Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

kerala lottery : ಮೊದಲ ಬಹುಮಾನ 25 ಕೋಟಿ ರೂಪಾಯಿ :  ಕಮ್ಯುನಿಸ್ಟ್ ಸರ್ಕಾರದಿಂದ ಲಾಟರಿ ಪ್ರಿಯರಿಗೆ ಬಂಪರ್

Radhakrishna Anegundi by Radhakrishna Anegundi
July 13, 2022
in ಟ್ರೆಂಡಿಂಗ್
kerala lottery
Share on FacebookShare on TwitterWhatsAppTelegram

ಲಾಟರಿಯಿಂದ ಜನ ಸಾಮಾನ್ಯರು ಬೀದಿ ಪಾಲಾಗುತ್ತಾರೆ. ಅದರಲ್ಲಿ ಕಾರ್ಮಿಕರದ್ದು ಸಿಂಹ ಪಾಲು. ಆದರೆ ಕಾರ್ಮಿಕರ ಬಗ್ಗೆ ಮಾತನಾಡುವ ಕಮ್ಯುನಿಸ್ಟ್ ಸರ್ಕಾರ ಲಾಟರಿಯ ( kerala lottery ) ಬೆಂಬಲಕ್ಕೆ ನಿಂತಿದೆ

ಕೇರಳ :  ಈ ಬಾರಿ ಕೇರಳ ಸರ್ಕಾರ ಓಣಂ ಲಾಟರಿ ಭರ್ಜರಿಯಾಗಿ ಮಾರಾಟವಾಗುವುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಪಿಣರಾಯಿ ಸರ್ಕಾರಿ ಕೋಟಿ ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಅಷ್ಟೇ ಯಾಕೆ ಈ ಬಾರಿ ಓಣಂನಲ್ಲಿ ವಿಜೇತರೆಲ್ಲರೂ ಕೋಟ್ಯಧಿಪತಿಗಳಾಗಲಿದ್ದಾರೆ. ( kerala lottery ) ( ಕೋಟಿ ಆಸೆಗೆ ಬಿದ್ದು ರಾಶಿ ರಾಶಿ ಟಿಕೆಟ್ ಖರೀದಿಸಿ ಬಹುಮಾನ ಬಾರದಿದ್ರೆ ಅವರು ಯಾವುದರ ಅಧಿಪತಿ ಆಗಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟ ವಿಚಾರ.)

ಕೇರಳ ರಾಜ್ಯ ಲಾಟರಿ ಇಲಾಖೆ ಓಣಂ 2022ರ ಬಂಪರ್ ಲಾಟರಿ ಯೋಜನೆಯೊಂದನ್ನು ಸರ್ಕಾರದ ಮುಂದಿಟ್ಟಿತ್ತು. ಇದೀಗ ಅದಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದ್ದು, ಕೋಟಿ ಕೋಟಿ ಮೊತ್ತದ ಟಿಕೆಟ್ ಜುಲೈ 18 ರಿಂದ ಮಾರುಕಟ್ಟೆಯಲ್ಲಿ ಸಿಗಲಿದೆ.

ಇದನ್ನೂ ಓದಿ : kl rahul marriage ಅಕ್ಟೋಬರ್ ತಿಂಗಳಲ್ಲಿ ಕೆ.ಎಲ್. ರಾಹುಲ್ – ಆಥಿಯಾ ವಿವಾಹ

ಈ ಬಾರಿ ಪ್ರಥಮ ಬಹುಮಾನ 25 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದ್ದು, ದ್ವೀತಿಯ ಬಹುಮಾನ 5 ಕೋಟಿ, ಮತ್ತು ತಲಾ 1 ಕೋಟಿ 10 ತೃತೀಯ ಬಹುಮಾನ ನಿಗದಿಗೊಳಿಸಲಾಗಿದೆ. ಹೀಗಾಗಿ ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ ಇದಾಗಿದೆ. ಕಳೆದ 4 ವರ್ಷಗಳಿಂದ ಓಣಂ ಸಂದರ್ಭದ ಲಾಟರಿಯ ಮೊದಲ ಬಹುಮಾನವಾಗಿ 12 ಕೋಟಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 25 ಕೋಟಿಗೆ ಏರಿಸಲಾಗಿದೆ.

ಈ ಕಾರಣದಿಂದ ಕಳೆದ ವರ್ಷ 300 ರೂಪಾಯಿ ಇದ್ದ ಟಿಕೆಟ್ ಬೆಲೆ ಈ ಬಾರಿ 500 ರೂಪಾಯಿಗೆ ಏರಲಿದೆ. ಸಪ್ಟಂಬರ್ 18 ರಂದು ಈ ಟಿಕೆಟ್ ನ ಡ್ರಾ ನಡೆಯಲಿದೆ. 25 ಕೋಟಿ ರೂಪಾಯಿ ವಿಜೇತರು 15.75 ಕೋಟಿ ರೂಪಾಯಿ ಹಣವನ್ನು ಮನೆಗೆ ಒಯ್ಯಲಿದ್ದಾರೆ. ಅಷ್ಟು ಮಾತ್ರವಲ್ಲದೆ  ಮೊದಲ ಬಹುಮಾನ ಪಡೆಯುವ ಟಿಕೆಟ್ ಮಾರಿದ ಎಜೆಂಟ್ ಗೆ 2.5 ಕೋಟಿ ರೂಪಾಯಿ ಕಮಿಷನ್ ಸಿಗಲಿದೆ.

ಇದನ್ನೂ ಓದಿ : actor shivaranjan : ಶೃತಿ ಜೊತೆ ನಟಿಸಿದ್ದ ನಟನ ಮೇಲೆ ಗುಂಡಿನ ದಾಳಿ : ಅಪಾಯದಿಂದ ಪಾರಾದ ಶಿವರಂಜನ್

ಸಚಿವ ಸೋಮಣ್ಣ ಬೆಂಬಲಿಗರ ಗೂಂಡಾಗಿರಿ : ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

ಭ್ರಷ್ಟಾಚಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಸಚಿವ ಸೋಮಣ್ಣ ಬೆಂಬಲಿಗರು ಪೊಲೀಸರ ಮುಂದೆಯೇ ಹಲ್ಲೆ ನಡೆಸಿದ್ದಾರೆ

ಬೆಂಗಳೂರು : ರಾಜಕಾರಣಿಗಳು ತಮ್ಮ ಬೆಂಬಲಿಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಇಂದು ಸಾಕ್ಷಿಯಾಗಿದ್ದು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಅನಧಿಕೃತ ಹೋಲ್ಡಿಂಗ್ ವಿರುದ್ದ KRS Party ಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಸಚಿವ ಸೋಮಣ್ಣ ಅವರ ಕಟೌಟ್ ಅನ್ನು ತಕ್ಷಣ ತೆಗೆಸಬೇಕು ಮತ್ತು ಅದನ್ನು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವುದು ಅವರ ಆಗ್ರಹವಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಇದೇ ವಿಷಯದಲ್ಲಿ ವಾಗ್ವಾದ ಕೂಡಾ ನಡೆದಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರವಾಗುತ್ತಿತ್ತು.

ಹೀಗೆಲ್ಲಾ ಬೇಕಾಬಿಟ್ಟಿ ಕಟೌಟ್, ಹೋಲ್ಡಿಂಗ್ ಹಾಕುವುದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದ ಸಚಿವ ಸೋಮಣ್ಣ ಬೆಂಬಲಿಗರು KRS Partyಯ ಪ್ರತಿಭಟನಕಾರರ ಮೇಲೆ ಮುಗಿ ಬಿದ್ದಿದ್ದಾರೆ. ಮಾತಿನ ಚಕಮಕಿಯೂ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.

ಆದರೆ ಎಲ್ಲವೂ ಮುಗಿಯಿತು ಅನ್ನುವ ಹೊತ್ತಿಗೆ ಸೋಮಣ್ಣ ಅವರ ಕೆಲ ಬೆಂಬಲಿಗರು ಹಳದಿ ಬಣ್ಣ ಟೀ ಶರ್ಟ್ ಧರಿಸಿದ್ದ ಕೆ ಆರ್ ಎಸ್ ಪಾರ್ಟಿಯ ಸದಸ್ಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಿದೆ.

ಇನ್ನು ಈ ಘಟನೆ ಕುರಿತಂತೆ ಕೆ ಆರ್ ಎಸ್ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಚಿವ ,ಸೋಮಣ್ಣ ಬೆಂಬಲಿಗರ ಗೂಂಡಾಗಿರಿ, ಪೊಲೀಸರು ಕೂಡಾ ನಮ್ಮ ಸಹಾಯಕ್ಕೆ ಬರಲಿಲ್ಲ. ಹಾಗಂತ ನಾವು ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ, ಹೋರಾಟ ಮುಂದುವರಿಯುತ್ತದೆ ಅಂದಿದ್ದಾರೆ.

Tags: FEATURED
ShareTweetSendShare

Discussion about this post

Related News

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

sanath krishna muliya project-cheetah-puttur-veterinarian-travelled-with-big-cats-from-namibia

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

belagavi leopard : ಚಿರತೆ ಹಿಡಿಯಲು ಮೂತ್ರ ತಂದ ಅರಣ್ಯಾಧಿಕಾರಿಗಳು : ಹನಿ ಟ್ರ್ಯಾಪ್ ತಂತ್ರಕ್ಕೆ ಬಕ್ರ ಆಗುತ್ತಾ…

Tumakuru : ಮುಂಜಿಗೆ ಹೆದರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋದ ಅರ್ಚಕ ವಾಪಾಸ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Independence day : ವಿಧಾನಸೌಧದ ಮೇಲೆ ಧ್ವಜ ಹಾರಿಸುವವರ ಬಗ್ಗೆ ನಿಮಗೆಷ್ಟು ಗೊತ್ತು…

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್