ಮಹಾಮನೆಯ ಯಾತ್ರೆ ಮುಗಿಸಿ ಬಂದ ಅನೇಕರ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು. ಬೀಪ್ ಮತ್ತು ಫಿಂಗರ್ ಖ್ಯಾತಿಯ ಚಂದ್ರಚೂಡ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಜನರ ಕೈಯಿಂದ ಉಗಿಸಿಕೊಂಡಿದ್ದರು. ವಿನ್ನರ್ ಮಂಜು ಇನ್ನೂ ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಅರವಿಂದ್ ಮತ್ತೆ ಟ್ರ್ಯಾಕ್ ಗೆ ಮರಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕರ ಪತ್ತೆಯೇ ಇಲ್ಲ.
ಈ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಅತ್ಯಂತ ತಾಳ್ಮೆಯಿಂದ ಆಟವಾಡಿ ಪ್ರೇಕ್ಷಕರ ಮನಗೆದ್ದ ನಟಿ ವೈಷ್ಣವಿ ಸಾರಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು, ಸೀರೆಲಿ ಹುಡುಗಿರ ನೋಡ್ಲೆ ಬಾರ್ದು ಸಾಲುಗಳನ್ನು ಮತ್ತೆ ನೆನಪಿಸುವಂತೆ ಮಾಡಿದ್ದಾರೆ.
![vaishnavi1](https://torrentspree.com/wp-content/uploads/2021/08/vaishnavi1.jpg)
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ರಾಣಿ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿರುವ ವೈಷ್ಣವಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ನು ವೈಷ್ಣವಿ ಪೋಟೋಶೂಟ್ ಗಾಗಿ ಉಟ್ಟಿರೋ ಸೀರೆ ಕೂಡ ವಿಶೇಷವಾಗಿದ್ದು, ಇದರಲ್ಲಿ ಕಲಾವಿದರ ಕೈಚಳಕದಿಂದ ಸೆರಗಿನಲ್ಲಿ ರಾಮಾಯಣವನ್ನು ಬಿಂಬಿಸುವ ರಾಮ,ಸೀತೆ,ಆಂಜನೇಯ, ಸೀತಾಪಹರಣದ ದೃಶ್ಯಗಳು ನೇಯಲ್ಪಟ್ಟಿವೆ.
![vaishnavi](https://torrentspree.com/wp-content/uploads/2021/08/vaishnavi.jpg)
Discussion about this post