ನೂಪುರ್ ಶರ್ಮಾ ವಿಚಾರದಲ್ಲಿ ಸುಪ್ರೀಂಕೋರ್ಟ್ ( supreme court ) ನ್ಯಾಯಾಧೀಶರು ಆಡಿದ ಮಾತು ಆಕ್ಷೇಪಕ್ಕೆ ಕಾರಣವಾಗಿದೆ. ಇದೀಗ ನಿವೃತ ನ್ಯಾಯಾಧೀಶರು, ನಿವೃತ ಅಧಿಕಾರಿಗಳೇ ಈ ಬಗ್ಗೆ ದನಿ ಎತ್ತಿದ್ದಾರೆ
ನವದೆಹಲಿ : ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ( supreme court ) ಆಡಿದ ಮಾತು ಇದೀಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅವರಿಂದಲೇ ದೇಶಕ್ಕೆ ಬೆಂಕಿ ಬಿತ್ತು ಅನ್ನುವ ಸುಪ್ರೀಂಕೋರ್ಟ್ ಹೇಳಿಕೆ ವಿರುದ್ಧ ಇದೀಗ 15 ನಿವೃತ ನ್ಯಾಯಾಧೀಶರು ಸೇರಿ 77 ನಿವೃತ ಐಎಎಸ್ ಅಧಿಕಾರಿಗಳು, 25 ನಿವೃತ ಸೇನಾಧಿಕಾರಿಗಳು ಸುಪ್ರೀಂಕೋರ್ಟ್ ಗೆ ಬಹಿರಂಗ ಪತ್ರ ಬರೆದಿದ್ದಾರೆ.
ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆಯಿಂದಲೇ ದೇಶದಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದೆ. ಇದಕ್ಕೆ ಅವರೇ ಏಕಾಂಗಿ ಹೊಣೆ, ಅವರಿಂದಲೇ ದೇಶಕ್ಕೆ ಬೆಂಕಿ ಬಿತ್ತು ಅನ್ನುವ ಮಾತನ್ನು ನೂಪುರ್ ಶರ್ಮಾ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿತ್ತು. ದ್ವಿಸದಸ್ಯ ಪೀಠದ ಅಭಿಪ್ರಾಯ ನ್ಯಾಯಾಲಯ ತನ್ನ ಲಕ್ಷ್ಮಣ ರೇಖೆ ಮೀರಿದ ವರ್ತನೆ ಎಂದು ಬಹಿರಂಗ ಪತ್ರ ಬರೆದಿರುವ ಗಣ್ಯರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : PSI Anita Lakshmi : ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡಿತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ
ಸುಪ್ರೀಂಕೋರ್ಟ್ ನ ನಡೆ ಕಳವಳಕಾರಿಯಾಗಿದ್ದು, ಸ್ವಾಗತಾರ್ಹವಲ್ಲ ಎಂದು ಪತ್ರದಲ್ಲಿ ಹೇಳಲಾಗಿದ್ದು, ಇಂಥ ಅಭಿಪ್ರಾಯ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಾಂಗದ ಮೇಲೆ ಗಾಯದ ಗುರುತು ಮೂಡಿಸುತ್ತದೆ. ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವ ಮಾಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಪಾರ್ಸೆಲ್ ವಿಚಾರಕ್ಕೆ ಡಾಬಾ ಪುಡಿ ಮಾಡಿದ ಪ್ರೊಬೆಷನರಿ ಪಿಎಸ್ಐ : ಗದಗದಲ್ಲೊಂದು ಅಮಾನವೀಯ ಘಟನೆ
ಈ ಪತ್ರಕ್ಕೆ ಬಾಂಬ್ ಹೈಕೋರ್ಟ್ ನಿವೃತ ನ್ಯಾಯಾಧೀಶರಾದ ನ್ಯಾ. ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ನ ನ್ಯಾ. ಎಸ್.ಎಂ. ಸೋನಿ, ರಾಜಸ್ಥಾನ ಹೈಕೋರ್ಟ್ ನ ನ್ಯಾ. ಎಸ್.ಎನ್. ಧಿಂಗ್ರಾ, ನಿವೃತ ಐಪಿಎಸ್ ಅಧಿಕಾರಿಗಳಾದ ಆರ್.ಎಸ್. ಗೋಪಾಲನ್, ಎಸ್. ಕೃಷ್ಣಕುಮಾರ್, ನಿವೃತ ಡಿಜಿಪಿಗಳಾದ ಎಸ್.ಪಿ. ವೈದ್, ಬಿಎಲ್ ವೋಹ್ರಾ, ನಿವೃತ ಸೇನಾಧಿಕಾರಿಗಳಾದ ಲೆ.ಜ. ವಿ.ಕೆ ಚತುರ್ವೇದಿ, ನಿವೃತ ಏರ್ ಮಾರ್ಷಲ್ ಎಸ್.ಪಿ. ಸಿಂಗ್ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ.
Discussion about this post