ವಾರಾಣಸಿ : ಜಪಾನಿಯರ ನೆರವಿನಿಂದ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಭಾ ಕೇಂದ್ರ ‘ರುದ್ರಾಕ್ಷ’ ವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದಾರೆ.
ತಮ್ಮದೇ ಲೋಕಸಭಾ ಕ್ಷೇತ್ರವಾಗಿರುವ ಕಾಶಿಗೆ ಗುರುವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ರುದ್ರಾಕ್ಷವನ್ನು ಉದ್ಘಾಟಿಸುವುದುರ ಜೊತೆಗೆ ₹1,500 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಈ ಯೋಜನೆಗಳ ಪೈಕಿ ಬನಾರಸ್ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಬೆಡ್ಗಳಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ(ಬಿಎಚ್ಯು), ಬಹು ಹಂತದ ಪಾರ್ಕಿಂಗ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಮತ್ತು ಪ್ರವಾಸೋದ್ಯಮದ ಯೋಜನೆಗಳು ಸೇರಿವೆ.
ತಾವು ಕಾಶಿಗೆ ಹೊರಡುವ ಮುನ್ನ ಟ್ವೀಟ್ ಮಾಡಿದ್ದ ನರೇಂದ್ರ ಮೋದಿ ಸುಮಾರು ₹1,500 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ಈ ಯೋಜನೆಗಳಿಂದ ಕಾಶಿ ಮತ್ತು ಪೂರ್ವಾಂಚಲದ ಜನರ ಬದುಕು ಮತ್ತಷ್ಟು ಸುಲಭವಾಗಲಿದೆ ಎಂದು ಹೇಳಿದ್ದರು.
Discussion about this post