ( Chennai) ನಿಂದ ಚಿದಂಬರಂಗೆ ( Chidambaram )ಹೊರಟಿದ್ದ ಬಸ್ ನಲ್ಲಿ ಒಟ್ಟು 50 ಜನ ಪ್ರಯಾಣಿಕರಿದ್ದರು. ಚೆನೈ – ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ( Chennai-Trichy National Highway ) ಸಾಗುತ್ತಿದ್ದ ಬಸ್ ಚೆಂಗಲಪಟ್ಟು ಜಿಲ್ಲೆಯ ಆಚರಪಕ್ಕಂ ತಲುಪುತ್ತಿದ್ದಂತೆ ಬಸ್ ಚಾಲಕ ಎದುರುಗಡೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಿದ್ದಾನೆ. ಈ ವೇಳೆ ಚಾಲಕನ ತಪ್ಪು ನಿರ್ಧಾರದಿಂದ ಎಡ ಭಾಗ ಸಂಪೂರ್ಣವಾಗಿ ಲಾರಿಗೆ ಉಜ್ಜಿಕೊಂಡು ಹೋಗಿದೆ.
ಇದನ್ನೂ ಓದಿ : Dharmasthala veerendra hegde : ಧರ್ಮಸ್ಥಳಕ್ಕೆ ಶಾಸನ ಸಭೆ ಹೊಸದಲ್ಲ : ವೀರೇಂದ್ರ ಹೆಗ್ಗಡೆ ತಂದೆ ತಾತ ಕೂಡಾ ಶಾಸಕರಾಗಿದ್ದರು
ಲಾರಿಯಲ್ಲಿ ಕಬ್ಬಿಣದ ಸರಳುಗಳಿದ್ದ ಕಾರಣ, ವೇಗವಾಗಿ ಬಸ್ ನುಗ್ಗಿದ ಪರಿಣಾಮ ಸರಳುಗಳು ಬಸ್ ನೊಳಗೆ ತೂರಿಕೊಂಡಿದೆ. ಅಪಘಾತದ ಪರಿಣಾಮ ( tamil nadu bus accident ) ಹೇಗಿತ್ತು ಅಂದ್ರೆ ಬಸ್ ನ ಎಡ ಭಾಗವೇ ಭಾಗವೇ ಕಿತ್ತುಕೊಂಡು ಹೋಗಿದೆ. ಮಾತ್ರವಲ್ಲದೆ ಅನೇಕ ಪ್ರಯಾಣಿಕರ ದೇಹಗಳು ನಜ್ಜುಗುಜ್ಜಾಗಿದೆ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಂಬ್ಯುಲೆನ್ಸ್ ಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಡಿಕ್ಕಿ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. 10 ಮಂದಿಗೆ ಗಾಯವಾಗಿದ್ದು, ಆ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇದೀಗ ಗಾಯಗೊಂಡ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ನ್ಯಾಷನಲ್ ಬಸ್ ಪಲ್ಟಿ : 10 ಮಂದಿಗೆ ಗಾಯ
ಮುಂಬೈಗೆ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಅಪಘಾತದ ( national travels bus accident ) ಬೆನ್ನಲ್ಲೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ : ಬೆಂಗಳೂರಿನಿಂದ ಮುಂಬೈ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 10 ಮಂದಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಗುಚಿ ಬಿದ್ದಿದೆ.
ಇದನ್ನೂ ಓದಿ : national travels bus accident : ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ನ್ಯಾಷನಲ್ ಬಸ್ ಪಲ್ಟಿ : 10 ಮಂದಿಗೆ ಗಾಯ
ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಈ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು ಎಂದು ಗೊತ್ತಾಗಿದೆ. ಈ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಅನ್ನಲಾಗಿದೆ. ಬಸ್ ಪಲ್ಟಿಯಾಗಿ ರಸ್ತೆ ಪಕ್ಕಕ್ಕೆ ಬಿದ್ದ ಕಾರಣ ಬಸ್ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟ ಅನ್ನುವಂತೆ 10 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಗೊಂಡವರನ್ನು ಬ್ಯಾಡಗಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post