ಸಿನಿಮಾಕ್ಕಿಂತಲೂ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದವರು ನಟಿ ಪ್ರಣೀತಾ ಸುಭಾಷ್. ಸರ್ಕಾರಿ ಸಾಲೆ ದತ್ತು, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ, ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿ ಸೇರಿದಂತೆ ಅನೇಕ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡಿರುವ ಪ್ರಣೀತಾ ಇದೀಗ ಸಪ್ತಪದಿ ತುಳಿದಿದ್ದಾರೆ.
ಲಾಕ್ ಡೌನ್ ನಡುವೆಯೇ ಕನಕಪುರದ ರೆಸಾರ್ಟ್ ಒಂದರಲ್ಲಿ ವಿವಾಹ ಕಾರ್ಯ ನೆರವೇರಿದ್ದು, ಕೇವಲ ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದರು. ಲಾಕ್ ಡೌನ್ ನಿಯಮಗಳ ಹಿನ್ನಲೆಯಲ್ಲಿ ಆಪ್ತ ಸ್ನೇಹಿತ ಬಳಗಕ್ಕೂ ಆಹ್ವಾನವಿರಲಿಲ್ಲ.
ಈ ನಡುವೆ ಪ್ರಣೀತಾ ಕೈ ಹಿಡಿದ ಹುಡುಗ ನಿತಿನ್ ರಾಜ್ ವೇಗ ಸಿಟಿ ಮಾಲ್ ಮಾಲೀಕರಾಗಿದ್ದು, ಇದರೆ ಉದ್ಯಮಗಳನ್ನು ಕೂಡಾ ನಡೆಸುತ್ತಿದ್ದಾರೆ. ಕೋಟ್ಯಾಧಿಪತಿಯಾಗಿರುವ ಇವರಿಗೂ ಸಾಕಷ್ಟು ಬಂಧು ಬಳಗ, ಸ್ನೇಹಿತರಿದ್ದಾರೆ. ಹೀಗಾಗಿ ಕೊರೋನಾ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಅದ್ದೂರಿ ರಿಸೆಪ್ಸನ್ ಇಟ್ಟುಕೊಳ್ಳಲಾಗುತ್ತದೆಯಂತೆ.
Discussion about this post